ಸ್ವಸ್ಥ ಭಾರತಕ್ಕಾಗಿ ದೈಹಿಕ ಶಿಕ್ಷಣಕ್ಕೆ ಸಿಗಲಿ ಒತ್ತು 


Team Udayavani, Jul 5, 2018, 6:00 AM IST

8.jpg

ಒಕ್ಕಲು ಮಕ್ಕಳು ಹೊಲ ಗದ್ದೆಗಳಲ್ಲಿ ಕಠಿಣ ದುಡಿಮೆ ಮಾಡಿ ಸುಖೀ ಜೀವನ ನಡೆಸಿದ್ದರು. ಕೃಷಿ ಕಾರ್ಯಗಳಿಗೆ ಬೇಕಾದ ತರಗೆಲೆ, ಸೌದೆ ಮುಂತಾದವುಗಳನ್ನು ಹಲವು ಮೈಲು ದೂರದ ಕಾಡಿನಿಂದ ಹೊತ್ತು ತರುವುದರಲ್ಲೇ  ಹಲವು ಕಿ. ಮೀ.ಗಳ ವಾಕಿಂಗ್‌ ಆಗುತ್ತಿತ್ತು.  ಹಾರೆ, ಪಿಕಾಸಿ ಮುಂತಾದ ಕೃಷಿ ಉಪಕರಣಗಳೇ ಅವರ ದೈನಂದಿನ ವ್ಯಾಯಾಮದ ಪರಿಕರಗಳಾಗಿದ್ದವು. 50-60ಕೆ. ಜಿ. ತೂಕದ ಭಾರವನ್ನು ಕೃಷಿಕರು ಲೀಲಾಜಾಲವಾಗಿ ಎತ್ತಿ ಎಲ್ಲೆಂದರಲ್ಲಿ ಒಯ್ಯುತ್ತಿದ್ದರು. ಭಾರ ಎತ್ತಲು ಅವರು ಇಂದಿನ ಯುವಕರಂತೆ ಜಿಮ್‌ಗಳಿಗೆ ಹೋಗಿ ಪ್ರಾಕ್ಟೀಸ್‌ ಮಾಡಬೇಕಾದ ಅವಶ್ಯಕತೆ ಏನೂ ಇರಲಿಲ್ಲ.

ಇತ್ತೀಚೆಗೆ ಪ್ರಧಾನಮಂತ್ರಿ ನರೆಂದ್ರ ಮೋದಿಯವರು ಸ್ವಸ್ಥ ಭಾರತಕ್ಕಾಗಿ ಹಮ್‌ “ಫಿಟ್‌ ಹೈ ತೋ ಇಂಡಿಯಾ ಫಿಟ್‌’ ಎನ್ನುವ ಅಭಿಯಾನವನ್ನು ಪ್ರಾರಂಭಿಸಿದರು. ತಮ್ಮ ಬೆಳಗಿನ ವ್ಯಾಯಾಮದ ದಿನಚರಿಯ ವಿಡಿಯೊ ತುಣುಕನ್ನು ಜಾಲತಾಣಗಳಿಗೆ ಅಪ್‌ ಲೋಡ್‌ ಮಾಡುವ ಮೂಲಕ ಜನತೆಯ ಮುಂದಿಟ್ಟರು. ತಮ್ಮಂತೆ ಇತರರೂ ತಮ್ಮ ವ್ಯಾಯಾಮದ ವಿಡಿಯೋ ಕ್ಲಿಪ್ಪಿಂಗ್‌ ಅಪ್‌ ಲೋಡ್‌ ಮಾಡುವಂತೆ ವಿನಂತಿಸಿದರು. ಪ್ರಧಾನಮಂತ್ರಿಯವರ ಫಿಟ್‌ ನೆಸ್‌ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ರಾಜ್ಯವರ್ಧನ್‌ ರಾಠೊಡ್‌, ಕಿರಣ್‌ ರಿಜಿಜು ಮೊದಲಾದ ಕೇಂದ್ರೀಯ ಮಂತ್ರಿಗಳು, ಕ್ರಿಕೆಟ್‌ ಮತ್ತು ಸಿನಿಮಾ ಜಗತ್ತಿನ ತಾರೆಯರು ಕೈ ಜೋಡಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಈ ಇಳಿ ವಯಸ್ಸಿನಲ್ಲಿ ತಾವಿನ್ನೂ ಫಿಟ್‌ ಆಗಿರುವ ಸಂದೇಶ ನೀಡಿದರು.

ಆದರೂ ದೇಶದ ಅಧಿಕಾಂಶ ಜನರಲ್ಲಿ ಇನ್ನೂ ಆರೋಗ್ಯದ ಕುರಿತಾದ ಅಪೇಕ್ಷಣೀಯ ಮಟ್ಟದ ಜಾಗೃತಿಯಾಗಲಿ ಅಥವಾ ಕಾಳಜಿಯಾಗಲಿ ಮೂಡಿಲ್ಲ ಎನ್ನುವುದು ವಾಸ್ತವ ಸಂಗತಿ. ಸ್ವಚ್ಛ ಭಾರತದ ಅಭಿಯಾನದಂತೆ ಸ್ವಸ್ಥ ಭಾರತ ಕೂಡಾ ಸಮಗ್ರ ಭಾರತದ ಮನೆ ಮನಗಳ ಭಿಯಾನವಾಗಬೇಕಾಗಿದೆ. ಕೃಷಿಕರ ಆರೋಗ್ಯದ ಗುಟ್ಟು ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ದೃಢಕಾಯರೂ ಆಜಾನುಬಾಹುಗಳೂ ಆಗಿದ್ದ ಒಕ್ಕಲು ಮಕ್ಕಳು ನೂರಾರು ವರ್ಷಗಳಿಂದ ಹೊಲ ಗದ್ದೆಗಳಲ್ಲಿ ಕಠಿಣ ದುಡಿಮೆ ಮಾಡಿ ಸುಖೀ ಜೀವನ ನಡೆಸಿದ್ದರು. “ಊಟ ಬಲ್ಲವನಿಗೆ ರೋಗವಿಲ್ಲ’ ಎಂದು ಗಟ್ಟಿಯಾಗಿ ನಂಬಿದ್ದರು. ಕೃಷಿ ಕಾರ್ಯಗಳಿಗೆ ಬೇಕಾದ ಸೊಪ್ಪು, ತರಗೆಲೆ, ಸೌದೆ ಮುಂತಾದವುಗಳನ್ನು ಹಲವು ಮೈಲು ದೂರದ ಕಾಡಿನಿಂದ ಹೊತ್ತು ತರುವುದರÇÉೇ ಹಲವು ಕಿ. ಮೀ.ಗಳ ವಾಕಿಂಗ್‌ ಆಗುತ್ತಿತ್ತು. ಇನ್ನು ಹಾರೆ, ಪಿಕಾಸಿ ಮುಂತಾದ ಕೃಷಿ ಉಪಕರಣಗಳೇ ಅವರ ದೈನಂದಿನ ವ್ಯಾಯಾಮದ ಪರಿಕರಗಳಾಗಿದ್ದವು. ಗದ್ದೆಗಳಿಗೆ ಬೇಕಾದ ಗೊಬ್ಬರವನ್ನೋ, ಬೆಳೆದ ಫ‌ಸಲನ್ನೋ ತಲೆಯ ಮೇಲೆ ಇಟ್ಟುಕೊಂಡು ದೂರದಲ್ಲಿರುವ ಮನೆಗೋ ಅಥವಾ ಮಾರು ಕಟ್ಟೆಗೋ ಕೊಂಡೊಯ್ಯುತ್ತಿದ್ದ ಕೃಷಿಕರಿಗೆ ಹತ್ತಾರು ಕೆ. ಜಿ. ತೂಕದ ವಸ್ತುಗಳನ್ನು ಹೊತ್ತು ಲಗುಬಗೆಯಿಂದ ಹೆಜ್ಜೆ ಹಾಕುವುದು ಇಂದಿನ ಜನರು ಭಾವಿಸುವಂತೆ ಕಠಿಣ ಕಾರ್ಯವಾಗಿರಲಿಲ್ಲ. 50-60ಕೆ. ಜಿ. ತೂಕದ ಭಾರವನ್ನು ಕೃಷಿಕರು ಲೀಲಾಜಾಲವಾಗಿ ಎತ್ತಿ ಎಲ್ಲೆಂದರಲ್ಲಿ ಒಯ್ಯುತ್ತಿದ್ದರು. ಭಾರ ಎತ್ತಲು ಅವರು ಇಂದಿನ ಯುವಕರಂತೆ ಜಿಮ್‌ಗಳಿಗೆ ಹೋಗಿ ಪ್ರಾಕ್ಟೀಸ್‌ ಮಾಡಬೇಕಾದ ಅವಶ್ಯಕತೆ ಏನೂ ಇರಲಿಲ್ಲ. ಕೃಷಿಯಲ್ಲಿ ಮೈ ಕೈ ಕೆಸರು ಮಾಡಿಕೊಂಡಿದ್ದ ರೈತರ ಮಕ್ಕಳೇ ಹಿಂದೆ ಸೇನೆಯಲ್ಲೂ ಸೈ ಎನ್ನಿಸಿಕೊಂಡಿದ್ದರು. ಕೆಲವು ದಶಕಗಳ ಹಿಂದೆ ಸೇನೆಯ ಭರ್ತಿಯಲ್ಲಿ ರೈತರ ಮಕ್ಕಳು ಬರಿಗಾಲಿನಲ್ಲಿ ಓಡಿ ಶಹರದ ಮಕ್ಕಳನ್ನು ಹಿಂದಿಕ್ಕಿ ಶಹಬ್ಟಾಸ್‌ ಎನಿಸಿಕೊಳ್ಳುತ್ತಿದ್ದರು. ಸೇನೆಯ ಭರ್ತಿಗೆ ಅನಿವಾರ್ಯವಾಗಿದ್ದಕ್ಕಿಂತ ಹೆಚ್ಚಿನ ಪುಶ್‌ಅಪ್‌, ಚಿನ್‌ಅಪ್‌ನ್ನು ನಿರಾಯಾಸವಾಗಿ ಮಾಡುತ್ತಿದ್ದರು. ಜೈ ಜವಾನ್‌, ಜೈ ಕಿಸಾನ್‌ ಎನ್ನುವ ಘೋಷಣೆಗೆ ಅನ್ವರ್ಥಕವೆನಿಸುವಂತಿದ್ದರು.

