ಮುದಗಲ್ಲ ಕೋಟೆಗೆ ಕಾಂಗ್ರೆಸ್‌ ಲಗ್ಗೆ


Team Udayavani, Sep 4, 2018, 12:20 PM IST

ray-1.jpg

ಮುದಗಲ್ಲ: ಸ್ಥಳೀಯ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಐತಿಹಾಸಿಕ ಮುದಗಲ್ಲ ಕೋಟೆಯಲ್ಲಿ ಕಾಂಗ್ರೆಸ್‌ ಧ್ವಜ ಹಾರುವುದು ಸ್ಪಷ್ಟವಾಗಿದೆ. ಸತತ 25 ವರ್ಷಗಳಿಂದ ಕಾಂಗ್ರೆಸ್‌ ಶಾಸಕರಿಲ್ಲದೆ ಮೆತ್ತಗಾಗಿದ್ದ ಕಾಂಗ್ರೆಸ್‌ಗೆ ಶಾಸಕ ಡಿ.ಎಸ್‌.ಹೂಲಗೇರಿ ನೇತೃತ್ವದಲ್ಲಿ ಸ್ಥಳೀಯ ಪುರಸಭೆ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿದೆ. ಒಟ್ಟು 23 ಸ್ಥಾನಗಳಲ್ಲಿ 14ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಸಾಧಿಸಿದ್ದು,

ಪುರಸಭೆ ಗದ್ದುಗೆ ಹಿಡಿಯಲಿದೆ. 8 ಸ್ಥಾನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆದ್ದಿದ್ದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಕಳಪೆ ಸಾಧನೆ ತೋರಿದೆ. ವಾರ್ಡ್‌ವಾರು ಫಲಿತಾಂಶ ಇಂತಿದೆ. ವಾರ್ಡ್‌-1ರಲ್ಲಿ ಕಾಂಗ್ರೆಸ್‌ನ ತಸ್ಲಿಮಾ ಹೈಮದ್‌ ಮುಲ್ಲಾ (253) ಗೆಲುವು ಸಾಧಿಸಿದ್ದರೆ, ಸಮೀಪ ಪ್ರತಿಸ್ಪರ್ಧಿ ಜೆಡಿಎಸ್‌ನ ಹಸನಸಾಬ ಮೌಲಾಸಾಬ (252) ಸೋತಿದ್ದಾರೆ.

ವಾರ್ಡ್‌-2ರಲ್ಲಿ ಜೆಡಿಎಸ್‌ನ ಅಮೀರ್‌ ಬೇಗ್‌ ಉಸ್ತಾದ್‌ (608) ಗೆಲುವಿನ ನಗೆ ಬೀರಿದ್ದರೆ, ಪಕ್ಷೇತರ ಅಭ್ಯರ್ಥಿ ಚಂದಾವಲಿಸಾಬ್‌ ಜಂಗ್ಲಿ (224) ಸೋತಿದ್ದಾರೆ. ವಾರ್ಡ್‌-3ರಲ್ಲಿ ಕಾಂಗ್ರೆಸ್‌ನ ಅಮೀನಾಬೇಗಂ (336) ಆಯ್ಕೆಯಾಗಿದ್ದರೆ, ಜೆಡಿಎಸ್‌ನ ದಾವಲಬೀ (225) ಸೋತಿದ್ದಾರೆ. ವಾರ್ಡ್‌-4ರಲ್ಲಿ ಕಾಂಗ್ರೆಸ್‌ನ ರಂಜಾನಬೀ (488) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ರೇಷ್ಮಾ ಬೇಗಂ (480) ಸೋತಿದ್ದಾರೆ. 

ವಾರ್ಡ್‌-5ರಲ್ಲಿ ಜೆಡಿಎಸ್‌ನ ರಸೂಲ್‌ಸಾಬ್‌ ಎಸ್‌.ಆರ್‌. (298) ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಆಬೀದ್‌ ಹುಸೇನ್‌ (141) ಪರಾಭವಗೊಂಡಿದ್ದಾರೆ. ವಾರ್ಡ್‌-6ರಲ್ಲಿ ಜೆಡಿಎಸ್‌ನ ಲತಾ ನಾಗರಾಜ ತಳವಾರ (344) ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್‌ ನ ಕಮಲವ್ವ ದ್ಯಾಮಪ್ಪ (339) ಸೋಲುಂಡಿದ್ದಾರೆ. ವಾರ್ಡ್‌-7ರಲ್ಲಿ ಕಾಂಗ್ರೆಸ್‌ನ ಹನುಮಂತ (288) ಗೆಲುವಿನ ನಗೆ ಬೀರಿದ್ದರೆ, ಜೆಡಿಎಸ್‌ನ ಶಿಲ್ಪಾ ವಾಲ್ಮೀಕಿ (130) ಸೋತಿದ್ದಾರೆ. 

