ಇವರ ಮನೆಯಲ್ಲಿದೆ ಸಾವಿರಾರು ಗಣಪ!


Team Udayavani, Sep 1, 2017, 2:21 PM IST

01-DVVV-2.jpg

ಹೊಸನಗರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾಧರ ತಿಲಕರು ಭಾರತ ದೇಶದ ನಾಗರಿಕರನ್ನು ಒಟ್ಟಾಗಿ ಸೇರಿಸಲು ಮುಂದಾಗಿದ್ದರಿಂದ ನಮ್ಮ ದೇಶದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಭಾದ್ರಪದ ಶುಕ್ಲ ಚೌತಿಯಂದು ವಿಶ್ವದೆಲ್ಲೆಡೆ ಸಂಭ್ರಮ ಸಡಗರದಿಂದ ಪೂಜಿಸುವ “ಗಣಪತಿ ಹಬ್ಬ’
ಒಂದಾಗಿದೆ.

ಎಲ್ಲೆಲ್ಲೂ ಗಣೇಶೋತ್ಸವವು ದೇವಸ್ಥಾನ, ಮನೆ, ಗಣಪತಿ ಯುವಕ ಸಂಘಗಳು ವಿಘ್ನೇಶ್ವರನನ್ನು ಇಟ್ಟು ಪೂಜಿಸುವುದು ಸರ್ವೇ ಸಾಮಾನ್ಯ. ಆದರೆ ಹೊಸನಗರದ ಕೆ.ಎಸ್‌. ವಿನಾಯಕರ ಮನೆಯ ಗಣಪತಿ ಹಬ್ಬ ಅಂದರೆ ಅದು ನಿತ್ಯಾರಾಧನೆ. ಏಕೆಂದರೆ 1300ಕ್ಕೂ ಹೆಚ್ಚು ವಿಭಿನ್ನ ವಿನಾಯಕನ ಮೂರ್ತಿಯನ್ನು ಸಂಗ್ರಹಿಸಿ 15 ದಿನಗಳ ಕಾಲ ಪ್ರದರ್ಶನಕ್ಕೆ ಇಡುತ್ತಾರೆ. 

30 ವರ್ಷದ ಪ್ರಯತ್ನ: ಕೆ.ಎಸ್‌. ವಿನಾಯಕ ಶ್ರೇಷ್ಠಿ, ವೃತ್ತಿಯಲ್ಲಿ ವ್ಯಾಪಾರಿಗಳು, ಪ್ರವೃತ್ತಿಯಲ್ಲಿ ಸ್ವಯಂ ಸೇವಕರು, ಕಲಾ ಪೋಷಕರು, 30 ವರ್ಷದಿಂದ ಗಣಪನ ಮೇಲೆ ಭಕ್ತಿ ಹೆಚ್ಚಿದ್ದರಿಂದ ವಿನಾಯಕ ಲೋಕವನ್ನೇ ತಮ್ಮ ಮನೆಯಲ್ಲಿ ಸೃಷ್ಟಿಸಿದ್ದಾರೆ. ಇವರ ಮನೆಗೆ ಒಮ್ಮೆ ನೀವು ಹೋದರೆ
ಪ್ರೀತಿಯಿಂದ ನಿಮ್ಮನ್ನು ಸತ್ಕರಿಸಿ 1300ಕ್ಕೂ ಹೆಚ್ಚು ಗಣಪತಿಯನ್ನು ಬಗ್ಗೆ ಸವಿವರವಾಗಿ ವಿನಾಯಕ ಹಾಗೂ ಅವರ ಪತ್ನಿ ಗೀತಾ ತಿಳಿಸುತ್ತಾರೆ.

ತರಾವರಿ ಗಣಪ: ಹೇಗೆ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬಹುದೋ ಅದೇ ರೀತಿ ನಾಮ ಒಂದೇ ಆದರೆ ಅನೇಕ ವೈವಿಧ್ಯಮಯ ವಿನಾಯಕ ಮೂರ್ತಿಯನ್ನು  ನೋಡಬಹುದಾಗಿದೆ. ತರಕಾರಿಯಲ್ಲಿ ಅರಳಿದ ಗಣಪ, ನಾಟ್ಯ- ನೃತ್ಯ ಗಣಪ, ಮರದ ಗಣಪ, ಅಧಿಕಾರಿ ಗಣಪ, ಕಲ್ಲಿನ ಗಣಪ, ಗಾಜಿನ ಗಣಪ, ಬಾಲ್ಯ ಗಣಪ ಕಾಣಬಹುದಾಗಿದೆ. ಇದಲ್ಲದೇ ಪೋಸ್ಟ್‌ ಕಾರ್ಡ್‌ನಲ್ಲಿ ಗಣಪ, ನಾಟ್ಯದ ಗಣಪ, ಕ್ಯಾಲೆಂಡರ್‌ ಹತ್ತಿಯ ಗಣಪ, ತೋರಣ ಗಣಪ, ತೊಗಲು ಗೊಂಬೆಯ ಗಣಪ, ಇಂತಹ ವಿಭಿನ್ನ ಪ್ರಕಾರದ ಗೌರಿಪುತ್ರನನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.

ಹವ್ಯಾಸ: ಯಾವುದೇ ಊರಿಗೆ ಇವರು ಹೋದರೂ ಬರುವಾಗ ವಿಘ್ನರಾಜನನ್ನು ಮನೆಗೆ ತರುತ್ತಾರೆ. ಕಾಶಿಯಿಂದ- ಕನ್ಯಾಕುಮಾರಿಯ ವರೆಗೆ ಅನೇಕ ಸ್ಥಳಗಳಿಗೆ ತೆರಳಿದ್ದ ಇವರು, ಅಲ್ಲಿನ ಶೈಲಿಯ ವಿನಾಯಕನನ್ನು ಸಂಗ್ರಹಿಸಿದ್ದಾರೆ. ಜೊತೆಗೆ ವಿದ್ಯಾರ್ಥಿ ಜೀವನದಲ್ಲಿ ಧಾರಾವಾಹಿ, ಕಾಮಿಕ್ಸ್‌ ಸಂಗ್ರಹಿಸುತ್ತಿದ್ದ ಹವ್ಯಾಸ ಇಂದು ವಿನಾಯಕರ ಮನೆಯಲ್ಲಿ ವಿನಾಯಕ ಲೋಕ ಸೃಷ್ಟಿ ಮಾಡಲು ಸಹಕಾರಿಯಾಗಿದೆ. ಸಹಸ್ರಾರು ಗಣಪನ ಮೂರ್ತಿ ಸಂಗ್ರಹದ ಇವರ ಹವ್ಯಾಸಕ್ಕೆ ಪತ್ನಿ ಗೀತಾ ವಿನಾಯಕ, ಮಗ ದೀಪಕ್‌, ಮಗಳು ದೀಪ್ತಿ ಮತ್ತು ಇವರ ಕುಟುಂಬ ಸದಾ ವಿನಾಯಕನ ಕಾಯಕದಲ್ಲಿ
ನೆರವಾಗಿದ್ದಾರೆ.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.