ಬದಲಾದ ಜೀವನ ಶೈಲಿ
ಈ ಮೂರು-ನಾಲ್ಕು ದಶಕಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಾಗತೀಕರಣ ನಗರಗಳ ಜನರ ಜೀವನವನ್ನಷ್ಟೇ ಅಲ್ಲ ಗ್ರಾಮೀಣರ ಬದುಕಿನಲ್ಲೂ ಸಾಕಷ್ಟು ಸ್ಥಿತ್ಯಂತರವನ್ನು ಹುಟ್ಟು ಹಾಕಿದೆ. ಸಮಯದ ಬೇಡಿಕೆಗ ನುಗುಣವಾಗಿ ಕೃಷಿಯ ಮೇಲೆ ಅವಲಂಬನೆಯಾಗಿದ್ದ ಹೆಚ್ಚುವರಿ ಜನಸಂಖ್ಯೆಯನ್ನು ಔದ್ಯೋಗಿಕ ಕ್ಷೇತ್ರದತ್ತ ವರ್ಗಾಯಿಸುವುದೇನೋ ಅನಿವಾರ್ಯ ನಿಜ. ಆದರೆ ಈ ರೀತಿ ಕೃಷಿಯನ್ನು ಬಿಟ್ಟು ಅನ್ಯ ಉದ್ಯೋಗಗಳಿಗೆ ಶರಣಾದ ಜನ ತಮ್ಮ ಜೀವನಶೈಲಿಯಲ್ಲಿ ಸಾಂಪ್ರದಾಯಿಕವಾಗಿ ತಮಗರಿವಲ್ಲದೇ ಹಾಸುಹೊಕ್ಕಾಗಿದ್ದ ಆರೋಗ್ಯಕರ ಕ್ರಿಯೆಗಳಿಂದ ದೂರವಾದರು. ಇದರೊಂದಿಗೆ ಪಾಶ್ಚಾತ್ಯ ಆಹಾರ ಶೈಲಿಯ ಮೈದಾ ಬಳಕೆಯ ತಿಂಡಿ ತಿನಿಸುಗಳ ಸೇವನೆಯಲ್ಲಿ ಹೆಚ್ಚಳ, ಧೂಮಪಾನ, ತಂಬಾಕು ಸೇವನೆಯೇ ಮುಂತಾದವುಗಳಿಂದಾಗಿ ಸ್ಥೂಲ ಕಾಯರಾಗಿ ನಾನಾ ರೀತಿಯ ಆರೊಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ವಾಹನಗಳ ಸೌಕರ್ಯದಲ್ಲಿ ಹೆಚ್ಚಳ, ದೈನಂದಿನ ಕೆಲಸಗಳಲ್ಲಿ ಯಂತ್ರಗಳ ಬಳಕೆಯಲ್ಲಿ ವೃದ್ಧಿ, ತಡರಾತ್ರಿಯವರೆಗೆ ಅಥವಾ ರಾತ್ರಿ ಪಾಳಿ ದುಡಿತವೂ ಕೊಂಚ ಮಟ್ಟಿಗೆ ಆರೋಗ್ಯದ ಏರುಪೇರುಗಳಿಗೆ ಕಾರಣವಾಗುತ್ತಿದೆ. 

