ಮಳೆಗಾಲದಲ್ಲಿ ಮತ್ತೆ ಅನಾಹುತ ಭೀತಿ


Team Udayavani, Mar 21, 2019, 1:00 AM IST

anhuta-beti.jpg

ಸುಬ್ರಹ್ಮಣ್ಯ: ಕಳೆದ ಮಳೆ ಗಾಲದಲ್ಲಿ ಭಾರೀ ಪ್ರಕೃತಿ ವೈಪರೀತ್ಯ ಘಟಿಸಿದ ಬಿಸಿಲೆ ಘಾಟಿ ಈಗ ಮತ್ತೂಂದು ಆತಂಕ ಎದುರಿಸುತ್ತಿದೆ. ಭೂಕುಸಿತ, ಜಲಪ್ರಳಯದಿಂದ ವಿಶಾಲ ಪ್ರದೇಶದ ಅರಣ್ಯ ನಾಶವಾಗಿ ಮಣ್ಣು ಹಸಿರು ಹೊದಿಕೆ ಕಳೆದುಕೊಂಡಿದ್ದು, ಮುಂದಿನ ಮಳೆಗಾಲದಲ್ಲಿ ಭೂ ಸವೆತ ತೀವ್ರ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ.

ಭೂಕುಸಿತ, ಜಲಪ್ರಳಯದಿಂದ ಘಟ್ಟದ ಹಲವೆಡೆ ಕಣಿವೆ, ತೋಡುಗಳು ಸೃಷ್ಟಿಯಾಗಿವೆ. ವೀಕ್ಷಣಾ ಗೋಪುರದ ಬಳಿ, ಸಕಲೇಶಪುರ ರಾ.ಹೆ. ಉದ್ದಕ್ಕೂ ದ.ಕ. ಮತ್ತು ಸಕಲೇಶಪುರ ವಿಭಾಗಕ್ಕೆ ಸೇರಿದ ಅನೇಕ ಕಡೆ ರಸ್ತೆ, ಸೇತುವೆಗಳು ಮಾಯವಾಗಿ ಸಂಪರ್ಕ ಕಡಿತವಾಗಿತ್ತು. ನೂರಾರು ಎಕರೆ ಅರಣ್ಯ ನಾಶವಾಗಿತ್ತು.
ಈ ಪ್ರಾಕೃತಿಕ ವಿಕೋಪದ ಭೀಕರತೆಗೆ ಅಲ್ಲಿನ ಅವಶೇಷಗಳು ಸಾಕ್ಷಿ ಹೇಳುತ್ತವೆ.

ಒರತೆ ಮತ್ತು ನೆರೆ ಬಿಟ್ಟರೆ ಚಿತ್ರಣ ಬದಲಾಗಿಲ್ಲ.

ಸವಕಳಿ ಖಚಿತ
ಬಿಸಿಲೆಯಲ್ಲಿ ವಿಶಾಲ ಭೂಭಾಗದ ಹಸಿರು ಹೊದಿಕೆ ನಾಶವಾಗಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಮಣ್ಣು ಸವೆತ ಹೆಚ್ಚುವ ಸಾಧ್ಯತೆಗಳಿವೆ. ಸವಕಳಿ ತಡೆಯದಿದ್ದರೆ ಸಸ್ಯ ಸಂಕುಲ, ಅರಣ್ಯ ಉಳಿಸಿಕೊಳ್ಳಲಾಗದು. ಹಾಗಾಗದಂತೆ ಕ್ರಮಗಳ ಅಗತ್ಯವಿದೆ.

ಮಣ್ಣು ಸವಕಳಿ ತಡೆಯುವುದಕ್ಕೆ ಸಸ್ಯಸಂಕುಲ, ಅರಣ್ಯ ಅಗತ್ಯ. ಅವುಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳದಿದ್ದಲ್ಲಿ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ಆದರೆ ಘಾಟಿ ಪ್ರದೇಶ ದಲ್ಲಿ ಕೃತಕ ತೋಡುಗಳಾಗಿರುವುದು, ಸಸ್ಯಸಂಕುಲ ನಾಶ ಮಣ್ಣು ಸವಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಸವಕಳಿ ತಡೆಗೆ ಕ್ರಮ ಕೈಗೊಳ್ಳದೆ ಇದ್ದರೆ ಘಟ್ಟದ ಮಣ್ಣು ಮಳೆನೀರಿನೊಂದಿಗೆ ಹರಿದು ನದಿಗಳಲ್ಲಿ ಹೂಳು ತುಂಬಬಹುದು. 

