ಉಗ್ರ ದಾಳಿಯ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
Team Udayavani, Feb 22, 2019, 9:30 AM IST
ಪುತ್ತೂರು : ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಮಾಯ್ ದೇ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಸಂಚಾಲಕ ವಂ| ಆಲ್ಫ್ರೆಡ್ ಜೆ. ಪಿಂಟೋ ಮಾತನಾಡಿ, ರಾಷ್ಟ್ರ
ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಪ್ರಾಣಾರ್ಪಣೆಗೈದ ಎಲ್ಲ ವೀರಯೋಧರ ತ್ಯಾಗ, ಬಲಿದಾನಗಳಿಂದ ನಾವಿಂದು ಸುರಕ್ಷಿತರಾಗಿದ್ದೇವೆ ಎಂದರು.
ಮಾಯ್ ದೇ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ| ಪ್ರವೀಣ್ ಡಿ’ಸೋಜಾ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆ.ಪಿ. ರೊಡ್ರಿಗಸ್, ನಿವೃತ್ತ ಸೈನಿಕರಾದ ಜ್ಯೋ ಡಿ’ಸೋಜಾ, ಎಡ್ವರ್ಡ್ ಡಿ’ಸೋಜಾ, ಕೆ. ಸುಂದರ ಗೌಡ, ಜಯಂತ ಬೇಕಲ್, ಶಿವರಾಮ ಭಟ್, ಮಾಧವ ಬಿ.ಕೆ., ತುಳಸೀದಾಸ್, ಜಗನ್ನಾಥ ಎಂ., ರಮೇಶ್ ಬಾಬು, ಹೊನ್ನಪ್ಪಗೌಡ, ಮೂರು ಶಾಲೆಗಳ ಮುಖ್ಯಸ್ಥೆ ರೋಸಲಿನ್ ಲೋಬೋ, ಜಾನೆಟ್ ಡಿ’ಸೋಜಾ, ಹ್ಯಾರಿ ಡಿ’ಸೋಜಾ, ಶಾಲಾ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ನಿರೂಪಿಸಿದರು.
ದೇಶ ಕಾಯುವುದು ಪ್ರತಿಯೊಬ್ಬನ ಕರ್ತವ್ಯ
ಮೊಂಬತ್ತಿ ಬೆಳಗಿಸಿ, ದೇಶ ಭಕ್ತಿಗೀತೆ ಹಾಡುವ ಮೂಲಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಲಾಯಿತು. ನಿವೃತ್ತ ಸೈನಿಕ ಶ್ರೀರಂಗ ಶಾಸ್ತ್ರಿ ಅವರು ಮಾತನಾಡಿ, ನಮ್ಮೊಳಗೆ ಒಬ್ಬ ಯೋಧನಿದ್ದಾನೆ. ದೇಶ ಕಾಯುವುದು, ಅದನ್ನು ರಕ್ಷಿಸುವುದು ಭಾರತೀಯರಾದ ನಮ್ಮ ಕರ್ತವ್ಯ ಎಂದರು.