ಆರೋಗ್ಯದ ಅರಿವು
ಖೇದಕರವೇನೆಂದರೆ ದೈಹಿಕ ಶಿಕ್ಷಣಕ್ಕೆ ನಮ್ಮ ಶಾಲೆ ಕಾಲೇಜುಗಳಲ್ಲಿ ಕನಿಷ್ಠ ಪ್ರಾಮುಖ್ಯತೆ ನೀಡಲಾಗುತ್ತದೆ. ಮಗುವಿಗೆ ಸಣ್ಣ ವಯಸ್ಸಿನಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವ ಅಗತ್ಯವಿದೆ. Sound mind in sound body ಅರ್ಥಾತ್‌ ಸ್ವಸ್ಥ ಶರೀರದಲ್ಲಿ ಮಾತ್ರ ಸ್ವಸ್ಥ ಮನಸ್ಸು ಇರಲು ಸಾದ್ಯ. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿರಬೇಕಾದರೆ ಅವರು ಆರೋಗ್ಯವಂತರೂ, ಶಾರೀರಕವಾಗಿ ಸರಿಯಾಗಿ ಬೆಳವಣಿಗೆ ಹೊಂದುತ್ತಿರುವವರೂ ಆಗಿರಬೇಕಾಗುತ್ತದೆ. ಮಕ್ಕಳ ಅಂಗಾಂಗಗಳು ಸರಿಯಾದ ವ್ಯಾಯಾಮ, ಆಟೋಟಗಳಿಂದ ಚೈತನ್ಯ ಪಡೆಯುತ್ತದೆ. ಶಾಲಾ ಕಾಲೇಜುಗಳಲ್ಲಿ ಪಡೆದ ದೈಹಿಕ ಶಿಕ್ಷಣ ವಿಧ್ಯಾರ್ಥಿಗಳ ಬದುಕಿನಲ್ಲಿ ಗಾಢ ಪ್ರಭಾವ ಬೀರುತ್ತದೆ. ಭವಿಷ್ಯದ ಬದುಕಿನಲ್ಲಿ ಅವರು ತಮ್ಮ ಆರೋಗ್ಯದ ಕುರಿತು ಹೆಚ್ಚು ಎಚ್ಚರಿಕೆಯಿಂದಿರುತ್ತಾರೆ. ಇಂದಿನ ವಯಸ್ಕರ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಾಲ್ಯದಲ್ಲಿ ಅವರಿಗೆ ಸರಿಯಾದ ಆರೋಗ್ಯಕರ ಕ್ರಿಯೆಗಳ ಪರಿಚಯ ಮಾಡಿಸದೇ ಇರುವುದೇ ಕಾರಣ ಎಂದು ಗೊತ್ತಾಗುತ್ತದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವಂತೆ ಬಾಲ್ಯದಲ್ಲಿ ಆರೋಗ್ಯದ ಅರಿವು ಮೂಡಿಸದಿರುವುದರಿಂದಲೆ ವಯಸ್ಕರು ಅನಿಯಮಿತ (irregular) ಜೀವನ ಕ್ರಮಕ್ಕೆ ಕಟ್ಟು ಬೀಳುತ್ತಾರೆ.

