ಭತ್ತದ ಮೇವಿಗೆ ರೈತರ ದುಂಬಾಲು
Team Udayavani, Dec 1, 2018, 1:01 PM IST
ಮುದಗಲ್ಲ: ಪ್ರಸಕ್ತ ಸಾಲಿನಲ್ಲಿ ಭೀಕರ ಬರ ಆವರಿಸಿದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಉಂಟಾಗಿದ್ದು, ಜಾನುವಾರುಗಳನ್ನು ಸಾಕಲು ರೈತರು ಸಂಕಷ್ಟಪಡುವಂತಾಗಿದೆ. ಜಾನುವಾರು ಸಾಕಾಣಿಕೆದಾರರು, ರೈತರು ಭತ್ತದ ಮೇವಿಗೆ ಈಗಿನಿಂದಲೇ ದುಂಬಾಲು ಬಿದ್ದಿದ್ದಾರೆ.
ಇದರಿಂದಾಗಿ ಭತ್ತದ ಮೇವಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇಲ್ಲಿನ ರೈತರು ಸಿಂಧನೂರ, ಗಂಗಾವತಿ, ಮಾನ್ವಿ, ಸುರಪುರ ಸೇರಿದಂತೆ ನೀರಾವರಿ ಪ್ರದೇಶಗಳಿಗೆ ತೆರಳಿ ಭತ್ತದ ಮೇವು ಖರೀದಿಸಿ ತರುತ್ತಿದ್ದಾರೆ. ಮಳೆ ಅಭಾವ ಉಂಟಾಗಿದ್ದರಿಂದ ಸಜ್ಜೆ, ಜೋಳ, ಮೆಕ್ಕೆಜೋಳ ಬೆಳೆಗಳು ಸರಿಯಾಗಿ ಬಾರದೆ ಮೇವಿನ ಕೊರತೆ ಉಂಟಾಗಿದೆ. ವರ್ಷ ಪೂರ್ತಿ ಜಾನುವಾರುಗಳನ್ನು ಮೇಯಿಸಲು ಕಷ್ಟಸಾಧ್ಯವಾಗಿದೆ. ಆದ್ದರಿಂದ ರೈತರು ಮುಂದಿನ ದಿನಮಾನದಲ್ಲಿ ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಈಗಿನಿಂದಲೇ ಎಚ್ಚರಗೊಂಡಿದ್ದಾರೆ. ನಿತ್ಯ ಹತ್ತಾರು ಟ್ರ್ಯಾಕ್ಟರ್ ಮತ್ತು ಲಾರಿ ಮೂಲಕ ಮೇವು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಟ್ರ್ಯಾಕ್ಟರವೊಂದಕ್ಕೆ 10ರಿಂದ 15 ಸಾವಿರ ರೂ. ನೀಡಿ ಮೇವು ತರುತ್ತಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