ತೆಲುಗನ್ನಡಿಗರತ್ತ ಕಣ್ತೆರೆದು ನೋಡಿ


Team Udayavani, Jan 9, 2019, 2:02 AM IST

x-18.jpg

ಆಂಧ್ರದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಕರ ನೇಮಕ, ಬಡ್ತಿ, ತರಬೇತಿ, ಪಠ್ಯಪುಸ್ತಕಗಳನ್ನು ಸರ್ಕಾರವು ಸಕಾಲದಲ್ಲಿ ಒದಗಿಸುತ್ತದೆ. ಪ್ರಥಮ ಭಾಷೆ ಕನ್ನಡ ಪಠ್ಯವನ್ನು ಮಾತ್ರ ಕರ್ನಾಟಕ ಸರ್ಕಾರ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಪೂರೈಕೆಯನ್ನು ಮಾಡಬೇಕು. ಅನ್ಯಭಾಷೆ ಎಂಬ ತಾರತಮ್ಯವಿಲ್ಲದಂತೆ ತೆಲುಗು, ಕನ್ನಡವನ್ನು ಸರಿಸಮಾನವಾಗಿ ನೋಡಿದಲ್ಲಿ ಭಾಷಾ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಎಂದಿನಂತೆ, ಸಮ್ಮೇಳನದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ವಿಷಯಗಳು ಚರ್ಚೆಯ ವಸ್ತುವಾದವು. ಕನ್ನಡ ಶಾಲೆಗಳ ವಿಚಾರ ಇವುಗಳಲ್ಲಿ ಪ್ರಮುಖವಾಗಿತ್ತು. ಈ ಕಾರಣಕ್ಕಾಗಿಯೇ ಈ ಹೊತ್ತಿನಲ್ಲಿ ಹೊರನಾಡು, ಗಡಿನಾಡಿನಲ್ಲಿರುವ ಶಾಲೆಗಳ ಸಮಸ್ಯೆಯತ್ತ ಗಮನಹರಿಸುವುದು ಸಂದಭೋìಚಿತ ವೆನಿಸುತ್ತದೆ… 

1956ರ ನವೆಂಬರ್‌ನಲ್ಲಿ ಭಾಷಾವಾರು ಪ್ರಾಂತಗಳು ರಚನೆಯಾಗಿ ಅನೇಕ ವರ್ಷಗಳ ನಂತರವೂ ಕರ್ನಾಟಕ ಆಂಧ್ರದ ಎರಡೂ ಗಡಿಗಳಲ್ಲಿ ತೆಲುಗನ್ನಡಿಗರು ಸಹಜವಾಗಿಯೇ ಇದ್ದಾರೆ. ಆಂಧ್ರ ಗಡಿಯಲ್ಲಿ ಅನೇಕರು ಕನ್ನಡ ಮೂಲದವರೇ ಆಗಿದ್ದು ಕನ್ನಡವನ್ನು ಅಪ್ಪಟವಾಗಿ ಪ್ರೀತಿಸುವವರಾಗಿದ್ದಾರೆ. ಇವರಲ್ಲಿ ಕನ್ನಡ ಭಾಷೆ ಮಾತ್ರವಲ್ಲ ಆಚಾರ-ವಿಚಾರ, ಸಂಸ್ಕ ೃತಿಯೂ ನೆಲೆನಿಂತಿದೆ. ಇವರು ಅತ್ಯಂತ ಆಪ್ತತೆಯಿಂದ ತಮ್ಮ ಮಕ್ಕಳನ್ನು ಈ ಭಾಗದ ಕನ್ನಡ ಶಾಲೆಗಳಿಗೆ ಸೇರಿಸುತ್ತಾರೆ.

ಕರ್ನಾಟಕದ ಗಡಿ ಭಾಗಗಳಲ್ಲಿಯೂ ಸಹ ಅನೇಕ ತೆಲುಗನ್ನಡಿಗರಿದ್ದಾರೆ. ಇವರು ಮಾತೃ ಭಾಷೆ ತೆಲುಗು, ಭೌಗೋಳಿಕವಾಗಿ ಕರ್ನಾಟಕದಲ್ಲಿದ್ದರೂ ತೆಲುಗನ್ನು ಪ್ರೀತಿಸುವವರಾಗಿದ್ದಾರೆ. ವಲಸೆ, ವ್ಯಾಪಾರ, ವ್ಯವಸಾಯ, ವೈವಾಹಿಕ ಸಂಬಂಧ ಮುಂತಾದ ಕಾರಣಗಳಿಂದ ಕರ್ನಾಟಕ ನೆಲದಲ್ಲಿ ನೆಲೆಯೂರಿರುವ ಇವರು ತೆಲುಗನ್ನು ಅಭ್ಯಾಸಮಾಡುವವರಾಗಿದ್ದಾರೆ.