ಸರಕಾರ ಇಂದು ಜನರ ಸ್ವಾಸ್ಥ್ಯಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಆದರೆ ದೈಹಿಕ ಶಿಕ್ಷಣ ಅಸಡ್ಡೆಗೊಳಗಾಗಿದೆ. ದೈಹಿಕ ಶಿಕ್ಷಕರ ತರಬೇತಿ ಪಡೆದ ಸಾವಿರಾರು ಯುವಕರು ಇಂದು ನಿರುದ್ಯೋಗಿಗಳಾಗಿದ್ದಾರೆ. ದೈಹಿಕ ಶಿಕ್ಷಣಕ್ಕೆ ಪ್ರಾಧಾನ್ಯತೆಯಿಲ್ಲದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕರು ನಿಲ್ಯìಕ್ಷಕ್ಕೊಳಗಾಗಿದ್ದಾರೆ. ಶಾಲಾ ಶಿಕ್ಷಣದಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಸುವುದರಿಂದ, ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವಂತೆ ಭವಿಷ್ಯದ ನಾಗರಿಕರ ಆರೋಗ್ಯ ಸ್ಥಿತಿಗತಿಯಲ್ಲಿ ಗುಣಾತ್ಮಕ ಬದಲಾವಣೆ ನಿರೀಕ್ಷಿಸಬಹುದು. ಇಷ್ಟೆ ಅಲ್ಲದೆ ಭಾರೀ ಜನಸಂಖ್ಯೆಯುಳ್ಳ ದೇಶವಾಗಿಯೂ ಅಂತಾರಾಷ್ಟ್ರೀಯ ಪಂದ್ಯಾಟಗಳ ಪದಕ ಪಟ್ಟಿಯಲ್ಲಿ ನಮ್ಮ ದೇಶದ ನಿರಾಶಾಜನಕ ಸ್ಥಿತಿಯಲ್ಲೂ ಸುಧಾರಣೆ ಕಾಣಬಹುದು. ಪ್ರಾಚೀನ ಭಾರತದ ನಮ್ಮ ಅಮೂಲ್ಯ ಜ್ಞಾನ ಸಂಪತ್ತೆನಿಸಿದ ಯೋಗವನ್ನು ವಿಶ್ವಕ್ಕೇ ಪರಿಚಯಿಸುತ್ತಿರುವ ಈ ಹೊತ್ತಿನಲ್ಲಿ ಶಾಲಾ ಕಾಲೇಜುಗಳಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿಯನ್ನು ಪಠ್ಯಕ್ರಮದ ಅಭಿನ್ನ ಅಂಗವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತು ಯೋಚಿಸಲಿ. 

ಬೈಂದೂರು ಚಂದ್ರಶೇಖರ ನಾವಡ 

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.