ಇವರ ಮನೆಯಲ್ಲಿದೆ ಸಾವಿರಾರು ಗಣಪ!


Team Udayavani, Sep 1, 2017, 2:21 PM IST

01-DVVV-2.jpg

ಹೊಸನಗರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾಧರ ತಿಲಕರು ಭಾರತ ದೇಶದ ನಾಗರಿಕರನ್ನು ಒಟ್ಟಾಗಿ ಸೇರಿಸಲು ಮುಂದಾಗಿದ್ದರಿಂದ ನಮ್ಮ ದೇಶದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಭಾದ್ರಪದ ಶುಕ್ಲ ಚೌತಿಯಂದು ವಿಶ್ವದೆಲ್ಲೆಡೆ ಸಂಭ್ರಮ ಸಡಗರದಿಂದ ಪೂಜಿಸುವ “ಗಣಪತಿ ಹಬ್ಬ’
ಒಂದಾಗಿದೆ.

ಎಲ್ಲೆಲ್ಲೂ ಗಣೇಶೋತ್ಸವವು ದೇವಸ್ಥಾನ, ಮನೆ, ಗಣಪತಿ ಯುವಕ ಸಂಘಗಳು ವಿಘ್ನೇಶ್ವರನನ್ನು ಇಟ್ಟು ಪೂಜಿಸುವುದು ಸರ್ವೇ ಸಾಮಾನ್ಯ. ಆದರೆ ಹೊಸನಗರದ ಕೆ.ಎಸ್‌. ವಿನಾಯಕರ ಮನೆಯ ಗಣಪತಿ ಹಬ್ಬ ಅಂದರೆ ಅದು ನಿತ್ಯಾರಾಧನೆ. ಏಕೆಂದರೆ 1300ಕ್ಕೂ ಹೆಚ್ಚು ವಿಭಿನ್ನ ವಿನಾಯಕನ ಮೂರ್ತಿಯನ್ನು ಸಂಗ್ರಹಿಸಿ 15 ದಿನಗಳ ಕಾಲ ಪ್ರದರ್ಶನಕ್ಕೆ ಇಡುತ್ತಾರೆ. 

30 ವರ್ಷದ ಪ್ರಯತ್ನ: ಕೆ.ಎಸ್‌. ವಿನಾಯಕ ಶ್ರೇಷ್ಠಿ, ವೃತ್ತಿಯಲ್ಲಿ ವ್ಯಾಪಾರಿಗಳು, ಪ್ರವೃತ್ತಿಯಲ್ಲಿ ಸ್ವಯಂ ಸೇವಕರು, ಕಲಾ ಪೋಷಕರು, 30 ವರ್ಷದಿಂದ ಗಣಪನ ಮೇಲೆ ಭಕ್ತಿ ಹೆಚ್ಚಿದ್ದರಿಂದ ವಿನಾಯಕ ಲೋಕವನ್ನೇ ತಮ್ಮ ಮನೆಯಲ್ಲಿ ಸೃಷ್ಟಿಸಿದ್ದಾರೆ. ಇವರ ಮನೆಗೆ ಒಮ್ಮೆ ನೀವು ಹೋದರೆ
ಪ್ರೀತಿಯಿಂದ ನಿಮ್ಮನ್ನು ಸತ್ಕರಿಸಿ 1300ಕ್ಕೂ ಹೆಚ್ಚು ಗಣಪತಿಯನ್ನು ಬಗ್ಗೆ ಸವಿವರವಾಗಿ ವಿನಾಯಕ ಹಾಗೂ ಅವರ ಪತ್ನಿ ಗೀತಾ ತಿಳಿಸುತ್ತಾರೆ.

ತರಾವರಿ ಗಣಪ: ಹೇಗೆ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬಹುದೋ ಅದೇ ರೀತಿ ನಾಮ ಒಂದೇ ಆದರೆ ಅನೇಕ ವೈವಿಧ್ಯಮಯ ವಿನಾಯಕ ಮೂರ್ತಿಯನ್ನು  ನೋಡಬಹುದಾಗಿದೆ. ತರಕಾರಿಯಲ್ಲಿ ಅರಳಿದ ಗಣಪ, ನಾಟ್ಯ- ನೃತ್ಯ ಗಣಪ, ಮರದ ಗಣಪ, ಅಧಿಕಾರಿ ಗಣಪ, ಕಲ್ಲಿನ ಗಣಪ, ಗಾಜಿನ ಗಣಪ, ಬಾಲ್ಯ ಗಣಪ ಕಾಣಬಹುದಾಗಿದೆ. ಇದಲ್ಲದೇ ಪೋಸ್ಟ್‌ ಕಾರ್ಡ್‌ನಲ್ಲಿ ಗಣಪ, ನಾಟ್ಯದ ಗಣಪ, ಕ್ಯಾಲೆಂಡರ್‌ ಹತ್ತಿಯ ಗಣಪ, ತೋರಣ ಗಣಪ, ತೊಗಲು ಗೊಂಬೆಯ ಗಣಪ, ಇಂತಹ ವಿಭಿನ್ನ ಪ್ರಕಾರದ ಗೌರಿಪುತ್ರನನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.

ಹವ್ಯಾಸ: ಯಾವುದೇ ಊರಿಗೆ ಇವರು ಹೋದರೂ ಬರುವಾಗ ವಿಘ್ನರಾಜನನ್ನು ಮನೆಗೆ ತರುತ್ತಾರೆ. ಕಾಶಿಯಿಂದ- ಕನ್ಯಾಕುಮಾರಿಯ ವರೆಗೆ ಅನೇಕ ಸ್ಥಳಗಳಿಗೆ ತೆರಳಿದ್ದ ಇವರು, ಅಲ್ಲಿನ ಶೈಲಿಯ ವಿನಾಯಕನನ್ನು ಸಂಗ್ರಹಿಸಿದ್ದಾರೆ. ಜೊತೆಗೆ ವಿದ್ಯಾರ್ಥಿ ಜೀವನದಲ್ಲಿ ಧಾರಾವಾಹಿ, ಕಾಮಿಕ್ಸ್‌ ಸಂಗ್ರಹಿಸುತ್ತಿದ್ದ ಹವ್ಯಾಸ ಇಂದು ವಿನಾಯಕರ ಮನೆಯಲ್ಲಿ ವಿನಾಯಕ ಲೋಕ ಸೃಷ್ಟಿ ಮಾಡಲು ಸಹಕಾರಿಯಾಗಿದೆ. ಸಹಸ್ರಾರು ಗಣಪನ ಮೂರ್ತಿ ಸಂಗ್ರಹದ ಇವರ ಹವ್ಯಾಸಕ್ಕೆ ಪತ್ನಿ ಗೀತಾ ವಿನಾಯಕ, ಮಗ ದೀಪಕ್‌, ಮಗಳು ದೀಪ್ತಿ ಮತ್ತು ಇವರ ಕುಟುಂಬ ಸದಾ ವಿನಾಯಕನ ಕಾಯಕದಲ್ಲಿ
ನೆರವಾಗಿದ್ದಾರೆ.

ಟಾಪ್ ನ್ಯೂಸ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.