ಸಮ್ಮಿಶ್ರ ಸರಕಾರ: ಹಿಂದೆ ಉರುಳಿಸಿದವರೇ ಒಂದಾಗಿದ್ದಾರೆ ಇಂದು!


Team Udayavani, May 23, 2018, 10:13 AM IST

hdk.jpg

ಇಂದು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತಿರುವ ಹೊತ್ತಿನಲ್ಲಿ, ಇಂತಹ ರಾಜಕೀಯ ಹೊಂದಾಣಿಕೆಗಳು ಯಶಸ್ವಿಯಾಗಿರುವ ಹೆಚ್ಚು ನಿದರ್ಶನಗಳಿಲ್ಲದೆ, ಇದೂ ಕೊನೆ ಮುಟ್ಟಿàತೇ ಎಂಬ ಚಿಂತೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತಿದೆ.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಜತೆಯಾಗಿ ಸರಕಾರ ರಚಿಸುವ ಮೂಲಕ ರಾಷ್ಟ್ರಪತಿ ಆಳ್ವಿಕೆಯನ್ನು ತಪ್ಪಿಸುವುದು ಸಾಧ್ಯವಾದರೂ, ಸ್ಪಷ್ಟ ಜನಾದೇಶವಿಲ್ಲದೆ ಅಥವಾ ಜನಾದೇಶಕ್ಕೆ ವಿರುದ್ಧವಾಗಿ ಅವರು ರಾಜ್ಯದಲ್ಲಿ ಆಡಳಿತ ನಡೆಸುವಂತಾಗಿದೆ. ಹಾಗೆ ನೋಡಿದರೆ ಬಿಜೆಪಿಯ ಕಥೆಯೂ ಅದೇ. ಅದು ಈ ಎರಡು ಪಕ್ಷಗಳಿಗಿಂತ ಹೆಚ್ಚು ಜನರ ನಂಬಿಕೆಯನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಅಧಿಕಾರ ನಡೆಸುವಷ್ಟು ಸ್ಪಷ್ಟ ಜನಾದೇಶವನ್ನು ಪಡೆದಿಲ್ಲ. ಅದೂ ಅಲ್ಲದೆ, ಬೇರೆ ಪಕ್ಷಗಳ ಚುನಾಯಿತ ಜನಪ್ರತಿ ನಿಧಿಗಳು ತಮ್ಮ ಮತದಾರರನ್ನು ವಂಚಿಸಿ, ಚುನಾವಣಾ ಅಕ್ರಮ ಎಸಗುವ ಅಥವಾ ಪಕ್ಷಾಂತರ ನಡೆಸುವ ಮೂಲಕ ತನ್ನ ಸರಕಾರವನ್ನು ಬೆಂಬಲಿಸುವರೆಂದು ನಿರೀಕ್ಷಿಸಿ, ನಗೆಪಾಟಲಿಗೂ ಈಡಾಯಿತು.

ರಾಜ್ಯದಲ್ಲಿ ಅತಿ ಕಡಿಮೆ ಜನಾದೇಶ ಪಡೆದ ಪಕ್ಷವೊಂದರ ಮುಖಂಡರು ನಮ್ಮ ಮುಖ್ಯಮಂತ್ರಿಯಾಗುತ್ತಿದ್ದಾರೆ. ಈ ಹಿಂದೆಯೂ ಕೇಂದ್ರ ಹಾಗೂ ಕೆಲವು ರಾಜ್ಯಗಳಲ್ಲಿ ಅತಿ ಕಡಿಮೆ ಶಾಸಕರಿದ್ದ ಪಕ್ಷಗಳು ಅಧಿಕಾರ ನಡೆಸಿರುವುದನ್ನು ನೋಡಿದ್ದೇವೆ. ಹೆಚ್ಚೇಕೆ? ನಮ್ಮ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ತಂದೆ ಎಚ್‌.ಡಿ. ದೇವೇಗೌಡರೇ ಪ್ರಧಾನಿ ಯಾಗಿ ಅಲ್ಪಮತದ ಸರಕಾರವನ್ನು ಮುನ್ನಡೆಸಿದ್ದರು. ಕಾಂಗ್ರೆಸ್‌ ಅವರಿಗೆ ಬಾಹ್ಯ ಬೆಂಬಲ ಕೊಟ್ಟಿತ್ತು. ಆಗಿನ ಕಾಲದಲ್ಲಿ ಜನತಾದಳ ಲೋಕಸಭೆಯಲ್ಲಿ 46 ಸಂಸದರನ್ನು ಹೊಂದಿತ್ತು. ಇದು ಲೋಕಸಭೆಯ ಒಟ್ಟು ಸಂಖ್ಯಾಬಲದ ಹತ್ತನೇ ಒಂದರಷ್ಟೂ ಆಗುವುದಿಲ್ಲ. ದೇವೇಗೌಡರ ಉತ್ತರಾಧಿಕಾರಿಯಾದ ಐ.ಕೆ. ಗುಜ್ರಾಲರ ಅವಧಿಯಲ್ಲೂ ಇದೇ ಕಥೆ. ಅವರೂ ಕಾಂಗ್ರೆಸ್‌ ಕೃಪಾಕಟಾಕ್ಷ ದಿಂದಲೇ ಪ್ರಧಾನಿ ಹುದ್ದೆಯಲ್ಲಿ ಒಂದಷ್ಟು ಕಾಲ ಮುಂದುವರಿದರು. ಮತ್ತೂಬ್ಬರು ಮಾಜಿ ಪ್ರಧಾನಿ ಚಂದ್ರಶೇಖರ್‌. ಅವರ ಪಕ್ಷ ಲೋಕಸಭೆಯಲ್ಲಿ 60 ಸದಸ್ಯರನ್ನಷ್ಟೇ ಹೊಂದಿದ್ದರೂ ಆಡಳಿತ ನಡೆಸಿದರು. ಅವರಿಗೂ ಕಾಂಗ್ರೆಸ್‌ ಬಾಹ್ಯ ಬೆಂಬಲ ಕೊಟ್ಟಿತ್ತು. ಈ ಮೂವರಿಗೆ ಹೋಲಿಸಿದರೆ ಕುಮಾರ ಸ್ವಾಮಿ ಅವರ ಸ್ಥಿತಿ ಸ್ವಲ್ಪ ಮೇಲು.

ಸದ್ಯದ ಮಟ್ಟಿಗಾದರೂ ತಮ್ಮ ಪಕ್ಷದ ನಿಲುವಿಗೆ ಅಚಲವಾಗಿ ಅಂಟಿಕೊಂಡ ಶಾಸಕರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸಲೇ ಬೇಕು. ಮುಂದಿನ ಐದು ವರ್ಷಗಳಲ್ಲಿ ಅವರೆಲ್ಲ ಹೇಗೆ ವರ್ತಿಸು ತ್ತಾರೆ ಎಂಬುದು ಕಾದು ನೋಡುವ ವಿಚಾರ. ಪಕ್ಷಾಂತರ ನಿಷೇಧ ಕಾಯ್ದೆಗೆ ಎರಡು ತಿದ್ದುಪಡಿಗಳನ್ನು (52 ಹಾಗೂ 91ನೇಯದು) ತರಲಾಗಿದ್ದರೂ ಅವಕಾಶವಾದಿ ನಾಯಕರಿಗೆ ಮೂಗುದಾರ ತೊಡಿಸುವಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಈ ಕುತೂಹಲ ವಂತೂ ಇದ್ದೇ ಇದೆ.