ಇಳಿಜಾರಿನಲ್ಲಿ ನೀರು ಹರಿಯುವ ವೇಗ ಹೆಚ್ಚಿದ್ದಷ್ಟು ಸವೆತ ಅಧಿಕ. ಬಿಸಿಲೆಯಲ್ಲಿ ಉಂಟಾಗಿರುವ ಕೃತಕ ಕಣಿವೆ, ತೋಡುಗಳಲ್ಲಿ ಬೃಹತ್‌ ಬಂಡೆಗಲ್ಲು, ಮರದ ದಿಮ್ಮಿಗಳು ತುಂಬಿದ್ದು, ಸ್ಥಳಾಂತರ ಕಷ್ಟ. ಮಣ್ಣು ಸವಕಳಿ ತಡೆಗೆ ಕ್ರಮ ಅನುಸರಿಸುವುದು ಅಗತ್ಯ.

ಸಂಪರ್ಕ ಕಾಮಗಾರಿ ನಡೆಯುತ್ತಿದೆ
ಸಕಲೇಶಪುರ-ಸುಬ್ರಹ್ಮಣ್ಯ ಬಿಸಿಲೆ ಘಾಟಿ ರಸ್ತೆಯಲ್ಲಿ ಜಲಪ್ರಳಯದ ವೇಳೆ ಹಾನಿಗೀಡಾದ ಸೇತುವೆಗಳ ಪುನರ್‌ನಿರ್ಮಾಣ ಕಾರ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿದೆ. 

ಏನು ಮಾಡಬಹುದು?
ಮಳೆಗಾಲ ಆರಂಭಕ್ಕೆ ಒಂದೆರಡು ತಿಂಗಳು ಮಾತ್ರವೇ ಇವೆ. ಹಸಿರು ಹೊದಿಕೆ ನಾಶವಾಗಿರುವ ಘಾಟಿ ಪ್ರದೇಶದಲ್ಲೆಲ್ಲ ಬೀಜದುಂಡೆಗಳನ್ನು ವ್ಯಾಪಕವಾಗಿ ಚೆಲ್ಲುವ ಮೂಲಕ ಮೊದಲ ಮಳೆಗೆ ಅವು ಮೊಳಕೆಯೊಡೆ
ಯುವಂತೆ ಮಾಡಬಹುದು. ವಿವಿಧ ಜಾತಿಯ ಹುಲ್ಲಿನ ಬೀಜಗಳನ್ನು ಬಿತ್ತಿದರೆ ಉಪಯೋಗವಾಗಬಹುದು. ಇವು ಒಂದೇ ವರ್ಷದಲ್ಲಿ ಪೂರ್ಣ ಫ‌ಲ ಕೊಡುವ ಕ್ರಮಗಳಲ್ಲವಾದರೂ ಹಸಿರು ಹೊದಿಕೆಯನ್ನು ಮರುಸ್ಥಾಪಿಸುವ ಪ್ರಯತ್ನ ಎಂಬುದಂತೂ ನಿಜ.

ಸಕಲೇಶಪುರ-ದಕ್ಷಿಣ ಕನ್ನಡ ಇವೆರಡೂ ಭಾಗಗಳಲ್ಲಿ ಜಲಪ್ರಳಯ ದಿಂದ ಅಪಾರ ಅರಣ್ಯ ನಾಶವಾಗಿದೆ. ಬೃಹತ್‌ ಗಾತ್ರದ ಬಂಡೆಗಳು, ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸಂಗ್ರಹಗೊಂಡಿದ್ದು, ಅವುಗಳ ತೆರವು ಸಾಧ್ಯವಾಗಿಲ್ಲ. ಮಣ್ಣು ಸವೆತ ತಡೆಯಲು ಕ್ರಮಗಳನ್ನು ಅನುಸರಿಸಲು ಸಾಧ್ಯವಿದೆ. ಈ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಮುಂದಿನ ಮಳೆಗಾಲದಲ್ಲಿ ಮಳೆ ಅಗಾಧವಾಗಿ ಸುರಿದರೆ ಮತ್ತಷ್ಟು ಅರಣ್ಯ ನಾಶವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
– ತ್ಯಾಗರಾಜ್‌, ರೇಂಜ್‌ ಆಫೀಸರ್‌, ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಿಭಾಗ 

– ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.