ಲೋಕಸಭೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ​​​​​​​


Team Udayavani, Mar 23, 2019, 12:30 AM IST

lok.jpg

ಬೆಳ್ತಂಗಡಿ: ತಮ್ಮ ಸಂಕಷ್ಟವನ್ನು ಸರಕಾರ ಆಲಿಸಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ನೌಕರರ ಸಂಘವು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿರುವುದು ಚುನಾವಣಾಧಿಕಾರಿಗಳಿಗೆ ತಲೆನೋವಾಗಿ ಪರಿಣಾಮಿಸಿದೆ.

ಬಿಸಿಯೂಟ ತಯಾರಿಸುವವರು ಒಂದು ವೇಳೆ ತಮ್ಮ ನಿರ್ಧಾರ ಬದಲಾಯಿಸದಿದ್ದರೆ ಸರ್ವತ್ರ ಮತದಾನದ ಸ್ವೀಪ್‌ ಉದ್ದೇಶ ವಿಫ‌ಲವಾಗುವುದಕ್ಕಿಂತ ಮಿಗಿಲಾಗಿ ತೀರಾ ಹಳ್ಳಿಗಾಡು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣ ಅಧಿಕಾರಿಗಳಿಗೆ ಊಟೋಪಹಾರಕ್ಕೆ ತತ್ವಾರವಾಗುವ ಸಾಧ್ಯತೆ ಇದೆ.

ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕು ಬಿಸಿಯೂಟ ನೌಕರರ ಸಂಘವು ಈಗಾಗಲೇ ಹಲವು ಸುತ್ತಿನ ಸಭೆ ಕರೆದಿದೆ. ನೌಕರರ ಹಿತಾಸಕ್ತಿ ಗಮನಿಸಿ ಚುನಾವಣ ಪ್ರಣಾಳಿಕೆಯಲ್ಲಿ ನೀಡುವ ಆಶ್ವಾಸನೆಗಳು ಸರಿಹೊಂದದಿದ್ದಲ್ಲಿ ನಿರ್ಧಾರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.

ಕನಿಷ್ಠ 10 ಸಾವಿರ ವೇತನಕ್ಕೆ ಒತ್ತಾಯ?
2003ರಲ್ಲಿ 1ನೇ ಅಡುಗೆಯವರಿಗೆ ಮಾಸಿಕ 600 ರೂ., 2ನೇ ಅಡುಗೆಯವರಿಗೆ ಮಾಸಿಕ 450 ರೂ., 3ನೇ ಅಡುಗೆಯವರು/ ಸಹಾಯಕರಿಗೆ 300ರೂ. ವೇತನ ನಿಗದಿಪಡಿಸಲಾಗಿತ್ತು.

2004ರಿಂದ ರಾಜ್ಯಾದ್ಯಂತ ಬಿಸಿಯೂಟ ಕಾರ್ಮಿಕರ ಸಂಘಟನೆ ಬಲಗೊಂಡು ತೀವ್ರ ಹೋರಾಟಗಳು ನಡೆದಾಗ ಎಲ್ಲ ಅಡುಗೆಯವರಿಗೂ ತಲಾ 1,000 ರೂ. ವೇತನವನ್ನು ಕೇಂದ್ರ ಸರಕಾರ ನಿಗದಿಗೊಳಿಸಿತು. ಬಳಿಕ ರಾಜ್ಯ ಸರಕಾರ ತಲಾ 500 ರೂ. ಏರಿಕೆ ಮಾಡಿತ್ತು. ಆದರೆ ಕನಿಷ್ಠ ವೇತನ ಜಾರಿಗಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಹೋರಾಟ ನಡೆದರೂ ಪ್ರಯೋಜನವಾಗಿಲ್ಲ ಎಂಬುದು ನೌಕರರ ಅಳಲು.

ಐದು ವರ್ಷಗಳಲ್ಲಿ ರಾಜ್ಯ ಸರಕಾರ 500 ರೂ.ಗಳಂತೆ ಎರಡು ಬಾರಿ ವೇತನ ಏರಿಸಿದ್ದರಿಂದ 2,500 ರೂ. ನಿಗದಿಯಾಗಿದೆ. ಆದರೆ ಕನಿಷ್ಠ ಮಾಸಿಕ 10,000 ರೂ. ಮತ್ತು ತುಟ್ಟಿ ಭತ್ತೆ, ಪಿಂಚಣಿ, ಪಿಎಫ್‌, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಇತ್ಯಾದಿ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಹೋರಾಟದ ತೀವ್ರತೆ ಹೆಚ್ಚಿದ್ದು, ರಾಜಕೀಯ ಪಕ್ಷಗಳನ್ನು ಇಕ್ಕಟ್ಟಿಗೆ ಗುರಿಮಾಡಿದೆ.

