ಕೈಗೂಡಿಲ್ಲ ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ಯೋಜನೆ
Team Udayavani, Jan 15, 2019, 4:56 AM IST
ಕಾಣಿಯೂರು: ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಕಾೖಮಣ ಗ್ರಾಮದ ಮರಕ್ಕಡ-ಕಟ್ಟತ್ತಾರು ಎನ್ನುವಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕೆನ್ನುವ ಈ ಭಾಗದ ಜನತೆಯ ಬೇಡಿಕೆ ಇನ್ನೂ ಈಡೇರಿಲ್ಲ.
ಈ ಭಾಗದ ಜನತೆ ನಿರಂತರವಾಗಿ ಕಳೆದ 28 ವರ್ಷದಿಂದ ಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಆದರೆ ಫಲಿತಾಂಶ ಶೂನ್ಯ. ಈ ಭಾಗದಲ್ಲಿ ಅಣೆಕಟ್ಟು ನಿರ್ಮಾಣವಾದರೆ ಇಲ್ಲಿನ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ. ನೂರಾರು ಎಕ್ರೆ ಕೃಷಿ ಭೂಮಿ ಹಚ್ಚ ಹಸುರಾಗಿ ಕಂಗೊಳಿಸಲಿದೆ.
ಈ ಹಿಂದೆ ಇಲ್ಲಿ ಜೈನರಸರ ಆಳ್ವಿಕೆ ಸಂದರ್ಭದಲ್ಲಿ ಅವರೇ ಅಣೆಕಟ್ಟು ನಿರ್ಮಿಸಿ ಕೃಷಿಕರಿಗೆ ನೆರವಾಗಿದ್ದರು,ಬಳಿಕ ಭೂ ಮಸೂದೆಯಿಂದ ಅವರ ಆಡಳಿತ ನಿಂತ ಮೇಲೆ ಈ ಅಣೆಕಟ್ಟು ಸರಿಯಾದ ನಿರ್ವಹಣೆ ಇಲ್ಲದೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಅದರ ಕುರುಹುಗಳಿವೆ.
ನಿರಂತರ ಮನವಿ ಸಲ್ಲಿಕೆ
1991 ಡಿ. 15ರಂದು ಊರಿನವರೇ ಸೇರಿ ಬೆಳಂದೂರು ಮಂಡಲ ಪಂಚಾಯತ್ನ ಅಧ್ಯಕ್ಷರ ಮೂಲಕ ಸಂಬಂಧಪಟ್ಟವರಿಗೆ ಮೊದಲ ಮನವಿ ಸಲ್ಲಿಸಿದ್ದರು. ಆ ಬಳಿಕ ಪ್ರತೀ ಬಾರಿಯೂ ಶಾಸಕರಿಗೆ, ಸಂಸದರಿಗೆ ನಿರಂತರ ಮನವಿ ನೀಡಲಾಗುತ್ತಿದ್ದರೂ, ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಭಾಗದ ಜನತೆ.
ಪ್ರಧಾನಿ ಮೋದಿಗೆ ಮೊರೆ
ಮನವಿ ನೀಡಿ ಯಾವುದೇ ಬೆಳವಣಿಗೆಯಾಗದ್ದನ್ನು ಮನಗಂಡು 2017 ಫೆ. 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದರು. ಈ ಪರಿಣಾಮ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯವರು ದ.ಕ.ಜಿ.ಪಂ.ಗೆ ಅನುದಾನ ಬಿಡುಗಡೆ ಮಾಡುವಂತೆ ನಿರ್ದೇಶನವನ್ನು ನೀಡಿದ್ದರು.
ಶಾಸಕರಿಗೆ ವಿವರ ಸಲ್ಲಿಕೆ
ಈ ಎಲ್ಲ ಬೆಳವಣಿಗೆಗಳ ಸವಿವರಗಳನ್ನು ಸುಳ್ಯ ಶಾಸಕರಿಗೆ 2017ರಂದೇ ಸಲ್ಲಿಸಿದ್ದು, ಈವರೆಗೂ ಯಾವುದೇ ಸ್ಪಂದನೆ ಇಲ್ಲ ಎನ್ನುತ್ತಾರೆ ಈ ಭಾಗದವರು. ಶಾಸಕರು ಪ್ರಯತ್ನ ಮಾಡಿದರೆ ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆ ಈಡೇರುವಂತಾಗುತ್ತದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.
ಪ್ರಸ್ತಾವನೆ ಸಲ್ಲಿಕೆ
ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ನಿರ್ಮಾಣ ಕುರಿತ ಕಡತಗಳೊಂದಿಗೆ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆಗೊಂಡು ಅನುದಾನ ಬಿಡುಗಡೆಯಾಗಬೇಕಿದೆ. ಈ ಕುರಿತು ಪ್ರಯತ್ನ ಮಾಡಲಾಗುತ್ತಿದೆ.
-ಎಸ್. ಅಂಗಾರ, ಶಾಸಕರು, ಸುಳ್ಯ
ಆಶಾಭಾವನೆ ನಮ್ಮದು
ಕಳೆದ 28 ವರ್ಷಗಳಿಂದ ನಿರಂತರವಾಗಿ ವಿವಿಧ ಸ್ತರಗಳ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಬೇಡಿಕೆ ಈಡೇರಬಹುದು ಎನ್ನುವ ಆಶಾಭಾವನೆ ನಮ್ಮದು.
-ಸೀತಾರಾಮ ಗೌಡ ಮುಂಡಾಳ,
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?