ವಾರ್ಡ್‌-8ರಲ್ಲಿ ಕಾಂಗ್ರೆಸ್‌ನ ರಾಬಿಯಾ ಬೇಗಂ (317) ಆಯ್ಕೆಯಾಗಿದ್ದರೆ, ಜೆಡಿಎಸ್‌ನ ಲಕ್ಷ್ಮೀ ವಡ್ಡರ್‌ (229) ಸೋತಿದ್ದಾರೆ. ವಾರ್ಡ್‌-9ರಲ್ಲಿ ಕಾಂಗ್ರೆಸ್‌ನ ಶ್ರೀಕಾಂತಗೌಡ ಪಾಟೀಲ (333) ಜಯ ಸಾಧಿಸಿದ್ದರೆ, ಜೆಡಿಎಸ್‌ನ ಮಲ್ಲಿಕಾರ್ಜುನ ಮಾಟೂರು (242) ಸೋತಿದ್ದಾರೆ. ವಾರ್ಡ್‌-10ರಲ್ಲಿ ಜೆಡಿಎಸ್‌ನ ಗುಂಡಪ್ಪ ಗಂಗಾವತಿ (327) ಮತ ಪಡೆದು ಆಯ್ಕೆಯಾಗಿದ್ದರೆ, ಕಾಂಗ್ರೆಸ್‌ನ ಮಹಾಂತೇಶ ಪಾಟೀಲ (181) ಸೋತಿದ್ದಾರೆ. ವಾರ್ಡ್‌-11ರಲ್ಲಿ ಜೆಡಿಎಸ್‌ನ ದುರುಗಪ್ಪ ಕಟ್ಟಿಮನಿ (451) ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್‌ನ ರಾಮಣ್ಣ ಹಿರೇಮನಿ (345) ಪರಾಭವಗೊಂಡಿದ್ದಾರೆ.

ವಾರ್ಡ್‌-12ರಲ್ಲಿ ಜೆಡಿಎಸ್‌ನ ಬಾಬು ಉಪ್ಪಾರ (196) ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಹುಸೇನಸಾಬ್‌ (175) ಸೋಲುಂಡಿದ್ದಾರೆ. ವಾರ್ಡ್‌-13ರಲ್ಲಿ ಜೆಡಿಎಸ್‌ನ ಮಹಾಲಕ್ಷ್ಮೀ ಕರಿಯಪ್ಪ 441 ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಮಂಜುಳಾ ಭೀಮಣ್ಣ (335) ಸೋತಿದ್ದಾರೆ. ವಾರ್ಡ್‌-14ರಲ್ಲಿ ಕಾಂಗ್ರೆಸ್‌ನ ಎಸ್‌.ಕೆ. ಅಜ್ಮಿರ್‌ (217) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ಮಲ್ಲಪ್ಪ ಹೂಗಾರ (86) ಪರಾಭವಗೊಂಡಿದ್ದಾರೆ.

ವಾರ್ಡ್‌-15ರಲ್ಲಿ ಕಾಂಗ್ರೆಸ್‌ನ ಮಹಾದೇವಮ್ಮ ಗುತ್ತೇದಾರ (250) ಗೆಲುವು ಪಡೆದಿದ್ದರೆ, ಜೆಡಿಎಸ್‌ನ ತಬಸುಮ್‌ (208) ಸೋಲುಂಡಿದ್ದಾರೆ. ವಾರ್ಡ್‌-16ರಲ್ಲಿ ಜೆಡಿಎಸ್‌ನ ಮೈಬೂಬ ಪಾಷಾ 267 ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್‌ನ
ಖಾಜಾಪಾಷಾ ಗಾಡಿವಾನ ಸೋತಿದ್ದಾರೆ. ವಾರ್ಡ್‌-17ರಲ್ಲಿ ಕಾಂಗ್ರೆಸ್‌ನ ಕಾಶಿಂಬಿ (530) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ಸುಜಾತಾ (168) ಸೋತಿದ್ದಾರೆ.

ವಾರ್ಡ್‌-18ರಲ್ಲಿ ಕಾಂಗ್ರೆಸ್‌ನ ಶಬ್ಬೀರ್‌ ಪಾಷಾ (329) ಗೆಲುವು ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಮೊಹಿನ್‌ ಪಾಷಾ (151) ಸೋತಿದ್ದಾರೆ. ವಾರ್ಡ್‌-19ರಲ್ಲಿ ಬಿಜೆಪಿಯ ಲಕ್ಷ್ಮೀಬಾಯಿ (602) ಜಯ ಸಾಧಿಸಿದ್ದರೆ, ಕಾಂಗ್ರೆಸ್‌ನ ಸವಿತಾ (510) ಸೋಲುಂಡಿದ್ದಾರೆ.