ಹಣ ನಿಗದಿ
ದುರ್ಗಮ-ಕುಗ್ರಾಮಗಳ ಮತಗಟ್ಟೆಯಲ್ಲಿ ಸಮಸ್ಯೆಯಾಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಚುನಾವಣಾಧಿಕಾರಿಗಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಸೇರಿ ಒಬ್ಬರಿಗೆ 200 ರೂ. ಗಳಂತೆ 8 ಜನ ಕರ್ತವ್ಯ ನಿರತ ನೌಕರರಿಗೆ 1,600 ರೂ. ನಿಗದಿ ಪಡಿಸಲಾಗಿದೆ. ಇದನ್ನು ಬಿಸಿಯೂಟ ನೌಕರರು ಹಂಚಿಕೊಳ್ಳುವ ವ್ಯವಸ್ಥೆ ಕಳೆದ ವರ್ಷ ಜಾರಿಯಾಗಿದ್ದು, ಈ ಬಾರಿಯೂ ಮುಂದುರಿಯಲಿದೆ ಎಂದು ಚುನಾವಣ ಅಧಿಕಾರಿಗಳು ತಿಳಿಸಿದ್ದಾರೆ. 

ಮಾಸಿಕ ವೇತನ ಹೆಚ್ಚಳ ಕುರಿತು ರಾಷ್ಟ್ರ ಮಟ್ಟದಲ್ಲಿ ಹಲವು ಬಾರಿ ಹೋರಾಟ ಕೈಗೊಂಡರೂ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಚುನಾವಣೆ ಬಹಿಷ್ಕಾರ ಅನಿವಾರ್ಯವಾಗಿದೆ.
– ಮೋಹಿನಿ ಪಿಲ್ಯ, ಅಧ್ಯಕ್ಷೆ, ತಾಲೂಕು ಬಿಸಿಯೂಟ ನೌಕರರ ಸಂಘ 

ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ಕೆಲಸ ನಿರ್ವಹಿಸುತ್ತಿದ್ದೇವೆ. ಕೆಲಸ ಹೆಚ್ಚು ಸಂಬಳ ಕಡಿಮೆ ನೀಡಲಾಗುತ್ತಿದೆ. ಇದರಿಂದ ಬೆಳ್ತಂಗಡಿ, ಪುತ್ತೂರು ತಾಲೂಕು ಸೇರಿದಂತೆ ಜಿಲ್ಲಾಮಟ್ಟದಲ್ಲಿ ಚುನಾವಣೆ ಬಹಿಷ್ಕರಿಸುವ ಕುರಿತು ನಿರ್ಧರಿಸಲಾಗಿದೆ.
– ಭಾರತಿ, ಕಾರ್ಯದರ್ಶಿ, 
ತಾಲೂಕು ಬಿಸಿಯೂಟ ನೌಕರರ ಸಂಘ 

ಬೆಳ್ತಂಗಡಿ ತಾಲೂಕಿನ 241 ಶಾಲೆಯಲ್ಲಿ 587 ಮಂದಿ ಬಿಸಿಯೂಟ ನೌಕರರಿದ್ದಾರೆ. 16 ಕ್ಲಸ್ಟರ್‌ಗಳಿವೆ. ಪುತ್ತೂರು/ಕಡಬ ತಾಲೂಕಿನ 230 ಶಾಲೆಗಳಿಂದ 625 ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. 

ಚುನಾವಣೆ ನಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಬಿಸಿಯೂಟ ನೌಕರರು ಅಡ್ಡಿ ಮಾಡದಂತೆ ಮನವಿ ಮಾಡಲಾಗಿದೆ. ನಿಗದಿತ ರೂಪದಲ್ಲಿ ಬೇಡಿಕೆ ಈಡೇರಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಅಡುಗೆ ಸಿಬಂದಿಯೊಂದಿಗೆ ಸಭೆ ಕರೆದು ನಿರ್ಧಾರ ಹಿಂಪಡೆಯುವಂತೆ ಮನವಿ ಮಾಡಲಾಗಿದೆ.               
– ಲಕ್ಷ್ಮಣ್‌ ಶೆಟ್ಟಿ
ಬಿಸಿಯೂಟ ತಾಲೂಕು ನಿರ್ದೇಶಕರು 

– ಚೈತ್ರೇಶ್‌ ಇಳಂತಿಲ
 

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.