ಎರಡು ರಾಜ್ಯಗಳಲ್ಲಿ ನೆಲಸಿರುವ ತೆಲುಗನ್ನಡಿಗರಿಗೆ ಅವರದೇ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸುವುದು ಆಯಾ ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಬೇಕಾದ ಹೊಣೆ ಈ ಎರಡು ಸರ್ಕಾರಗಳ ಮೇಲಿದೆ. ಇಲ್ಲಿನ ತೆಲುಗನ್ನಡಿಗರಿಗೆ ಆಯಾ ಸರ್ಕಾರಗಳು ನೈತಿಕ ಬೆಂಬಲ ನೀಡುವುದರೊಂದಿಗೆ ಕಾನೂನಾತ್ಮಕವಾಗಿ ತಮಗೆ ಸಾಧ್ಯವಿರುವ ವ್ಯಾಪ್ತಿಯಲ್ಲಿ ಈ ಶಾಲೆಗಳ ಉಳಿವಿಗೆ ಆಯಾ ಸರ್ಕಾರಗಳು ಕ್ರಮಕೈಗೊಳ್ಳಬೇಕು.

ಆಂಧ್ರಪ್ರದೇಶದ ಇಬ್ಭಾಗಕ್ಕಿಂತ ಮುಂಚಿತವಾಗಿಯೇ ಗಡಿ ಜಿಲ್ಲೆಗಳಾದ ಮೆಹಬೂಬ್‌ನಗರ್‌, ಮೆದಕ್‌, ಹೈದ್ರಾಬಾದ್‌, ಕರ್ನೂಲ್‌, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳನ್ನು ಹೊಂದಿವೆ. ಇಂದಿಗೂ ಈ ಶಾಲೆಗಳಲ್ಲಿ ಸುಮಾರು 17,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ಅಭ್ಯಸಿಸುತ್ತಿರುವುದು ಜೀವಂತ ಸಾಕ್ಷಿ, ಆಂಧ್ರ ವಿಭಜನೆ 02 ಜೂನ್‌ 2014ರ ನಂತರ ಆಂಧ್ರದ ಗಡಿ ಜಿಲ್ಲೆಗಳಾದ ಕರ್ನೂಲ್‌, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 65ಕ್ಕಿಂತಲೂ ಹೆಚ್ಚು ಕನ್ನಡ ಶಾಲೆಗಳಿವೆ. ಇನ್ನೂ ಹಲವಾರು ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಇಳಿಕೆಯಿಂದಾಗಿ ಮುಚ್ಚಲ್ಪಟ್ಟಿವೆ. ಇನ್ನೂ ಕೆಲವು ಅವನತಿ ಅಂಚಿನಲ್ಲಿವೆ. 

ಎರಡು ರಾಜ್ಯಗಳಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ತೆಲುಗನ್ನಡಿಗರಿಗೆ ದ್ವಿಭಾಷೆಗಳಲ್ಲಿ ಬೋಧನೆ ದೊರಕುವಂತಾಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡು ಭಾಷೆಗಳನ್ನು ಬಳಸಿ ಬೋಧಿಸಬೇಕು. ಈ ಎರಡು ರಾಜ್ಯಗಳಲ್ಲಿ ಈ ಎರಡು ಭಾಷೆಗಳು ಜೀವಂತವಾಗಿ ಉಳಿಯ ಬೇಕಾದಲ್ಲಿ ಎರಡು ಸರ್ಕಾರಗಳು ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಅವುಗಳನ್ನು ಜಾರಿಗೊಳಿಸಬೇಕು.

