ಶೇ.10 ಮೀಸಲಾತಿ: ಅಗ್ನಿ ಪರೀಕ್ಷೆಯಲ್ಲಿ ಗೆದ್ದರೆ ಇತಿಹಾಸ ನಿರ್ಮಾಣ


Team Udayavani, Jan 16, 2019, 12:30 AM IST

w-11.jpg

ಭಾಗವಹಿಸಿದ್ದ ವಿದ್ಯಾರ್ಥಿನಿಯೋರ್ವಳು ಮಾತನಾಡುತ್ತಾ, ಕರ್ನಾಟಕದಲ್ಲಿರುವ ಕೇವಲ ಶೇ. 4ರಷ್ಟು ಮೇಲ್ವರ್ಗದ ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ಸಿಗುತ್ತಿದೆ ಎಂದು ಆಕ್ಷೇಪಿಸಿದ್ದಳು. ಆದರೆ ಆಕೆಯ ಆ ಅಭಿಪ್ರಾಯ ತಪ್ಪಿನಿಂದ ಕೂಡಿದೆ. ಆಕೆ ಭಾವಿಸಿದಂತೆ ಇಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಮೇಲ್ವರ್ಗದವರಲ್ಲ. ಹಿಂದುಳಿದ ವರ್ಗದಲ್ಲಿರುವ ಕೆನೆಪದರಕ್ಕೆ ಸೇರುವ ವರ್ಗದವರು ಕೂಡ ಇದರಲ್ಲಿ ಸೇರುತ್ತಾರೆ. 

ಸಾಮಾನ್ಯ ವರ್ಗದಲ್ಲಿರುವ ಅಥವಾ ಮೇಲ್ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವವರಿಗೂ ನರೇಂದ್ರ ಮೋದಿ ಸರಕಾರವು ಶೇ.10 ಮೀಸಲಾತಿ ನೀಡಲು ನಿರ್ಧರಿಸಿರುವ ವಿಷಯದಲ್ಲಿ ಈಗ ಕರ್ನಾಟಕ ಮಾತ್ರವಲ್ಲದೆ ದೇಶದೆಲ್ಲೆಡೆ ಬಿಸಿಬಿಸಿ ಚರ್ಚೆಯಾಗುತ್ತಿರುವುದು ಸಹಜ ವಿದ್ಯಮಾನ. ಸಂಸತ್ತಿನ ಎರಡೂ ಸದನಗಳಲ್ಲಿ ಇದು ಸಣ್ಣ ವಿರೋಧದೊಂದಿಗೆ ಅಂಗೀಕಾರಗೊಂಡಿದೆ. ಹೀಗೆ ಮೇಲ್ವರ್ಗದಲ್ಲಿರುವ ಬಡವರಿಗೆ ಮೀಸಲಾತಿ ನೀಡುವುದು ಕೇಂದ್ರ ಸರಕಾರದ ನಿರ್ಧಾರ ಎನ್ನುವುದಕ್ಕಿಂತಲೂ ಜನರ ಸಾಮೂಹಿಕ ಅಭಿಪ್ರಾಯವೇ ಎನ್ನುವುದೇ ಹೆಚ್ಚು ಸರಿಯಾಗುತ್ತದೆ. 

ನಿಜವಾಗಿ ಹೇಳುವುದಾದರೆ ರಾಜ್ಯ ಅಥವಾ ಕೇಂದ್ರ ಸರಕಾರ ಆದಾಯ ಆಧಾರದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿದ್ದು ಇದೇ ಮೊದಲ ಬಾರಿಯಲ್ಲ. ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲಾತಿ ಮುಂದುವರಿಯುತ್ತಿರುವುದರಿಂದ ಹೊಸ ಮೀಸಲಾತಿಯು ಆದಾಯ ಆಧಾರ ವಿಶಿಷ್ಟ ಮೀಸಲಾತಿ ಯೋಜನೆ ಎಂದು ಗುರುತಿಸಿಕೊಳ್ಳುವುದಿಲ್ಲ. ಆದಾಯ ಮಾನದಂಡದಲ್ಲಿ ಸಾಮಾನ್ಯ ವರ್ಗದವರಿಗೆ ಶೇ. 10ರಷ್ಟು ಮತ್ತು ಜಾತಿ ಆಧಾರದಲ್ಲಿ ಶೇ. 50ರಷ್ಟು ಮೀಸಲಾತಿ ಸಿಗಲಿದೆ. 