ವಾರ್ಡ್‌-20ರಲ್ಲಿ ಕಾಂಗ್ರೆಸ್‌ನ ಶಿವನಾಗಪ್ಪ (492) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ರೆಹಮಾನ್‌ ಸಾಬ್‌ (436) ಸೋತಿದ್ದಾರೆ. ವಾರ್ಡ್‌-21ರಲ್ಲಿ ಕಾಂಗ್ರೆಸ್‌ನ ಅಮೀನಾಬೇಗಂ (389) ಗೆಲುವು ಸಾಧಿಸಿದ್ದರೆ, ಬಿಜೆಪಿಯ ನೇತ್ರಾವತಿ (188) ಸೋತಿದ್ದಾರೆ. ವಾರ್ಡ್‌-22ರಲ್ಲಿ ಕಾಂಗ್ರೆಸ್‌ನ ಶರಣಪ್ಪ ವಡ್ಡರ್‌ (428) ಆಯ್ಕೆಯಾಗಿದ್ದರೆ, ಜೆಡಿಎಸ್‌ನ ಷಣ್ಮುಖಪ್ಪ ಚೆಲುವಾದಿ (163) ಪರಾಭವಗೊಂಡಿದ್ದಾರೆ. ವಾರ್ಡ್‌-23ರಲ್ಲಿ ಕಾಂಗ್ರೆಸ್‌ನ ಜಯಶ್ರೀ (412) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ಸಾವಿತ್ರಿ (325) ಸೋತಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರ ವಿಜಯೋತ್ಸವ ಮುದಗಲ್ಲ: ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ವಾರ್ಡ್‌ವಾರು ಅಭ್ಯರ್ಥಿಗಳ ಗೆಲುವು ಘೋಷಣೆಯಾಗುತ್ತಿದ್ದಂತೆ ಆಯಾ ಭಾಗದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ವಿಜೇತ ಅಭ್ಯರ್ಥಿಗಳನ್ನು ಪಕ್ಷದ ಧ್ವಜದೊಂದಿಗೆ ವಾರ್ಡ್‌ಗಳಲ್ಲಿ ಮೆರವಣಿಗೆ ಮಾಡಿದರು. ವಿಜೇತ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಜೆಡಿಎಸ್‌ ವಿಜಯೋತ್ಸವ: ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಜೆಡಿಎಸ್‌ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಜೆಡಿಎಸ್‌ ಕಾರ್ಯಕರ್ತರು ಕೂಡ ತಮ್ಮ ವಾರ್ಡ್‌ ಅಭ್ಯರ್ಥಿ ಜಯ ಸಾಧಿಸುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.

ಹಿಂದೇನಾಗಿತ್ತು?
ಕಳೆದ ಬಾರಿಯ 19 ವಾರ್ಡ್‌ಗಳ ಪೈಕಿ 9 ಜೆಡಿಎಸ್‌, 7 ಕಾಂಗ್ರೆಸ್‌, 2 ಬಿಎಸ್‌ಆರ್‌, 1 ಪಕ್ಷೇತರರು ಜಯ ಗಳಿಸಿದ್ದರು. ಇಬ್ಬರು ಬಿಎಸ್‌ಆರ್‌ ಮತ್ತು ಒಂದು ಪಕ್ಷೇತರ ಬಲದೊಂದಿಗೆ ಜೆಡಿಎಸ್‌ ಪುರಸಭೆ ಅಧಿಕಾರದ ಗದ್ದುಗೆ ಏರಿತ್ತು. ಆದರೆ ಈ ಭಾರಿ ವಾರ್ಡ್‌ಗಳನ್ನು ವಿಂಗಡಿಸಿ 23 ವಾರ್ಡ್‌ಗಳನ್ನು ರಚಿಸಲಾಗಿತ್ತು. ಈಗ 14ರಲ್ಲಿ ಕಾಂಗ್ರೆಸ್‌, 8ರಲ್ಲಿ ಜೆಡಿಎಸ್‌,
ಕೇವಲ 1ರಲ್ಲಿ ಬಿಜೆಪಿ ಜಯ ಗಳಿಸಿದ್ದು, ಕಾಂಗ್ರೆಸ್‌ ಅಧಿಕಾರ ತನ್ನದಾಗಿಸಿಕೊಂಡಿದೆ.

ಟಾಪ್ ನ್ಯೂಸ್

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು

Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

Raichur Lok sabha: “35 ವರ್ಷದ ಸೇವಾನುಭವದಿಂದ ಕಾಲಮಿತಿಯೊಳಗೆ ಹೆಗುರುತು ಮೂಡಿಸುವೆ’

Raichur Lok sabha: “35 ವರ್ಷದ ಸೇವಾನುಭವದಿಂದ ಕಾಲಮಿತಿಯೊಳಗೆ ಹೆಗ್ಗುರುತು ಮೂಡಿಸುವೆ’

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.