ಅಡೂರು ಜನತೆಯ ಮೂಲ ದಾಖಲೆಗಳೇ ನಾಪತ್ತೆ!


Team Udayavani, Jan 14, 2019, 4:20 AM IST

14-january-1.jpg

ಸುಳ್ಯ : ಸರಕಾರದ ಯಾವುದೇ ಸವಲತ್ತು ಪಡೆಯಬೇಕಿದ್ದರೂ ಮೂಲ ದಾಖಲೆ ಪತ್ರಗಳು ಬೇಕು. ಆದರೆ ಅದು ಎಲ್ಲಿದೆ ಎನ್ನುವುದೇ ಇವರಿಗೆ ಗೊತ್ತಿಲ್ಲ. ಕೇರಳ- ಕರ್ನಾಟಕದ ಗಡಿಭಾಗ ಅಡೂರು ಗ್ರಾಮದ 500ಕ್ಕೂ ಅಧಿಕ ಕುಟುಂಬಗಳು ಇಂದಿಗೂ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. ಗ್ರಾಮದವರ ಮೂಲ ದಾಖಲೆ ಪತ್ರಗಳೇ ನಾಪತ್ತೆಯಾಗಿವೆ!

ಅಡೂರು ಗ್ರಾಮವು ಮೂಲತಃ ಕರ್ನಾಟಕ ರಾಜ್ಯದಲ್ಲಿತ್ತು. ಪ್ರಾಂತ್ಯವಾರು ವಿಭಜನೆಯ ಅನಂತರ ಕೇರಳ ರಾಜ್ಯಕ್ಕೆ ಸೇರ್ಪಡೆಗೊಂಡಿತ್ತು. 1951ರ ಸುಮಾರಿಗೆ ಅಡೂರು ಗ್ರಾಮದ ಎಲ್ಲ ಜಮೀನಿನ ದಾಖಲೆಗಳು ಕರ್ನಾಟಕದಲ್ಲೇ ಇದ್ದವು. ಈ ಗ್ರಾಮವು ಪುತ್ತೂರು ತಾಲೂಕಿನ ಅಧೀನಕ್ಕೆ ಒಳಪಟ್ಟಿತ್ತು. ಅನಂತರ ಸುಳ್ಯ ತಾಲೂಕು ರಚನೆಯಾದಾಗ ಅಡೂರು ಕೇರಳ ರಾಜ್ಯಕ್ಕೆ ಸೇರ್ಪಡೆಗೊಂಡಿತ್ತು. ಆದರೆ ಮೂಲ ದಾಖಲೆಗಳು ಸುಳ್ಯ ತಾಲೂಕು ಕಚೇರಿ ಹಾಗೂ ಉಪನೊಂದಣಾಧಿಕಾರಿಯವರ ಕಚೇರಿಯಲ್ಲಿ ಬಾಕಿಯಾಗಿದ್ದವು.

ಸ್ಪಷ್ಟ ಮಾಹಿತಿಯೇ ಇಲ್ಲ!
ಇದರಿಂದ ಅಡೂರು ಗ್ರಾಮದ ಕೆಲವು ಗ್ರಾಮಸ್ಥರಿಗೆ ತಮ್ಮ ಜಮೀನಿನ ದಾಖಲೆಗಳಿಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಮೂಲ ಜಮೀನು ದಾಖಲೆಗಳು, ಮಂಜೂರಾದ ದರ್ಖಾಸ್ತು, ಮಾರಾಟ ಮಾಡಿ ನೋಂದ ಣಿಗೊಂಡ ದಾಖಲೆಗಳು ಯಾವ ಕಚೇರಿ ಯಲ್ಲಿವೆ ಎಂದು ಸ್ಪಷ್ಟ ಮಾಹಿತಿ ಇಲ್ಲ.

6 ದಶಕಗಳಿಂದ ಅಲೆದಾಟ
ಅಡೂರು ಗ್ರಾಮಸ್ಥರು ತಮ್ಮ ಜಮೀನು ದಾಖಲೆಗಳ ಕುರಿತು ಕೇರಳದ ಕಾಸರ ಗೋಡು ಕಚೇರಿಯನ್ನು ಸಂಪರ್ಕಿ ಸಿದಾಗ ಅಡೂರು ಗ್ರಾಮಕ್ಕೆ ಸೇರಿದ ಕಡತಗಳು ನಮ್ಮ ಕಚೇರಿಯಲ್ಲಿ ಲಭ್ಯವಿಲ್ಲ. ನೀವು ಸುಳ್ಯ ತಾ| ಕಚೇರಿ ಅಥವಾ ಉಪನೋಂದಣಿ ಕಚೇರಿಗೆ ವಿಚಾರಿಸಿ ಎಂದು ಹೇಳುತ್ತಾರೆ. ಸುಳ್ಯ ಕಚೇರಿ ಯಲ್ಲಿ ವಿಚಾರಿಸಿದರೆ ನಿಮ್ಮ ದಾಖಲೆಗಳು ಎಲ್ಲಿವೆ ಎನ್ನುವುದು ಗೊತ್ತಿಲ್ಲ ಎಂಬ ಉತ್ತರ ಸಿಗುತ್ತದೆ. ತಮ್ಮ ದಾಖಲೆ ಪ್ರತಿಗಳು ಎಲ್ಲಿವೆ ಎನ್ನುವುದು ತಿಳಿಯದ ಗ್ರಾಮಸ್ಥರು ಆರು ದಶಕಗಳಿಂದ ಕಾಸರಗೋಡು- ಕರ್ನಾಟಕ ಪ್ರದೇಶಗಳಲ್ಲಿ ಅಲೆದಾಡುತ್ತಲೇ ಇದ್ದಾರೆ.

500ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿ
ಅಡೂರಿನಿಂದ ಸುಳ್ಯಕ್ಕೆ 25 ಕಿ.ಮೀ. ಕ್ರಮಿಸಬೇಕು. ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಗಳು ಇಲ್ಲಿಲ್ಲ. ದಿನಪೂರ್ತಿ ಅಲೆದಾಡುವುದಕ್ಕೆ ಸಮಯ ಹಿಡಿಯುತ್ತದೆ. ಅಡೂರು ಗ್ರಾಮದ ದೇಲಂಪಾಡಿ, ಕಾಟೆಕಜೆ, ಸಾಮ್ವೆಕೊಚ್ಚಿ, ಪಾಂಡಿ, ದೇವರಡ್ಕ, ಬಳ್ಳೇರಿ, ಬಳೆಯಂತಡ್ಕ, ಬಾವಯ್ಯಮೂಲೆ, ಮಂಡೆಬೆಟ್ಟು ಕಯ್ಯಣ್ಣಿ, ಸಂಜೆಕಡವು, ಏವಂದೂರು, ಕಡುವನ, ಗಂಧದ ಕಾಡು, ಪಯರಡ್ಕ, ಪಲ್ಲಂಗೋಡು, ಅಣ್ಣಪ್ಪಾಡಿ ಮೊದಲಾದ ಗ್ರಾಮಗಳ 500ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಕಂದಾಯ ಸಚಿವರಿಗೆ ಮನವಿ
ಅಡೂರಿನಲ್ಲಿ ಬಹುಜನರು ಮಲಯಾಳಂ ಭಾಷಿಗರಾಗಿದ್ದು, ಸುಳ್ಯದಲ್ಲಿ ಕಚೇರಿ ವ್ಯವಹಾರಗಳು ನಡೆಸಲು ಅಸಮರ್ಥರಾದ ಕಾರಣ ಸುಳ್ಯದಲ್ಲಿ ಲಭ್ಯವಿರುವ ಅಡೂರು ಗ್ರಾಮದ ದಾಖಲೆಗಳನ್ನು ಕಾಸರಗೋಡು ತಾಲೂಕು ಕಚೇರಿಗೆ ವರ್ಗಾಯಿಸಲು ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೂ ಮನವಿ ಕಳಹಿಸಿಕೊಟ್ಟಿದ್ದಾರೆ.

ಸಮಸ್ಯೆ ಬಗೆಹರಿಯಲಿ
ಅಡೂರು ಗ್ರಾಮಗಳ ದಾಖಲೆ ಪತ್ರಗಳು ಸಿಗದೆ ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ 1952ರ ಹಿಂದಿನ ಅಡೂರು ಗ್ರಾಮಸ್ಥರ ದಾಖಲೆ ಪತ್ರಗಳನ್ನು ಕಾಸರಗೋಡು ತಾಲೂಕು ಕಚೇರಿಗೆ ಹಸ್ತಾಂತರಿಸುವ ಕೆಲಸವಾಗಬೇಕು. ಈ ಕುರಿತು ಕಂದಾಯ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇವೆ. ಇನ್ನಾದರೂ ಸಮಸ್ಯೆ ಬಗೆಹರಿಯಬಹುದು ಎನ್ನುವ ವಿಶ್ವಾಸ ಇರಿಸಿಕೊಂಡಿದ್ದೇವೆ.
 -ಜಿ. ಕುಂಞಿರಾಮನ್‌, ಅಡೂರು

ಅಲೆದಾಟವೇ ಆಯಿತು
ಸುದೀರ್ಘ‌ ಅವಧಿಯಿಂದ ನಮ್ಮ ದಾಖಲೆ ಪತ್ರಗಳಿಗೆ ಅಲೆದಾಡುತ್ತಿದ್ದೇವೆ. ತಿಂಗಳಿಗೆ ಹತ್ತಾರು ಭಾರಿ ಕಾಸರಗೋಡು, ಸುಳ್ಯ ಕಚೇರಿಗೆ ತೆರಳುತ್ತೇವೆ. ಸರಕಾರಿ ಸವಲತ್ತು ಇಲ್ಲ. ಇತ್ತ ಕಡೆ ಕೆಲಸವೂ ಇಲ್ಲ ಎನ್ನುವಂತಾಗಿದೆ. ನಮ್ಮ ಸಮಸ್ಯೆ ಒಂದು ಬಾರಿ ಬಗೆಹರಿಸಿ ಎಂದು ಅಧಿಕಾರಿಗಳ ಬಳಿ ಭಿನ್ನವಿಸಿಕೊಳ್ಳುತ್ತಿದ್ದೇವೆ.
 –ವಾಮನ ನಾಯ್ಕ ಕಾಟಿಕಜೆ,
   ಸಂತ್ರಸ್ತ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.