ದೇಶದಲ್ಲಿ ಮೀಸಲಾತಿ ವಿಷಯದಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸಿರುವ ಎರಡು ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು (ಇನ್ನೊಂದು ತಮಿಳುನಾಡು), 1963ರಿಂದ 1977ರ ವರೆಗೆ ಆರ್ಥಿಕ ಸ್ಥಿತಿಗತಿ ಮತ್ತು ಉದ್ಯೋಗದ ಆಧಾರದ ಮೀಸಲಾತಿ ವ್ಯವಸ್ಥೆಯನ್ನು ಹೊಂದಿತ್ತು. ಹೆತ್ತವರ ವಾರ್ಷಿಕ ಆದಾಯ 1,200 ರೂ. ಮೀರಿರದ (ಬಳಿಕ ಅದನ್ನು 2,400 ರೂ. ಗಳಿಗೆ ಪರಿಷ್ಕರಿಸಲಾಗಿತ್ತು) ಕುಟುಂಬದ ಮಕ್ಕಳನ್ನು ಸರಕಾರಿ ಉದ್ಯೋಗಕ್ಕೆ ಪರಿಗಣಿಸಲಾಗುತ್ತಿತ್ತು. ಜತೆಗೆ ಕೃಷಿಕರು ಮತ್ತು ಇತರ ಕುಶಲ ಕಾರ್ಮಿಕರ ಮಕ್ಕಳಿಗೂ ಈ ಅವಕಾಶವಿತ್ತು. ಇಲ್ಲಿ ಜಾತಿ ವಿಷಯವು ಪ್ರಧಾನವಾಗಿರಲಿಲ್ಲ. ಸರಕಾರದ ಈ ಆದೇಶವನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ನ್ಯಾ| ಪಿ.ಬಿ. ಗಜೇಂದ್ರಗಡ್ಕರ್‌ ಅವರ ನೇತೃತ್ವದ ಪೀಠವು, 1963ರ ಡಾ. ಆರ್‌. ನಾಗನಗೌಡ ಸಮಿತಿಯ ಬಾಲಾಜಿ ವರ್ಸಸ್‌ ಮೈಸೂರು ರಾಜ್ಯ ಪ್ರಕರಣದ ತೀರ್ಪಿನ ಆಧಾರದಲ್ಲಿ ರದ್ದು ಮಾಡಿತ್ತಾದರೂ, ಸರಕಾರ ಒಂದು ಮಧ್ಯಂತರ ವ್ಯವಸ್ಥೆಯ ಮೂಲಕ ಇದನ್ನು ಜಾರಿಗೆ ತಂದಿತ್ತು. ಹಿಂದುಳಿದ ವರ್ಗಗಳನ್ನು ನಿರ್ಧರಿಸಲು ಜಾತಿ ಮತ್ತು ಸಮುದಾಯವೇ ಆಧಾರವಾಗಬೇಕು ಎಂದು ಅಭಿಪ್ರಾಯಪಟ್ಟು ಸುಪ್ರೀಂಕೋರ್ಟ್‌ ಸರಕಾರದ ಆದೇಶವನ್ನು ರದ್ದು ಮಾಡಿತ್ತು. ಬಾಲಾಜಿ ಪ್ರಕರಣದಲ್ಲಿಯೇ ಸುಪ್ರೀಂಕೋರ್ಟ್‌ ಗರಿಷ್ಠ ಮೀಸಲಾತಿ ಪ್ರಮಾಣವನ್ನು ಶೇ. 50 ಎಂದು ನಿಗದಿ ಮಾಡಿದೆ. 1993ರ ಇಂದ್ರಾ ಸಾಹಿ° ವರ್ಸಸ್‌ ಕೇಂದ್ರ ಸರಕಾರದ ಮಂಡಲ್‌ ವರದಿ ತೀರ್ಪಿನಲ್ಲಿ ಇದೇ ಅಭಿಪ್ರಾಯವನ್ನು ಪುನರಾವರ್ತಿಸಲಾಗಿತ್ತು. 