ಪ್ರಥಮವಾಗಿ ಆಂಧ್ರದ ಗಡಿಭಾಗದ ಕನ್ನಡ ಪ್ರಾಂತಗಳನ್ನು (ಆದೋನಿ, ರಾಯದುರ್ಗ, ಮಡಕಶಿರ) ಗೆಜಟ್‌ನಲ್ಲಿ ಹೊರರಾಜ್ಯದ ಕನ್ನಡಿಗರೆಂದು ಸೇರಿಸಿ, ಅವರಿಗೆ ವಿಶೇಷ ಸವಲತ್ತುಗಳನ್ನು ಕರ್ನಾಟಕ ಸರ್ಕಾರವು ಒದಗಿಸಬೇಕು. ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿ ಸೌಲಭ್ಯಗಳನ್ನು ಗಡಿ ಭಾಗದ ಮಕ್ಕಳಿಗೆ ಕಲ್ಪಿಸಿ ಅವರನ್ನು ಕರ್ನಾಟಕ ವಿದ್ಯಾರ್ಥಿಗಳೆಂಬಂತೆ ಪರಿಗಣಿಸಬೇಕು. ಉದಾಹರಣೆಗೆ ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ, ಬೈಸಿಕಲ್‌, ಷೂ, ಬ್ಯಾಗ್‌, ಬಿಸಿಯೂಟ, ಉಚಿತ ಬಸ್‌ಪಾಸ್‌, ಪ್ರವಾಸ ಇನ್ನೂ ಮುಂತಾದ ಸೌಲಭ್ಯಗಳು.

ಪಠ್ಯಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರವು ಪ್ರಥಮಭಾಷೆ ಕನ್ನಡ ಪಠ್ಯಪುಸ್ತಕವನ್ನು ಹೊರತುಪಡಿಸಿ ಉಳಿದೆಲ್ಲಾ ಪುಸ್ತಕ (ಗಣಿತ, ಸಮಾಜ, ವಿಜ್ಞಾನ)ಗಳನ್ನು ಕನ್ನಡದಲ್ಲೇ ಮುದ್ರಿಸಿ ಸಕಾಲಕ್ಕೆ ಪೂರೈಸುತ್ತದೆ. ಕನ್ನಡ ಪ್ರಥಮಭಾಷೆ ಪಠ್ಯಪುಸ್ತಕವನ್ನು ಮಾತ್ರ ಕರ್ನಾಟಕ ಸರ್ಕಾರ ಸರಿಯಾದ ಸಮಯಕ್ಕೆ ಪೂರೈಸಬೇಕು.

ಆಂಧ್ರದ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ನೀಡಿರುವ ಮೀಸಲಾತಿ ಶೇಕಡ 5% ಆದೇಶ ಕ್ರ.ಸಂ.ವಾ.ಪು. 73ಕೆ ಒಎಲ್‌2011 (ಭಾಗ-1) ಬೆಂಗಳೂರು ದಿನಾಂಕ 13-07-2011ರಂತೆ ಸಮರ್ಪಕವಾಗಿ ಎಲ್ಲಾ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸುವಂತೆ ಕ್ರಮಕೈಗೊಳ್ಳಬೇಕು. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವಂತೆ ಕರ್ನಾಟಕ ಸರ್ಕಾರವು ಕ್ರಮಕೈಗೊಳ್ಳಬೇಕು.

ಆಂಧ್ರದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಕರ ನೇಮಕ, ಬಡ್ತಿ, ತರಬೇತಿ, ಪಠ್ಯಪುಸ್ತಕಗಳನ್ನು ಸರ್ಕಾರವು ಸಕಾಲದಲ್ಲಿ ಒದಗಿಸುತ್ತದೆ. ಪ್ರಥಮ ಭಾಷೆ ಕನ್ನಡ ಪಠ್ಯವನ್ನು ಮಾತ್ರ ಕರ್ನಾಟಕ ಸರ್ಕಾರ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಪೂರೈಕೆಯನ್ನು ಮಾಡಬೇಕು. ಅನ್ಯಭಾಷೆ ಎಂಬ ತಾರತಮ್ಯವಿಲ್ಲದಂತೆ ತೆಲುಗು, ಕನ್ನಡವನ್ನು ಸರಿಸಮಾನವಾಗಿ ನೋಡಿದಲ್ಲಿ ಭಾಷಾ ಬೆಳವಣಿಗೆಗೆ ಸಹಾಯಕವಾಗುತ್ತದೆ. ಆಂಧ್ರದ ಗಡಿಯಲ್ಲಿ ಓದಿದ ಮಕ್ಕಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಸಮಾವಕಾಶ ಒದಗಿಸಿದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮಧ್ಯದಲ್ಲಿಯೇ ಮಕ್ಕಳು ಶಾಲೆಯನ್ನು ತೊರೆದು ಬಾಲ ಕಾರ್ಮಿಕರಾಗುತ್ತಾರೆ.

