ಪ್ರಾಥಮಿಕ ಶಾಲೆ ಮಕ್ಕಳಿಗೆ ರೈಲು-ಬಸ್ನಲ್ಲಿ ಶಿಕ್ಷಣ!
Team Udayavani, Nov 19, 2018, 1:14 PM IST
ದೇವದುರ್ಗ: ಸಮೀಪದ ಕೆ. ಇರಬಗೇರಾ ಕ್ಲಸ್ಟರ್ ವ್ಯಾಪ್ತಿಯ ಕ್ವಾರೇರೊದಡ್ಡಿ, ಆರೇರದೊಡ್ಡಿ ಮತ್ತು ಪುರಸಭೆ ವ್ಯಾಪ್ತಿಯ ಮುರಿಗೆಮ್ಮ ದಿಬ್ಬಿ ತಾಂಡಾ ಶಾಲೆಗಳ ಕಟ್ಟಡಕ್ಕೆ ಹೊರಗಡೆ ರೈಲು, ಬಸ್ಗಳಂತೆ ಬಣ್ಣ ಬಳಿದಿದ್ದು, ವಿದ್ಯಾರ್ಥಿಗಳನ್ನು, ಪಾಲಕರನ್ನು ಸೆಳೆಯುತ್ತಿವೆ.
ರೈಲಿನ ಬೋಗಿ: ಸಮೀಪದ ಕೆ.ಇರಬಗೇರಾ ಕ್ಲಸ್ಟರ್ ವ್ಯಾಪ್ತಿಯ ಕ್ವಾರೇರದೊಡ್ಡಿ ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ದಾನಮ್ಮ ಅವರ ಪರಿಶ್ರಮ, ಎಸ್ಡಿಎಂಸಿ ಸಹಕಾರದಿಂದ ಶಾಲೆಗೆ ರೈಲಿನ ಬೋಗಿಗಳಂತೆ ಬಣ್ಣ ಬಳಿಯಲಾಗಿದೆ. ಶಾಲೆ ಗ್ರಾಮಸ್ಥರು ಮತ್ತು ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 40 ಮಕ್ಕಳು ಇದ್ದಾರೆ. ಮಕ್ಕಳು ಶಾಲೆ ಒಳಗೆ, ಹೊರಗೆ ಬಂದರೆ ರೈಲಿನ ಬೋಗಿಯೊಳಗೆ ಬಂದಂತೆ ಮತ್ತು ರೈಲಿನಿಂದ ಇಳಿದಂತೆ ಕಾಣುತ್ತದೆ. ಶಾಲೆಗೆ ಈ ರೀತಿ ಬಣ್ಣ ಬಳಿದಿದ್ದನ್ನು ನೋಡಿ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಕೂಡ ತಮ್ಮ ಶಾಲೆಗೂ ಇದೇ ರೀತಿ ಬಣ್ಣ ಬಳಿಸಿ, ಗಮನ ಸೆಳೆಯುವಂತಾಗಬೇಕು ಎಂದು ಅಭಿಪ್ರಾಯ
ವ್ಯಕ್ತಪಡಿಸುತ್ತಿದ್ದಾರೆ.
ಬಸ್ನಂತೆ ಬದಲಾದ ಶಾಲೆ: ಸಮೀಪದ ಆರೇರದೊಡ್ಡಿ ಸರಕಾರಿ ಶಾಲೆ ಇದೀಗ ಕೆಎಸ್ಸಾರಿಸಿ ಬಸ್ನಂತೆ ಕಂಗೊಳಿಸುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಿಟಕಿಗೆ ಕುಳಿತು ಪ್ರಯಾಣಿಸುತ್ತಿರುವಂತೆ ಶಾಲಾ ಕೊಠಡಿ ಕಿಟಕಿ ಪಕ್ಕ ಕುಳಿತು ಪಾಠ ಕೇಳುವ ಮಕ್ಕಳು ಬಸ್ನಲ್ಲಿ ಪ್ರಯಾಣಿಸುತ್ತಿರುವಂತೆ ಭಾಸವಾಗುತ್ತಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 30ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಶಾಲೆ ಒಳಗೆ ಮಕ್ಕಳ ಜ್ಞಾನ ವೃದ್ದಿಗಾಗಿ ಮಹನೀಯರ ಚಿತ್ರಗಳು, ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಬಿ.ಎಸ್. ಕೇಶಾಪುರ ತಿಳಿಸಿದರು.
ಪ್ರಾಣಿ ಪಕ್ಷಿಗಳ ನೋಟ: ಪಟ್ಟಣದ ಪುರಸಭೆ ವ್ಯಾಪ್ತಿಯ ಮರಿಗೆಮ್ಮ ದಿಬ್ಬಿ ತಾಂಡಾ ಸರಕಾರಿ ಶಾಲೆ ಕೋಣೆಯ ಹೊರಗಡೆಯೂ ರೈಲಿನ ಬೋಗಿಗಳಂತೆ ಬಣ್ಣ ಬಳಿಯಲಾಗಿದೆ. ಕಾಂಪೌಂಡ್ ಒಳಗೆ ಪ್ರಾಣಿ, ಪಕ್ಷಿಗಳು, ವಾಹನಗಳು ಸೇರಿ ಸರಕಾರ ಸರ್ಕಾರಿ ಶಾಲೆಗಳಿಗೆ ಜಾರಿಗೊಳಿಸಿದ ಯೋಜನೆಗಳ ಮಾಹಿತಿಯನ್ನು
ಬರೆಸಲಾಗಿದೆ. ಶಾಲೆಗೆ ರೈಲಿನ ಬೋಗಿಗಳಂತೆ ಬಣ್ಣ ಬಳಿದಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ತುಳಜಾರಾಮ್.
ಕ್ವಾರೇರದೊಡ್ಡಿ, ಮರಿಗೆಮ್ಮ ದಿಬ್ಬಿ, ಆರೇರದೊಡ್ಡಿ ಶಾಲೆ ತರಗತಿ ಕೋಣೆಗಳ ಹೊರಗೆ ರೈಲಿನ ಬೋಗಿ, ಕೆಎಸ್ಸಾರಿrಸಿ ಬಸ್ನಂತೆ ಬಣ್ಣ ಬಳಿಸಿ ಸಾರ್ವಜನಿಕರ ಗಮನ ಸೆಳೆಯುವಂತಹ ಕಾರ್ಯವನ್ನು ಮುಖ್ಯ ಶಿಕ್ಷಕರು ಮಾಡಿದ್ದಾರೆ. ಶಾಲೆಗಳಿಗೆ ಭೇಟಿ ವೀಕ್ಷಿಸುವೆ.
ಡಾ| ಎಸ್.ಎಂ.ಹತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