ದೇವರಾಜ ಅರಸು ಸರಕಾರವು ಮತ್ತೂಂದು ಹೊಸ ವ್ಯವಸ್ಥೆ ಜಾರಿಗೆ ತಂದಿದ್ದು, ವಾರ್ಷಿಕ 4,800 ರೂ. ಆದಾಯದೊಳಗಿನ ಹಿಂದುಳಿದ ವರ್ಗದ ಕುಟುಂಬದವರನ್ನು ಹಿಂದುಳಿದ ವಿಶೇಷ ಗುಂಪು ಎಂದು ಗುರುತಿಸಿ ಅವರಿಗೆ ಮೀಸಲಾತಿ ನೀಡಿತ್ತು. ಇದನ್ನು 1977ರಲ್ಲಿ ಮೀಸಲಾತಿಗಾಗಿ ರಚಿಸಿದ ಹಾವನೂರು ಕಮಿಷನ್‌ ಅನ್ನು ರೂಪಿಸಿದ ಬಳಿಕ ಜಾರಿಗೆ ತರಲಾಯಿತು. ಈ ಸ್ಪೆಷಲ್‌ ಕೆಟಗರಿ ರಿಸರ್ವೇಶನ್‌ ಅನ್ನು ಹೈಕೋರ್ಟಿನಲ್ಲಿ ಮತ್ತು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. (ಕೆ. ಸಿ. ವಸಂತ ಕುಮಾರ್‌ ವರ್ಸಸ್‌ ಕರ್ನಾಟಕ ರಾಜ್ಯ ಸರಕಾರ 1985). ಆದಾಯ ಮೂಲ ಪರೀಕ್ಷೆಯು 2000ದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೂ ಅನ್ವಯವಾಗ ಬೇಕು ಎಂದು ಇದಕ್ಕೆ ಸಂಬಂಧಿಸಿದ ನಿರ್ದಿಷ್ಟ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಹೇಳಿತ್ತು.

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ಕೊಂಡೇ ಪ್ರಸ್ತುತ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೂ ಶೇ. 10 ಮೀಸಲಾತಿ ನೀಡಲು ಮುಂದಾಗಿದೆ ಎಂಬ ಕಾರಣಕ್ಕೆ ಇದಕ್ಕೆ ಸದ್ಯ ವಿರೋಧ ವ್ಯಕ್ತವಾಗಿದೆ. ವಿಪಕ್ಷಗಳ ದಾಟಿ ಹೇಗಿದೆ ಎಂದರೆ ಅವುಗಳ ಎಂದೂ ಮತಗಳಿಸುವದಕ್ಕಾಗಿ ಜನಪ್ರಿಯ ಯೋಜನೆಗಳನ್ನು ಘೋಷಿಸಿಯೇ ಇಲ್ಲ ಎಂಬಂತೆ. ಆದರೂ ಮತದಾರರನ್ನು ಓಲೈಸಬೇಕಾಗಿರುವ ಕಾರಣ ಇಂಥ ಜನಪ್ರಿಯ ಯೋಜನೆಯನ್ನು ಕಟುವಾಗಿ ವಿರೋಧಿಸಲು ವಿಪಕ್ಷಗಳು ಮುಂದಾಗುತ್ತಿಲ್ಲ. ಬಿಜೆಪಿಯು ಮತ್ತೂಂದು ಬಾರಿಗೆ ಅಧಿಕಾರದಲ್ಲುಳಿಯಲು ಬಯಸುತ್ತಿರುವ ಪಕ್ಷವಾಗಿದೆ. ಇದು ರಾಜಕೀಯ ಸನ್ಯಾಸ ಸ್ವೀಕರಿಸುತ್ತಿಲ್ಲ. ಮೇಲ್ವರ್ಗದವರನ್ನು ಓಲೈಸುವ ಕ್ರಮದಲ್ಲಿ ಎಸ್‌ಸಿ, ಎಸ್‌ಟಿ ಮತಗಳು ಕೈ ತಪ್ಪುವ ಅಪಾಯ ಸಾಧ್ಯತೆಯ ಕುರಿತು ಕೂಡ ಬಿಜೆಪಿ ಚಿಂತಿಸುತ್ತಿದೆ. 2002ರ ಗೋಧೊತ್ತರ ಗಲಭೆಯ ಬಳಿಕ ಬಿಜೆಪಿಯು ಮುಸ್ಲಿಮರ ಮತಗಳನ್ನು ಪಡೆದು ಅಧಿಕಾರ ಉಳಿಸಿಕೊಳ್ಳವ ಯಾವ ನಿರೀಕ್ಷೆಯನ್ನೂ ಉಳಿಸಿಕೊಂಡಿಲ್ಲ.

ಇತ್ತೀಚೆಗೆ ಕನ್ನಡದ ಟಿವಿ ಚಾನೆಲೊಂದರಲ್ಲಿ ಪ್ರಸಾರವಾದ ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯೋರ್ವಳು ಮಾತ ನಾಡುತ್ತಾ, ಕರ್ನಾಟಕದಲ್ಲಿರುವ ಕೇವಲ ಶೇ. 4ರಷ್ಟು ಮೇಲ್ವರ್ಗದ ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ಸಿಗುತ್ತಿದೆ ಎಂದು ಆಕ್ಷೇಪಿಸಿದ್ದಳು. ಆದರೆ ಆಕೆಯ ಆ ಅಭಿಪ್ರಾಯ ತಪ್ಪಿನಿಂದ ಕೂಡಿದೆ. ಆಕೆ ಭಾವಿಸಿದಂತೆ ಇಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಮೇಲ್ವರ್ಗದವರಲ್ಲ. ಹಿಂದುಳಿದ ವರ್ಗದಲ್ಲಿರುವ ಕೆನೆಪದರಕ್ಕೆ ಸೇರುವ ವರ್ಗದವರು ಕೂಡ ಇದರಲ್ಲಿ ಸೇರುತ್ತಾರೆ. ಕರ್ನಾಟಕದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರೆಂಬ ಎರಡು ಪ್ರಭಾವಿ ಸಮುದಾಯಗಳು (ಇದರಲ್ಲಿ ಕೆಲವರು ಹಿಂದುಳಿದವರು ಎಂದು ಪರಿಗಣಿಸಲ್ಪಡುತ್ತಾರೆ), ಬ್ರಾಹ್ಮಣರು, ವೈಶ್ಯರು ಮತ್ತು ಇತರ ಕೆಲವರು ಕೂಡ ಇದರಲ್ಲೇ ಸೇರುತ್ತಾರೆ. ಸರಿಯಾಗಿ 100 ವರ್ಷಗಳ ಹಿಂದೆ ನ್ಯಾ| ಲೆಸ್ಲಿà ಮಿಲ್ಲರ್‌ ಕಮಿಟಿಯು ಬ್ರಾಹ್ಮಣರು, ಯೂರೋಪಿಯನ್ಸ್‌ ಮತ್ತು ಆಂಗ್ಲೋ ಇಂಡಿಯನ್ಸ್‌ ಮಾತ್ರ ಮೈಸೂರಿನಲ್ಲಿ ಮುಂದುವರಿದ ಸಮುದಾಯ ಗಳೆಂದು ವರ್ಗೀಕರಿ ಸಿತ್ತು. ಆ ಬಳಿಕ ಶ್ರೀಮಂತ ಮತ್ತು ಪ್ರಭಾವಶಾಲಿ ಎಸ್‌ಸಿ, ಎಸ್‌ಟಿ ಸಹಿತ ಕೆಲವು ಇತರ ಜಾತಿಯವರು ಉತ್ತಮ ಸ್ಥಿತಿಯನ್ನು ಕಂಡುಕೊಂಡವು. ಶ್ರೀಮಂತ ಯುರೋಪಿಯನ್ನರು ಮತ್ತು ಆಂಗ್ಲೋ ಇಂಡಿಯನ್ನರು ತಮ್ಮ ಒಳಿತಿಗಾಗಿ ದೇಶ ತೊರೆದರು. ಕೇವಲ ಬಡ ಆಂಗ್ಲೋ ಇಂಡಿಯನ್ನರು ಮಾತ್ರ ನಮ್ಮ ಜತೆ ಉಳಿದುಕೊಂಡರು. 

ಈಗ ಹೊಸದಾಗಿ ಜಾರಿಗೆ ತರಲುದ್ದೇಶಿಸಿರುವ ಶೇ. 10 ಮೀಸಲಾತಿಗೆ ಕುಟುಂಬದ ವಾರ್ಷಿಕ ಆದಾಯ 8 ಲ. ರೂ. ನಿಗದಿ ಮಾಡಿರುವುದು ಸರಿಯಲ್ಲ. ಮುಂದುವರಿದ ಜಾತಿಯವರ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಲು ಈ ಮಾನದಂಡ ಮಾಡಿಕೊಂಡಿರುವುದು ತುಂಬಾ ಹೆಚ್ಚಾಯಿತು. ಇದನ್ನು ಕಡಿಮೆ ಮಾಡಲೇ ಬೇಕಾಗಿದೆ. ಹಿಂದುಳಿದ ವರ್ಗದಲ್ಲಿರುವ ಕೆನೆಪದರ ವ್ಯಾಪ್ತಿಯವರನ್ನು ಗುರುತಿಸಲು ಕೂಡ ಇದೇ ಮಾನದಂಡವನ್ನು ಅನುಸರಿಸಲಾಗುತ್ತಿದೆ. 8 ಲಕ್ಷ ರೂ. ಅನ್ನೇ ಅಂತಿಮಗೊಳಿಸಿದರೆ ಇದರ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಅದರಿಂದಾಗಿ ಹೆಚ್ಚಿನ ಅನರ್ಹ ಒಬಿಸಿಗಳು ಕೂಡ ಹಿಂದುಳಿದವರ ಸಾಲಿಗೆ ಸೇರುವ ಸಾಧ್ಯತೆಯಿದೆ. ಉದಾಹರಣೆಗೆ, ಮುಜರಾಯಿ ದೇವ ಸ್ಥಾನ ವೊಂದರ ಮಾಸಿಕ 3 ಸಾವಿರ ರೂ. ಆದಾಯ ಹೊಂದಿರುವ ಅರ್ಚಕರ ಮಗು ಮಾಸಿಕ 67 ಸಾವಿರ ರೂ. ಆದಾಯ ಹೊಂದಿ ರುವ ಕುಟುಂಬದವರೊಂದಿಗೆ ಸ್ಪರ್ಧಿಸಲು ಸಾಧ್ಯ ಎಂದು ನಾವು ನಿರೀಕ್ಷಿಸುವಂತಿಲ್ಲ. ಆಗಮ ಶಾಸ್ತ್ರ ಕಲಿತ ಅರ್ಚಕರಿಗಿಂತ ಬೆಂಗಳೂರಿನಲ್ಲಿ ತಿಂಗಳಿಗೆ 17 ಸಾವಿರ ರೂ. (ಸರಕಾರ ನಿಗದಿ ಮಾಡಿ ರು ವುದು) ಆದಾಯ ಪಡೆಯುವ ಸ್ವೀಪರ್‌ ಕೆಲಸ ಮಾಡು ವವರ (ಕಸ ಗುಡಿಸುವವರ) ಆರ್ಥಿಕ ಸ್ಥಿತಿಯೇ ಉತ್ತಮವಿರುತ್ತದೆ. 

ನಾವು ಸಾಮಾಜಿಕ ಹಿಂದುಳಿದವರ ಬಗೆಗಿನ ಚಿಂತನೆಯನ್ನು ಮರುಪರಿಶೀಲಿಸಬೇಕಾಗಿದೆ. ಕಡಿಮೆ ಆದಾಯವು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗುತ್ತದೆ. ಈಗಿನ ನಗರೀಕರಣದಲ್ಲಿ ಉದ್ಯೋಗ ಆಧಾರಿತ ತಾರತಮ್ಯ ಬಹುತೇಕ ಕೊನೆಗೊಂಡಿದೆ. ಆದಾಯ ತೆರಿಗೆ ಪಾವತಿಸದ ಸಾಮಾನ್ಯ ವರ್ಗದ ಜನರು ಆರ್ಥಿಕವಾಗಿ ಹಿಂದುಳಿದವರು ಮತ್ತು ಅವರನ್ನು ಒಬಿಸಿಗೆ ಸಮಾನವಾಗಿ ಪರಿಗಣಿಸಬೇಕು ಎಂದು 2006ರಲ್ಲಿ ಮನಮೋಹನ್‌ ಸಿಂಗ್‌ ಸರಕಾರ ಮೇಲ್ವರ್ಗದಲ್ಲಿರುವ ಬಡವರಿಗೆ ಮೀಸಲಾತಿ ನೀಡುವುದಕ್ಕಾಗಿ ರಚಿಸಿದ ನಾಲ್ಕು ಸದಸ್ಯರ ಸಮಿತಿಯು ಹೇಳಿದೆ. ಇದು ತುಂಬಾ ಸರಿಯಾಗಿದೆ. ಈ ಸಮಿತಿಯನ್ನು ಮೇಜರ್‌ ಜನರಲ್‌ ಎಸ್‌. ಆರ್‌. ಸಿನ್ಹ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಮೋದಿ ಸರಕಾರವು ಕೂಡ ಈ ಶಿಫಾರಸನ್ನು ಪರಿಗಣಿಸಬೇಕಾಗಿದೆ. ಈಗ ಸಂವಿಧಾನಕ್ಕೆ ಮಾಡಿರುವ ತಿದ್ದುಪಡಿಗೆ ಆ ಸಮಿತಿಯು ಆಗಲೇ ಶಿಫಾರಸು ಮಾಡಿತ್ತು ಎಂಬುದು ಉಲ್ಲೇಖನೀಯ ಸಂಗತಿ.

ಕೇಂದ್ರ ಸರಕಾರದ ವಿಷಯದಲ್ಲಿ ಹೇಳುವುದಾದರೆ, ಮೇಲ್ವ ರ್ಗದ ಜಾತಿಯಲ್ಲಿರುವ ಬಡವರಿಗೂ ಶೇ. 10 ಮೀಸಲಾತಿಯನ್ನು ಮೊತ್ತಮೊದಲು ನೀಡಿದ್ದು ಪಿ.ವಿ. ನರಸಿಂಹ ರಾವ್‌ ನೇತೃತ್ವದ ಸರಕಾರವಾಗಿತ್ತು. ಆದರೆ ಸರಕಾರದ ಈ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿತ್ತು. ಕೇವಲ ಆರ್ಥಿಕ ಮಾನದಂಡ ದಲ್ಲಿ ಮಾತ್ರವೇ ಹಿಂದುಳಿದ ವರ್ಗ ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಇಂದ್ರಾ ಸಾಹಿ° ತೀರ್ಪಿನ ಆಧಾರದಲ್ಲಿ ಅಭಿಪ್ರಾಯಪಟ್ಟಿತ್ತು. ಕೆಲವು ವಿಶೇಷ ಪರಿಸ್ಥಿತಿಯಲ್ಲಿ ಮಾತ್ರ ಮೀಸಲಾತಿಯ ಪ್ರಮಾಣ ಶೇ. 50ನ್ನು ದಾಟಬಹುದು ಎಂದು ಕೂಡ ಸುಪ್ರೀಂಕೋರ್ಟ್‌ ಈ ಸಂದರ್ಭದಲ್ಲಿ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ಎಂ. ಎಚ್‌. ಕಾನಿಯಾ ನೇತೃತ್ವದ 9 ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ 6-3ರಂತೆ ಈ ತೀರ್ಪು ಪ್ರಕಟವಾಗಿತ್ತು. ಈಗ ಮೋದಿ ಸರಕಾರ ಏನು ಮಾಡಿದೆಯೋ, ಅದನ್ನೇ ಮಾಡಲು 2003, 2004ರಲ್ಲಿ ಮಾಡಲು ಆಗಿನ ಎ.ಬಿ. ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಪರಿಶೀಲಿಸಿತ್ತು. ಅದಕ್ಕಾಗಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಬಾಲ್ಮೀಕಿ ಪ್ರಸಾದ್‌ ಸಿಂಗ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.

ಈಗ ಮೋದಿ ಸರಕಾರ ಏನು ಮಾಡಲು ಮುಂದಾಗಿದೆಯೋ ಅದನ್ನು ಹಿಂದೆಯೇ ಕೆಲವರು ಮಾಡಲು ಶ್ರಮಿಸಿ ಸೋತಿದ್ದರು. ಹೊಸ ಮೀಸಲಾತಿಯನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟಿನ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಪ್ರಕರಣಗಳು ಬಾಕಿಯಾಗುವುದು ಖಚಿತ. ಇಂಥದ್ದೊಂದು ಗಂಭೀರ ವಿಷಯದ ಬಗ್ಗೆ ಜನರಲ್ಲೂ ಚರ್ಚೆಗೆ ಅವಕಾಶ ಕೊಡಬೇಕು. ಇಂಥ ಮಹತ್ವದ ವಿಷಯದ ಬಗೆಗೆ ಸಂಸತ್ತಿನ ಎರಡು ಸದನಗಳಲ್ಲಿ ಕೇವಲ ಎರಡು ದಿನಗಳ ಚರ್ಚೆ ತುಂಬಾ ಕಡಿಮೆಯಾಯಿತು ಎಂದು ಹೇಳಬೇಕಾಗುತ್ತದೆ. ನ್ಯಾಯಾಲಯದ ಈ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ ನೀಡುವಲ್ಲಿ ಮೋದಿ ಸರಕಾರ ಸಫ‌ಲವಾದರೆ ಅದೊಂದು ಐತಿಹಾಸಿಕ ನಿರ್ಧಾರವೆಂದೇ ದಾಖಲಾಗಲಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.