ರಾಯರಲ್ಲಿದೆ ನಾಸ್ತಿಕರನ್ನು ದೈವಸ್ಥರಾಗಿಸೋ ಶಕ್ತಿ


Team Udayavani, Aug 11, 2017, 12:06 PM IST

mantralaya.jpg

ರಾಯಚೂರು: ರಾಯರ ದರ್ಶನದಿಂದ ನಾಸ್ತಿಕರು ಆಸ್ತಿಕ ರಾಗುವರು. ನಾಸ್ತಿಕರನ್ನು ದೈವಸ್ಥರನ್ನಾಗಿಸುವ ಶಕ್ತಿ ರಾಯರಲ್ಲಿದೆ. ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು. ಮಂತ್ರಾಯಲದಲ್ಲಿ ಗುರುವಾರ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಆಸ್ತಿಕರ ಭಕ್ತಿ, ಶ್ರದ್ಧಾ ಕೇಂದ್ರವಾದ ರಾಯರ ಮಠಕ್ಕೆ ನಾಸ್ತಿಕರು ಬಂದಲ್ಲಿ ಮನ ಪರಿವರ್ತಿತರಾಗುವರು. ದೇವರಿಲ್ಲ, ಧರ್ಮವಿಲ್ಲ ಎನ್ನುವವರು ರಾಯರ ದರ್ಶನ ಪಡೆಯಲಿ ಎಂದರು. ರಾಯರ ಮಹಿಮೆ ದಿನೇ ದಿನೇ ಹೆಚ್ಚುತ್ತಿದೆ. ಕಷ್ಟದಿಂದ, ಹತಾಶದೊಂದಿಗೆ ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ನೆಮ್ಮದಿ ಸಿಕ್ಕಿದೆ. ಜನರ ಕಷ್ಟ ಅರಿಯಲೆಂದೇ ಪ್ರಹ್ಲಾದರಾಜರು ರಥದ ಮೂಲಕ ಬೀದಿಗಳಲ್ಲಿ ಸಂಚರಿಸುವರು ಎಂದು ಬಣ್ಣಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳು ಒಂದು ಜಾತಿ-ಮತ-ಪಂಥಗಳಿಗೆ ಸೀಮಿತರಲ್ಲ. ರಾಯರ ಆರಾಧನೆಯನ್ನು ಇಡೀ ವಿಶ್ವದಲ್ಲಿ ಆಚರಿಸಲಾಗುತ್ತಿದ್ದು, ಇದೊಂದು
ದೊಡ್ಡ ಮಹೋತ್ಸವವಾಗಿದೆ. ರಾಯರ ಆಧ್ಯಾತ್ಮಿಕ, ದೈವಿಕ ಸಂಪತ್ತು ಎಂದಿಗೂ ಕರಗದ ಸಂಪತ್ತು. ಹಣ-ಅಂತಸ್ತು ಹಂಚಿಕೆ ಕಳೆಯಲಿದೆ. ಆದರೆ ರಾಯರ ಆಧಾತ್ಮಿಕ ಸಂಪತ್ತು ಎಷ್ಟೇ ಹಂಚಿದರೂ ಕರಗುವುದಲ್ಲ ಎಂದು ನುಡಿದರು. ತುಂಗಾಭದ್ರಾ ನದಿ ಬತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ತೊಂದರೆಯಾಗುತ್ತದೆ ಎಂಬ ಆತಂಕವಿತ್ತು. ಆದರೆ, ಅದ್ಯಾವುದನ್ನು ಲೆಕ್ಕಿಸದೆ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ರಾಯರ ಕರುಣೆ ಸಕಲ ಮೇಲಿರಲಿ. ಕಾಲಕಾಲಕ್ಕೆ ಮಳೆ-ಬೆಳೆ ಬರಲಿ ಎಂದು ಶುಭ ಹಾರೈಸಿದರು.

ರಂಗು ತಂದ ಕಲಾ ತಂಡಗಳುಮಂತ್ರಾಲಯದ
ಯರರಾ ಆರಾಧನಾ ಮಹೋತ್ಸವ ದಲ್ಲಿ ಒಂದೆಡೆ ಜನಸಾಗರ, ಮತ್ತೂಂದೆಡೆ ಕಲಾ ತಂಡಗಳ ಪ್ರದರ್ಶನ ಭಕ್ತರ ಗಮನ ಸೆಳೆದವು. ಇನ್ನೇನು ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಕಲಾ ತಂಡಗಳು ರಥ ಬೀದಿಯಲ್ಲಿ ಮಾವಣೆಗೊಂಡು ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಪ್ರದರ್ಶನ ನೀಡುವ ಮೂಲಕ ಜನಮನ ರಂಜಿಸಿದವು. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ನಾನಾ ಕಡೆಗಳಿಂದಲೂ ಕಲಾ ತಂಡಗಳು ಆಗಮಿಸಿದ್ದವು. ಹೆಚ್ಚಾಗಿ ಮಹಿಳಾ ತಂಡಗಳೇ ಭಾಗವಹಿಸಿದ್ದು ವಿಶೇಷವಾಗಿತ್ತು. ಡೊಳ್ಳು ಕುಣಿತ, ಬಾಜಾ ಭಜಂತ್ರಿ, ಹಗಲು ವೇಷಗಾರರು, ಮಹಿಳಾ ವೀರಗಾಸೆ, ಕೋಲಾಟ, ಚಿನ್ನಾಟ, ಛದ್ಮವೇಷಧಾರಿಗಳ ತಂಡಗಳು ವಿವಿಧ
ಪ್ರಕಾರಗಳ ನೃತ್ಯ ಪ್ರದರ್ಶಿಸಿದವು. ಇನ್ನು ಕೆಲ ತಂಡದವರು ಕೋಲಾಟ ಆಡಿ ಗಮನ ಸೆಳೆದರು. ಹಾವೇರಿಯಿಂದ ಆಗಮಿಸಿದ ಕಲಾ ತಂಡ ಮಠದ ಪ್ರಾಂಗಣದಲ್ಲೇ ಸುಮಾರು ಒಂದೂವರೆ ಗಂಟೆ ಕಾಲ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆಯಿತು. ಮಠದ
ಆವರಣದಿಂದ ದ್ವಾರ ಬಾಗಿಲುವರೆಗೂ ಜನ ಸಾಲುಗಟ್ಟಿದ್ದರಿಂದ ಕಲಾ ತಂಡಗಳಿಗೆ ಬಿಡುವಿಲ್ಲದಂತಾಗಿತ್ತು.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.