ಭೀಕರ ಬರ: ಭತ್ತದ ಮೇವಿಗೆ ಹೆಚ್ಚಿದ ಬೇಡಿಕೆ
Team Udayavani, Dec 15, 2018, 2:42 PM IST
ಮಸ್ಕಿ: ಮಳೆಬಾರದೇ ಭೀಕರ ಬರ ಎದುರಿಸುತ್ತಿರುವ ಇಲ್ಲಿನ ರೈತರಿಗೆ ತಮ್ಮ ಜಾನುವಾರುಗಳಿಗೆ ಮೇವು ಒದಗಿಸುವ
ಚಿಂತೆ ಎದುರಾಗಿದೆ. ಅನಿವಾರ್ಯವಾಗಿ ಅವರು ಭತ್ತದ ಮೇವಿನ ಖರೀದಿಗೆ ಮುಂದಾಗಿರುವ ದೃಶ್ಯ ದಿನನಿತ್ಯ ಕಂಡುಬರುತ್ತಿದೆ. ಮಸ್ಕಿ ಕಂದಾಯ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಸಾಕಿಕೊಂಡಿರುವ ಬಹುತೇಕ ರೈತರು ಭತ್ತದ ಮೇವು ಖರೀದಿಗಾಗಿ ತುಂಗಭದ್ರಾ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಮುಗಿ ಬಿದ್ದಿರುವುದು ಕಂಡು ಬಂದಿದೆ. ಮಸ್ಕಿ ತಾಲೂಕಿನ ಬಳಗಾನೂರ, ಹಂಚಿನಾಳ, ಕಡಬೂರು, ಉದಾಳ, ಮುದ್ದಾಪುರ, ಕಣ್ಣೂರು, ಸುಂಕನೂರು ಸೇರಿದಂತೆ ಇನ್ನಿತರ ಗ್ರಾಮಗಳಿಂದ ದಿನನಿತ್ಯ ಮೇವಿನ ಭತ್ತ ಹೊತ್ತ ನೂರಾರು ವಾಹನಗಳು ರಸ್ತೆಯಲ್ಲಿ ಸಾಗಿಸುತ್ತಿರುವುದು ಕಂಡು ಬರುತ್ತಿದೆ.
ಒಂದು ಎಕರೆ ಭತ್ತದ ಮೇವಿಗೆ ಐದಿನೈದು ನೂರು ರೂಪಾಯಿ ರೈತರು ನೀಡಬೇಕಾಗಿದೆ. ಒಂದು ಟ್ರಾಕ್ಟರ್ ಭತ್ತದ ಮೇವಿನ ಖರೀದಿಗೆ ಸುಮಾರು ಹತ್ತರಿಂದ ಹನ್ನೆರಡು ಸಾವಿರ ರೂ. ತಗಲುತ್ತದೆ. ಅನಿವಾರ್ಯವಾಗಿ ರೈತರು ಕೊಂಡುಕೊಳ್ಳುತ್ತಿದ್ದಾರೆ. ಸರಕಾರದಿಂದ ಇದುವರೆಗೂ ರೈತರಿಗಾಗಿ ಮಸ್ಕಿ ಕಂದಾಯ ವ್ಯಾಪ್ತಿಯಲ್ಲಿ ಮೇವಿನ ಸಂಗ್ರಹ ಕೇಂದ್ರ ಪ್ರಾರಂಭಿಸಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳತ್ತಾರೆ ಎಂಬುದು ಕಾದು ನೊಡಬೇಕಾದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!