ತನ್ನದೇ ಶಾಸಕರನ್ನು ಅನರ್ಹಗೊಳಿಸುವಂತೆ ಕಳೆದ ಸಲ ಸಲ್ಲಿಸಿರುವ ಅರ್ಜಿಯನ್ನು ಜೆಡಿಎಸ್‌ ನೆನಪಿಟ್ಟುಕೊಂಡಿರಲಿಕ್ಕಿಲ್ಲ. 2016ರ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂ ಸಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ ತನ್ನ ಪಕ್ಷದ ಏಳು ಶಾಸಕರನ್ನು ಅನರ್ಹಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ಕುರಿತಾಗಿ ಕಳೆದ ವಿಧಾನಸಭೆಯ ಸ್ಪೀಕರ್‌ ಕೆ.ಬಿ. ಕೋಳಿವಾಡರು ನೀಡಿದ ಆದೇಶ ಹೆಚ್ಚಿನವರ ಗಮನಕ್ಕೂ ಬಂದಂತಿಲ್ಲ. ಸರಿಸುಮಾರು ಎರಡು ವರ್ಷಗಳ ಸುದೀರ್ಘ‌ ವಿಳಂಬದ ಬಳಿಕ ಅವರು ಜೆಡಿಎಸ್‌ ನಾಯಕರ ಅರ್ಜಿಯನ್ನು ತಳ್ಳಿಹಾಕಿದರು, ಅದೂ ಹೈಕೋರ್ಟ್‌ ಮಧ್ಯಪ್ರವೇಶ ಮಾಡಿದ ಮೇಲೆ. ಹೈಕೋರ್ಟ್‌ ಕೂಡ ಕೋಳಿ ವಾಡರಿಗೆ ತೀರ್ಮಾನ ಕೈಗೊಳ್ಳಲು ಮೇ 27ರ ವರೆಗೆ ಕಾಲಾವಕಾಶ ನೀಡಿತ್ತು. ಕೋಳಿವಾಡರು ಮೇ 18ರ ಮುಂಜಾನೆ ಹೊರಡಿಸಿದ ಆದೇಶ ಅತ್ಯಂತ ಜಾಣ ನಡೆಯ ರೂಪದಲ್ಲಿ ಗುರುತಿಸಿಕೊಂಡಿತು. ಅದೇ ದಿನ ಮಧ್ಯಾಹ್ನದ 
ವೇಳೆಗೆ ರಾಜ್ಯ ಪಾಲ ವಜುಭಾಯಿ ವಾಲಾ ಅವರು ಕೆ.ಜಿ. ಬೋಪಯ್ಯ ಅವರನ್ನು ಪ್ರಸಕ್ತ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿದರು. ಕೋಳಿವಾಡರು ವ್ಯತಿರಿಕ್ತ ತೀರ್ಪನ್ನೇನಾದರೂ ಕೊಟ್ಟಿದ್ದರೆ ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಮೂವರು ಶಾಸಕರಿಗೆ ಸಂಕಷ್ಟ ತರುತ್ತಿತ್ತು. 

ಜಮೀರ್‌ ಅಹಮದ್‌, ಅಖಂಡ ಶ್ರೀನಿವಾಸಮೂರ್ತಿ ಹಾಗೂ ಭೀಮಾ ನಾಯ್ಕ ಅವರು 6 ವರ್ಷ ಅನರ್ಹತೆಯ ಶಿಕ್ಷೆ ಎದುರಿಸ ಬೇಕಾಗುತ್ತಿತ್ತು. ಆಗ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾ ರದ ಬಹುಮತದಲ್ಲೂ ಕುಸಿಯುತ್ತಿತ್ತು. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಇನ್ನೂ ನಾಲ್ವರು ಚುನಾವಣೆಯಲ್ಲಿ ಸೋತಿದ್ದರಿಂದ ಅವರನ್ನು ಅನರ್ಹ ಗೊಳಿಸಿದ್ದರೂ ಹೆಚ್ಚಿನ ಪರಿಣಾಮವೇನೂ ಆಗುತ್ತಿರಲಿಲ್ಲ. ವಿಶೇಷವೆಂದರೆ, ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ವತಃ ಕೆ.ಬಿ. ಕೋಳಿವಾಡರೂ ಪರಾಭವ ಅನುಭವಿಸಿ ದವರು. ಭವಿಷ್ಯ ದಲ್ಲಿ ಅವರನ್ನು “ಕುರ್ಚಿ ಬಿಸಿ ಮಾಡಿ ಹೋದ ಸ್ಪೀಕರ್‌’ ಎಂದಷ್ಟೇ ಜನ ನೆನಪಿಟ್ಟುಕೊಂಡಾರು.

