ಸುಕ್ಷೇತ್ರ ಅಂಬಾಮಠದಲ್ಲಿ ವೈಭವದ ಕುಂಭೋತ್ಸವ
Team Udayavani, Jan 25, 2019, 10:36 AM IST
ಗೊರೇಬಾಳ: ಸಿಂಧನೂರು ತಾಲೂಕಿನ ಸುಕ್ಷೇತ್ರ ಸೋಮಲಾಪುರದ ಅಂಬಾಮಠದ ಜಾತ್ರೋತ್ಸವ ಅಂಗವಾಗಿ ಗುರುವಾರ ಸಾವಿರಾರು ಭಕ್ತರ ಮಧ್ಯೆ ಶ್ರೀ ಅಂಬಾದೇವಿ ಕುಂಭೋತ್ಸವ ವೈಭವದಿಂದ ನಡೆಯಿತು.
ತನ್ನಿಮಿತ್ತ ಬೆಳಗ್ಗೆ ಶ್ರೀ ಅಂಬಾದೇವಿಗೆ ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮಧ್ಯಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಿಂದ ಕುಂಭೋತ್ಸವ ನಡೆಯಿತು. ತಹಶೀಲ್ದಾರ್ ಶಿವಾನಂದ ಪಿ.ಸಾಗರ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಸಿಪಿಐ ನಾಗರಾಜ ಕಮ್ಮಾರ, ಅರ್ಚಕರು, ವಿವಿಧ ಭಾಗದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು.