ಮಹಾಲಿಂಗೇಶ್ವರ ದೇವಾಲಯಕ್ಕೆ ಹೂತೇರು ಆಗಮನ
Team Udayavani, Mar 17, 2019, 9:10 AM IST
ನಗರ: ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮಾ. 22ರಂದು ಸಮರ್ಪಣೆಯಾಗಲಿರುವ ಹೊಸ ಪುಷ್ಪರಥವನ್ನು ಪುತ್ತೂರಿಗೆ ತರಲಾಗಿದೆ. ಮೂಡುಬಿದಿರೆಯ ಅಶ್ವತ್ಥಪುರದಲ್ಲಿ ನಿರ್ಮಾಣಗೊಂಡ ದೇವಾಲಯದ ಪುಷ್ಪರಥವನ್ನು ಶನಿವಾರ ಪುತ್ತೂರಿಗೆ ಲಾರಿಯ ಮೂಲಕ ತರಲಾಯಿತು. ಚಕ್ರದಿಂದ 12 ಅಡಿ ಎತ್ತರವಿರುವ ಹೂತೇರನ್ನು ದೇವಾಲಯದ ಹೊರಾಂಗಣದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ಪುಷ್ಪರಥವನ್ನು ರೂ. 22 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ.
ಮಾ. 22ರಂದು ಪುಷ್ಪರಥವನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಗುವುದು. ಈ ಪುಷ್ಪರಥವನ್ನು ವರ್ಷದಲ್ಲಿ ಒಂದು ದಿನ ವಾರ್ಷಿಕ ಜಾತ್ರೆಯ ಸಂದರ್ಭ ಎ. 16 ರಂದು ಶ್ರೀ ದೇವಾಲಯದ ಹೊರಾಂಗಣದಲ್ಲಿ ಎಳೆಯಲಾಗುತ್ತದೆ. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸದಸ್ಯರಾದ ಜಾನು ನಾಯ್ಕ, ಯು.ಪಿ. ರಾಮಕೃಷ್ಣ, ಸಂಜೀವ ನಾಯಕ್, ರೋಹಿಣಿ ಆಚಾರ್ಯ, ನಯನಾ ರೈ, ವಸಂತ ಕೆದಿಲಾಯ, ವಾಸ್ತು ಎಂಜಿನಿಯರ್ ಪಿ. ಜಿ. ಜಗನ್ನಿವಾಸ್ ರಾವ್, ಸಿವಿಲ್ ಎಂಜಿನಿಯರ್ ರಾಮಚಂದ್ರ ಘಾಟೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