ದೇಶ ಹಾಗೂ ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿರುವ ಸಮ್ಮಿಶ್ರ ಸರಕಾರಗಳ ಇತಿಹಾಸವನ್ನು ಗಮನಿಸಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಮೈತ್ರಿಯನ್ನು ಹಾಳು ಮಾಡಿದ ಕುಖ್ಯಾತಿಯನ್ನೇ ಹೊಂದಿರುವುದನ್ನು ಗುರುತಿಸ ಬಹುದು. ಆಡಳಿತವನ್ನು ಮಕ್ಕಳಾಟಿಕೆಯಾಗಿ ಪರಿಭಾವಿಸಿದ ಣಈ ಎರಡೂ ಪಕ್ಷಗಳು ತಂಡ ಸ್ಫೂರ್ತಿಯನ್ನು ಎಂದೂ ಪ್ರದರ್ಶಿಸಲೇ ಇಲ್ಲ. ಸಮ್ಮಿಶ್ರ ಸಂಸ್ಕೃತಿಯೇ ಕರ್ನಾಟಕದಲ್ಲಿ ಇಲ್ಲ. 

2006ರ ಜನವರಿಯಲ್ಲಿ ತಮ್ಮದೇ ಪಕ್ಷದ (ಜೆಡಿಎಸ್‌) ವಿರುದ್ಧ ಬಂಡಾಯ ವೆದ್ದ ಎಚ್‌.ಡಿ. ಕುಮಾರಸ್ವಾಮಿ, ಧರ್ಮ ಸಿಂಗ್‌ ಸರಕಾರ ಉರುಳಲು ಕಾರಣರಾದರು. ತಲಾ 20 ತಿಂಗಳು ಮುಖ್ಯಮಂತ್ರಿ ಸ್ಥಾನ ಹಂಚಿಕೊಂಡು ಎರಡೂ ಪಕ್ಷಗಳು ಆಡಳಿತ ನಡೆಸಬೇ ಕೆಂಬ ಒಪ್ಪಂದವನ್ನು ಮುರಿದರು. ಕಾಂಗ್ರೆಸ್‌ನಿಂದ “ವಿಚ್ಛೇದನ’ ಪಡೆದ ಮೇಲೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ, ಒಪ್ಪಂದದಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಹೊತ್ತಿಗೆ ಜೆಡಿಎಸ್‌ ಅವರ ಕಾಲ ಕೆಳಗಿನ ರತ್ನಕಂಬಳಿ ಎಳೆದು ಕೆಡವಿತು.

ಕೇವಲ ಏಳು ದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ, ವಿಶ್ವಾಸಮತವನ್ನೂ ಯಾಚಿಸದೆ 2007ರ ನವೆಂಬರ್‌ 19ರಂದು ರಾಜೀನಾಮೆ ನೀಡಿ ನಿರ್ಗಮಿಸಿ ದರು. ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಮುಂದೆ ರಾಷ್ಟ್ರಪತಿ ಭವನದಲ್ಲಿ ಬಿಜೆಪಿಯ ಶಾಸಕರೊಂದಿಗೆ ತನ್ನ ಶಾಸಕರ ಪರೇಡ್‌ ಮಾಡಿಸಿ, ಸಂಖ್ಯಾಬಲ ಪ್ರದರ್ಶಿಸಿದ್ದ ಜೆಡಿಎಸ್‌, ಬೆಂಗಳೂರಿಗೆ ಮರಳುವಷ್ಟರಲ್ಲಿ ನಿಲುವು ಬದಲಿಸಿ, ಬಿಜೆಪಿಗೆ ಬೆಂಬಲ ನೀಡುವುದಿಲ್ಲವೆಂದು ಘೋಷಿಸಿತು!

