ಗ್ರಾಮೀಣರ ಮನ ಗೆದ್ದ ‘ಮನೆ ಮನೆ ಯಕ್ಷಗಾನ’


Team Udayavani, Feb 20, 2019, 6:44 AM IST

20-february-77.jpg

ಆಲಂಕಾರು: ಯಕ್ಷಗಾನವನ್ನು ಗ್ರಾಮೀಣ ಜನತೆಯ ಮನೆ ಮನೆಗೂ ತಲುಪಿಸುವ ಕನ್ಯಾನದ ಸಂಚಾರಿ ಯಕ್ಷಗಾನ ಮೇಳ ತನ್ನ ‘ಮನೆ ಮನೆ ಯಕ್ಷಗಾನ’ ಆಭಿಯಾನದಡಿ ನಾಲ್ಕನೇ ವರ್ಷದ ತಿರುಗಾಟವನ್ನು ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ಆರಂಭಿಸಿದೆ.

ಪರಶುರಾಮ ಸೃಷ್ಟಿಯ ಈ ನೆಲದಲ್ಲಿ ಚಿಕ್ಕ ಮೇಳ (ಯಕ್ಷಗಾನ), ಕಂಗೀಲು ಕರಂಗೋಲು, ಸೋಣಂತ ಜೋಗಿ, ಆಟಿಕಳಂಜ, ಮದಿಮಾಯೆ ಮದಿಮಾಳ್‌, ಕನ್ಯಾಪು, ಚೆನ್ನು ಕುಣಿತ, ಗೌಡರ ಸಿದ್ದವೇಷ, ಬಾಳ್‌ ಸಾಂತು ಮೊದಲಾದ ಕಲಾ ಪ್ರಕಾರಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಈ ದಿನಗಳಲ್ಲಿ ಸಾಂಸ್ಕೃತಿಕ ಬೇರುಗಳನ್ನು ಮತ್ತೆ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕನ್ಯಾನದ ಸಂಚಾರಿ ಯಕ್ಷಗಾನ ಮೇಳ ಮುಂದಾಗಿದೆ.

ಚಾವಡಿಯಲ್ಲಿ ಕುಣಿತ
ಕೆಲವು ವರ್ಷಗಳಿಂದ ಆರು ಅಥವಾ ಏಳು ಜನರ ಚಿಕ್ಕ ಮೇಳ ಕಾರ್ಯಾಚರಿಸುತ್ತಿತ್ತು. ಹೆಚ್ಚಿನ ಕಲಾವಿದರನ್ನು ಸೇರಿಸಿ, ಮೇಳದ ವೃತ್ತಿಪರತೆಯನ್ನು ವೃದ್ಧಿಸಲಾಗಿದೆ. ಹಿಂದೆ ಮನೆಗಳಲ್ಲಿ ದೋಷ ಪರಿಹಾರಾರ್ಥ ಚಿಕ್ಕಮೇಳವನ್ನು ಕರೆಯಿಸಿ ಆಡಿಸುತ್ತಿದ್ದರು. ಇಲ್ಲಿ ಯಕ್ಷಗಾನ ವೇಷಗಳು ಅಂಗಳದ ಬದಲು ಮನೆಯ ಚಾವಡಿಯಲ್ಲಿ ಕುಣಿಯುವ ಸಂಪ್ರದಾಯವಿದೆ. ಯಕ್ಷಗಾನ ಗೆಜ್ಜೆ ಸೇವೆಯ ವೇಳೆ ಹೊರಹೊಮ್ಮುವ ನಾದ ತರಂಗದಿಂದ ಮನೆ – ಮನದ ದೋಷಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆಯಿದೆ. ಧರ್ಮ ಪ್ರಸಾರ ಮತ್ತು ಪ್ರಚಾರಕ್ಕೆ ಯಕ್ಷಗಾನ ಮೂಲ ಬಿಂದುವಾಗಿದೆ ಎಂದು ಯಕ್ಷಗಾನದ ಹವ್ಯಾಸಿ ಭಾಗವತ ಆನಂದ ದೇವಾಡಿಗ ನಗ್ರಿ ಅವರು ತಿಳಿಸಿದರು.

ಮನೆಯವರಿಂದಲೇ ಆರತಿ
ಯಕ್ಷಗಾನ ತಂಡ ಮನೆಗೆ ಬಂದಾಗ ಮನೆಯವರು ಗಣಪತಿ ದೇವರಿಗೆ ಸ್ವಸ್ತಿಕವಿರಿಸಿ, ಹರಿವಾಣ ಮತ್ತು ಮಣೆಯೊಂದಿಗೆ ದೀಪ ಬೆಳಗಬೇಕು. ಹೊಸ ಮನೆ ಕಟ್ಟುವ ಸಂದರ್ಭ, ಕಂಕಣ ಭಾಗ್ಯ, ಸಂತಾನ ಭಾಗ್ಯದ ಕುರಿತು ತಂಡಕ್ಕೆ ಮುಂಚಿತವಾಗಿ ತಿಳಿಸಿದಲ್ಲಿ ದೇವಿಯ ಮುಂದೆ ಪ್ರಾರ್ಥಿಸುತ್ತಾರೆ. ಜಾತಿ-ಮತ ಭೇದವಿಲ್ಲದೆ ಮನೆಯವರೇ ಶ್ರೀದೇವಿಗೆ ಆರತಿ ಬೆಳಗಿಸಲು ಅವಕಾಶವಿದೆ. ಜನನ – ಮರಣದ ಸೂತಕವಿದ್ದಲ್ಲಿ ಮಾತ್ರ ದಿನಾಂಕ ಬದಲಿಸಿಕೊಳ್ಳಲು ಅವಕಾಶವಿದೆ.

ಉಚಿತ ತರಬೇತಿ
ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನ ಗ್ರಂಥದಲ್ಲಿ ಮನೆ ಮನೆ ಯಕ್ಷಗಾನ ಮೂಲ ಪರಂಪರೆಯಿಂದ ಬಂದ ಪದ್ಧತಿಯೆಂದು ಉಲ್ಲೇಖೀತವಾಗಿದೆ. ಕಲಾ ಪ್ರಕಾರವನ್ನು ಉಳಿಸುವ ದೃಷ್ಟಿಯಿಂದ ಉಳ್ಳಾಲ್ತಿ ಅಮ್ಮನವರ ಹೆಸರಿನಲ್ಲಿ ಕಲಾ ಸೇವೆ ಮಾಡುತ್ತಿದ್ದೇವೆ. ನಮ್ಮ ತಂಡದ ನುರಿತ ಗುರುಗಳಿಂದ ಉಚಿತ ಯಕ್ಷಗಾನ, ನಾಟ್ಯ, ತರಬೇತಿ ನೀಡಲಾಗುತ್ತಿದೆ. ದೇವಸ್ಥಾನ, ಮಂದಿರಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಕಾರ, ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತರಿಗೆ ಸಹಕಾರ ನೀಡುತ್ತಾ ಜನರ ಗೌರವಕ್ಕೆ ಪಾತ್ರರಾಗಿದ್ದೇವೆ. ಶುಭ ಸಂದರ್ಭದಲ್ಲಿ ಸೀಮಿತ ಅವಧಿಯ ಯಕ್ಷಗಾನ, ತಾಳಮದ್ದಳೆ ನಮ್ಮ ತಂಡದ ವಿಶೇಷ.
ಜಗದೀಶ್‌ ಕನ್ಯಾನ, 
ಮೇಳದ ವ್ಯವಸ್ಥಾಪಕ

ವಿಶೇಷ ವರದಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.