ಪಂಚಮಹಾವೈಭವ ಸಮಾಪನ: ಭರತಾಗಮನ; ಶಂಕೆ ನಿವಾರಣೆ
Team Udayavani, Feb 16, 2019, 12:30 AM IST
ಬೆಳ್ತಂಗಡಿ: ಪಂಚಮಹಾವೈಭವದ ಕೊನೆಯ ದಿನ ಶುಕ್ರವಾರದ ಬೆಳಗಿನ ಅವಧಿಯಲ್ಲಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಸಮವಸರಣಕ್ಕೆ ಭರತೇಶನ ಆಗಮನವನ್ನು ಪ್ರಸ್ತುತ ಪಡಿಸಲಾಯಿತು.
ಭರತೇಶನು ಸಾಮಾನ್ಯ ಶ್ರಾವಕನಂತೆ ಸಮವಸರಣ ಮಂಟಪಕ್ಕೆ ಬಂದು, ಬಾಹು ಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗದ ಕುರಿತು ಶ್ರೀ ಆದಿನಾಥರಲ್ಲಿ ಕೇಳುತ್ತಾನೆ. ಆಗ ಆದಿನಾಥ ತೀರ್ಥಂಕರರು ಭರತನಿಗೆ, ನೀನು ಆತನ ಪಾದಕ್ಕೆ ಎರಗಿದರೆ ಕೇವಲ ಜ್ಞಾನ ಪ್ರಾಪ್ತವಾಗುತ್ತದೆ ಎಂಬ ಸಲಹೆ ನೀಡುತ್ತಾರೆ.
ಪ್ರದರ್ಶನದಲ್ಲಿ ಹೆಗ್ಗಡೆ ಕುಟುಂಬದ ಡಿ. ಶ್ರೇಯಸ್ಕುಮಾರ್ ಅವರು ಭರತೇಶ ನಾಗಿ, ಸುಭದ್ರಾದೇವಿಯಾಗಿ ಸಂಹಿತಾ ಶ್ರೇಯಸ್ ಕುಮಾರ್ ಅಭಿನಯಿಸಿದರು.
ಬಾಹುಬಲಿಗೆ ಕೇವಲ ಜ್ಞಾನ
ಭರತೇಶನು ಬಾಹುಬಲಿಯ ಪಾದಕ್ಕೆ ಎರಗುತ್ತಾನೆ. ಆಗ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗುತ್ತದೆ.
ಕಲಾವಿದರಿಗೆ ಗೌರವಾರ್ಪಣೆ
ಪಂಚಾಮಹಾವೈಭವವನ್ನು ನಿರ್ದೇಶನ ಮಾಡಿದ ರಂಗ ನಿರ್ದೇಶಕ ಜೀವನ್ರಾಂ ಸುಳ್ಯ ಹಾಗೂ ಬೆಂಗಳೂರಿನ ನಾಟ್ಯಾಂಜಲಿ ಸಂಸ್ಥೆಯವರನ್ನು ಶುಕ್ರವಾರ ಹೆಗ್ಗಡೆ ಕುಟುಂಬದವರು ಗೌರವಿಸಿದರು.
ಬಳಿಕ ಮಾತನಾಡಿದ ಹೆಗ್ಗಡೆಯವರು, ಪಂಚಮಹಾವೈಭವ ಅದ್ಭುತವಾಗಿ ಮೂಡಿಬಂದಿದೆ. ಇದಕ್ಕಾಗಿ ಕ್ಷೇತ್ರದ ಸಿಬಂದಿ ಸಹಿತ ಹಲವರು ಶ್ರಮಿಸಿದ್ದಾರೆ. ಜತೆಗೆ ಕಲಾವಿದರ ಪರಿಶ್ರಮ ಅಪಾರ ಎಂದರು. ಜೀವನರಾಂ ಸುಳ್ಯ ಅವರು ನಾಟಕದ ಮಾಂತ್ರಿಕ ಎಂದು ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