ಆಂಧ್ರದ ಕರ್ನೂಲು ಮತ್ತು ಅನಂತಪುರಂ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಈ ಮಕ್ಕಳ ಉನ್ನತ ವ್ಯಾಸಂಗಕ್ಕೆ ಶಾಲಾ ಕಾಲೇಜುಗಳಲ್ಲಿ ಅವಕಾಶ ದೊರಕಿಸಿಕೊಡಬೇಕು. ಗ್ರಾಮೀಣ ಪ್ರಾಂತಗಳಿಂದ ಈ ನಗರಗಳಿಗೆ ವಿದ್ಯಾಭ್ಯಾಸಕ್ಕೆ ಹೋಗಿಬರಲು ಸಾರಿಗೆ ವ್ಯವಸ್ಥೆ (ಬಸ್‌ ಮತ್ತು ಉಚಿತ ಬಸ್‌ಪಾಸ್‌) ಮಾಡಬೇಕು. ವಸತಿ ಸೌಲಭ್ಯ, ವಿದ್ಯಾರ್ಥಿವೇತನ ಮುಂತಾದವುಗಳನ್ನು ಕರ್ನಾಟಕ ಸರ್ಕಾರವು ಹೊರರಾಜ್ಯದ ಕನ್ನಡ ಮಕ್ಕಳಿಗೆ ಕಲ್ಪಿಸಿಕೊಡಬೇಕು. 

ಕರ್ನಾಟಕದಲ್ಲಿ ಅಭ್ಯಸಿಸುತ್ತಿರುವ ತೆಲುಗು ವಿದ್ಯಾರ್ಥಿಗಳಿಗೆ ಆಂಧ್ರ ಮತ್ತು ಕರ್ನಾಟಕ ಸರ್ಕಾರಗಳೆರಡು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಅನೇಕ ತೆಲುಗು ಶಾಲೆಗಳಿವೆ, ಅವುಗಳಿಗೆ ಸಮರ್ಪಕವಾದ ಪಠ್ಯಪೂರೈಕೆ ಸೇರಿದಂತೆ ಉಳಿದೆಲ್ಲಾ ಅನುಕೂಲತೆಗಳನ್ನು ದೊರಕಿಸಿಕೊಡಬೇಕು. ಎಲ್ಲಾ ಅನುಕೂಲತೆಗಳು ಈ ಶಾಲೆಗಳಿಗೆ ಸಿಗುವಂತಾದಲ್ಲಿ ತೆಲುಗು ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಎರಡೂ ರಾಜ್ಯಗಳಲ್ಲಿ ಎರಡು ಭಾಷೆಗಳ ಮಕ್ಕಳಿಗೆ ವ್ಯವಸ್ಥಿತವಾದ ನೆರವು ಕಲ್ಪಿಸಿದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲಾರದು. ಅಲ್ಲಿ ಬೋಧಿಸುವ ಶಿಕ್ಷಕರಿಗೂ ತರಬೇತಿಗಳನ್ನು, ವರ್ಗಾವಣೆ, ಬಡ್ತಿ ಮುಂತಾದ ಅನುಕೂಲತೆಗಳನ್ನು ಕಲ್ಪಿಸಿಕೊಡಬೇಕು. ಶಿಕ್ಷಕರಿಗೆ ಗೌರವ ದೊಂದಿಗೆ ಪ್ರೇರೇಪಿಸಿದಲ್ಲಿ ಇಲ್ಲಿನ ಶಾಲೆಗಳು ಸಜೀವವಾಗಿ ಉಳಿಯುತ್ತವೆ.

(ಲೇಖಕರು ಅನಂತಪುರಂ ಜಿಲ್ಲೆ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷರು)

ಎಂ. ಗಿರಿಜಾಪತಿ, ಶಿಕ್ಷಕರು, ಅನಂತಪುರಂ

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.