ಸಮ್ಮಿಶ್ರ ಸರಕಾರಗಳನ್ನು ನಡೆಸುವ ವಿಚಾರದಲ್ಲಿ ಇದು ಜೆಡಿಎಸ್‌ನ ಕಳಪೆ ಸಾಧನೆ. ಮುಂದಿನ ಐದು ವರ್ಷಗಳ ಕಾಲವಾದರೂ ಜೆಡಿಎಸ್‌ ನಾಯಕರು ಜವಾಬ್ದಾರಿಯಿಂದ ವರ್ತಿಸಿ, ಈ ಮೈತ್ರಿಯನ್ನಾದರೂ ಯಶಸ್ವಿಗೊಳಿಸಲಿ ಎಂಬುದೇ ರಾಜ್ಯದ ಜನರ ನಿರೀಕ್ಷೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳಲ್ಲಿ ಈ ನಾಟಕೀಯತೆ ಇದೆ. ಮೋದಿ ಹಾಗೂ ಅಮಿತ್‌ ಶಾ ವಿರೋಧಿ ಅಂಶ ಹಾಗೂ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಂತ್ರವೇ ಹಳೆಯ ಕಾಲದಲ್ಲಿ ಬಡಗಿಗಳು ಮರಗಳನ್ನು ಜೋಡಿಸಲು ಬಳಸುತ್ತಿದ್ದ “ಮರವಜ್ರ’ ಎಂಬ ಅಂಟಿನಂತೆ ಕೆಲಸ ಮಾಡಿ, ಎರಡೂ ಪಕ್ಷಗಳ ನಡುವೆ ಮೈತ್ರಿಯನ್ನು ಬೆಸೆದಿದೆ. 1970ರ ದಶಕದ ವರೆಗೆ ಕಾಂಗ್ರೆಸೇತರ ಪಕ್ಷಗಳು ಒಗ್ಗೂಡಿದಂತೆ ಈಗ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತಿವೆ. ರಾಜಕಾರಣಿಗಳ ತಾವು “ಸೆಕ್ಯೂಲರ್‌’ ಹಾಗೂ “ಸೋಷಲಿಸ್ಟ್‌’ ಎಂಬ ಹೇಳಿಕೆಯನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. 
ಆದರೆ, ಕಳೆದ ಕೆಲವು ದಿನಗಳಿಂದ ಪಂಚ ಹಾಗೂ ಸಪ್ತ ತಾರಾ ಹೊಟೇಲ್‌, ರೆಸಾರ್ಟ್‌ಗಳಲ್ಲಿ ತಂಗಿರುವ ನಮ್ಮ ಶಾಸಕರಿಂದ ಸಮಾಜವಾದವನ್ನು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ತಮ್ಮ ಶಾಸಕರನ್ನು ಸಾಧಾರಣ ಬಜೆಟ್‌ನ ಹೊಟೇಲ್‌ ಅಥವಾ ಸರಕಾರಿ ಅತಿಥಿ ಗೃಹಗಳಲ್ಲಿ ಉಳಿಸಿಕೊಂಡಿದ್ದರೆ ರಾಜಕೀಯ ಪಕ್ಷಗಳ ನಾಯಕರು ಸಮಾಜವಾದದ ಬಗ್ಗೆ ಮಾತನಾಡಬಹುದಿತ್ತೇನೋ.

ಕೇರಳ ಮಾದರಿಯ ಮೈತ್ರಿಗಳು
ಸಮ್ಮಿಶ್ರ ಸರಕಾರಗಳನ್ನು ನಡೆಸುವ ವಿಚಾರದಲ್ಲಿ ಕರ್ನಾಟಕವು ತನ್ನ ನೆರೆಯ ರಾಜ್ಯವಾದ ಕೇರಳದಿಂದ ಸಾಕಷ್ಟು ಕಲಿಯಬೇಕಿದೆ. ಆ ರಾಜ್ಯದಲ್ಲಿ ಸರಳ ಬಹುಮತವಷ್ಟೇ ಇದ್ದ ಮೈತ್ರಿ ಸರಕಾರಗಳೂ ಉತ್ತಮ ಆಡಳಿತ ನೀಡಿವೆ. ಪಕ್ಷಗಳು ನೆಲೆಗಳನ್ನು ಬದಲಿಸಿರಬಹುದು. ಆದರೆ, ತಣ್ತೀ ಸಿದ್ಧಾಂತಗಳನ್ನು ಗೌರವಿಸುವ ಅಲ್ಲಿನ ಶಾಸಕರು ತಮ್ಮ ನಿಷ್ಠೆಯನ್ನು ಎಂದಿಗೂ ಬದಲಿಸಲಿಲ್ಲ. ಸಂಯುಕ್ತ ರಂಗದ ನಾಯಕ ದಿ| ಚೇಲತ್‌ ಅಚ್ಯುತ ಮೆನನ್‌ ಅವರು 1970ರಿಂದ 1977ರವರೆಗೆ ಕೇರಳದ ಮುಖ್ಯಮಂತ್ರಿ ಯಾಗಿದ್ದರು. ಕೆಲವು ವರ್ಷಗಳವರೆಗೆ ಅಲ್ಲಿನ ಎಡರಂಗ ಸರಕಾರ ಹೌದೋ ಅಲ್ಲವೋ ಎಂಬಂತಹ ಬಹುಮತವನ್ನು ಹೊಂದಿತ್ತು. ಸ್ಪಷ್ಟ ಬಹುಮತವಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ 1989ರಿಂದ 94ರ ಅವಧಿಯಲ್ಲಿ ಸ್ಥಿರ ಸರಕಾರ ನೀಡುವಲ್ಲಿ ವಿಫ‌ಲವಾಯಿತು. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರ ಅಭಿಮಾನಿಗಳು ನೆನಪಿಸಿಕೊಳ್ಳಲೂ ಬಯಸದ ಪಿ.ವಿ. ನರಸಿಂಹ ರಾಯರು 1991ರ ಜೂನ್‌ ತಿಂಗಳಿಂದ 1993ರವರೆಗೆ ಅಲ್ಪಮತದ ಸರಕಾರವನ್ನೇ ಯಾವುದೇ ಸಮಸ್ಯೆಯಿಲ್ಲದಂತೆ ಮುನ್ನಡೆಸಿದ್ದರು.

ಮೇ 12ರಂದು ನಡೆದ ಚುನಾವಣೆಯಲ್ಲಿ ಜನರಿಂದ ತಿರಸ್ಕೃತ ಗೊಂಡ ಕಾಂಗ್ರೆಸ್‌ ಪಕ್ಷದ ಶಾಸಕರು ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ತೂರಿಬಂದಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾ ಜಯ ಅನುಭವಿಸಿದ ಸಿದ್ದರಾಮಯ್ಯ ಅವರಲ್ಲದೆ, ಅವರ ಸಂಪುಟದ 16 ಸಚಿವರು ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಇದು ಕಾಂಗ್ರೆಸ್‌ ಬಗೆಗೆ ಜನರ ತಿರಸ್ಕಾರವ ಲ್ಲವೇ? ಈ ಹಿನ್ನೆಲೆಯಲ್ಲಿ, ಜೆಡಿಎಸ್‌ ಸರಕಾರ ರಚಿಸುವುದಿದ್ದರೆ ಕಾಂಗ್ರೆಸ್‌ ಬಾಹ್ಯ ಬೆಂಬಲ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಇದೆ. ಆದರೆ, ಜೆಡಿಎಸ್‌ ಶಾಸಕಾಂಗ ಪಕ್ಷಕ್ಕೆ ಆಡಳಿತ ನಡೆಸುವಲ್ಲಿ ಅನುಭವದ ಕೊರತೆ ಇದ್ದು, ಹೇಗೆ ನಿಭಾಯಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಿದ್ದರಾಮಯ್ಯ ಬಹಳ ಹಿಂದೆಯೇ ಪಕ್ಷ ತ್ಯಜಿಸಿದ್ದು, ಎಂ.ಸಿ. ನಾಣಯ್ಯ ಅವರ ನಿವೃತ್ತಿ, ಎಂ.ಪಿ. ಪ್ರಕಾಶ್‌ ಅವರ ನಿಧನ ಹಾಗೂ ಬಸವಕಲ್ಯಾಣದಲ್ಲಿ ಸೋತ ಪಿ.ಜಿ.ಆರ್‌. ಸಿಂಧ್ಯಾ ಅವರ ಕಾರಣದಿಂದಾಗಿ ಜೆಡಿಎಸ್‌ ಈಗ ಆಡಳಿತದ ದೃಷ್ಟಿಯಿಂದ ದುರ್ಬಲವಾಗಿದೆ. ಕಾಂಗ್ರೆಸ್‌ ಬಾಹ್ಯ ಬೆಂಬಲ ನೀಡಿ ಜೆಡಿಎಸ್‌ ಸರಕಾರ ರಚಿಸುತ್ತಿದ್ದರೆ, ಅದು ದೇವೇಗೌಡರ ಮಾರ್ಗದರ್ಶನದಲ್ಲಿ ನಡೆಯುವ ಕುಮಾರಸ್ವಾಮಿ – ರೇವಣ್ಣ ಅವರ ಆಡಳಿತವಾಗಿಯೇ ಉಳಿಯುತ್ತಿತ್ತು ಎಂಬುದಂತೂ ಸ್ಪಷ್ಟ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.