ಮತಾಂಧ ಟಿಪು ಜಯಂತಿ ಆಚರಣೆ ಖಂಡನೀಯ: ವಿಎಚ್ಪಿ
Team Udayavani, Nov 8, 2017, 5:27 PM IST
ಸೊರಬ: ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸೊರಬ ತಾಲೂಕು ಶಾಖೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಭಾವೀ ಪ್ರಜೆಗಳಾದ ಯುವ ಜನತೆಗೆ ಮತ್ತು ಮಕ್ಕಳಿಗೆ ನಮ್ಮ ನಾಡಿನಲ್ಲಿ ಜನಿಸಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಸಾಧು, ಸಂತರು, ರಾಜರುಗಳನ್ನು ಸಮಾಜ ಸುಧಾರಕರನ್ನು ಪರಿಚಯಿಸುವುದು ಸಮಾಜದ ಹಾಗು ಸರ್ಕಾರದ ಪವಿತ್ರ ಕರ್ತವ್ಯ. ನಮ್ಮ ಯುವಜನತೆಯೂ ಅಂತಹ ಮಹಾಪುರುಷರಾಗಿ ಬೆಳೆಯಲಿ ಹಾಗು ಸಮಾಜದ ಉನ್ನತಿಗಾಗಿ ಶ್ರಮಿಸಲಿ ಎನ್ನುವುದು ಎಲ್ಲರ ಆಶಯ.
ಆದರೆ ಹಾಗೆ ಮಾಡುವಾಗ ಅತ್ಯಂತ ವಿವಾದಾಸ್ಪದ ಚರಿತ್ರೆಯನ್ನು ಹೊಂದಿರುವ ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಆಚರಿಸುತ್ತಾ ಇರುವುದು ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ. ದಕ್ಷಿಣ ಭಾರತದಲ್ಲಿ ಕಂಡು ಬರುತ್ತಿರುವ ಮತಾಂಧತೆ
ಹಾಗು ಭಯೋತ್ಪಾದನೆಯ ಮೂಲ ಕಾರಣ ಟಿಪ್ಪು ಸುಲ್ತಾನ್ ಹಾಗೂ ಹೈದರಾಲಿ. ನಾಲ್ಕು ಒಳ್ಳೆಯ ಕೆಲಸ ಹಾಗೂ ನೂರಾರು ಮನೆಹಾಳು ಕೆಲಸಗಳನ್ನು ಮಾಡಿರುವ ಟಿಪ್ಪು ಸುಲ್ತಾನನನ್ನು ನಾವು ಏಕೆ ಆದರ್ಶವೆಂದು ನೆನೆಯಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ರಾಜ್ಯ ವಿಸ್ತಾರಕ್ಕಾಗಿ ರಾಜರು ಯುದ್ಧ ಮಾಡುವುದು ಸಹಜ. ಆದರೆ ಯುದ್ಧಾ ನಂತರ ಪ್ರಜೆಗಳ ಮೇಲೆ ಅತ್ಯಾಚಾರ, ಮಾರಣ ಹೋಮ, ಮತಾಂತರ, ಶ್ರದ್ಧಾಕೇಂದ್ರಗಳ ನಾಶ ಇಂತಹ ಕೃತ್ಯಗಳೇ ಅವನ ಸಾಧನೆಗಳು. ಮೇಲುಕೋಟೆ, ಕೇರಳದ ಕಲ್ಲಿಕೋಟೆ, ಕೊಡಗು, ಮಂಗಳೂರುಗಳಲ್ಲಿ ಆತ ನಡೆಸಿದ ಕಾರ್ಯ ಹಾಗೂ ನರಹತ್ಯೆಗಳು ಎಂಥ ವರ ಎದೆಯಲ್ಲೂ ರಕ್ತ ಹೆಪ್ಪುಗಟ್ಟಿಸುತ್ತವೆ. ಆತನೇನಾದರೂ ಬ್ರಿಟಿಷರನ್ನು ಯುದ್ಧದಲ್ಲಿ ಸೋಲಿಸಿ, ದಕ್ಷಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲ್ಪಟ್ಟಿದ್ದರೆ, ಭಾರತ ಸ್ವತಂತ್ರವಾಗುವ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಇನ್ನೊಂದು ಪಾಕಿಸ್ಥಾನ ರಚನೆಯಾಗುತ್ತಿತ್ತು ಎಂದರು. ಚರಿತ್ರೆಯನ್ನು ಒಮ್ಮುಖವಾಗಿ ಮಾತ್ರ ಅಭ್ಯಾಸ ಮಾಡಿ, ತಮಗೆ ಬೇಕಾದಂತೆ ತಿರುಚಿ, ಇಡೀ ಒಂದು ಸಮುದಾಯವನ್ನೇ ದಾರಿ ತಪ್ಪಿಸಿ, ಮತ- ಅಧಿಕಾರ ಗಳಿಕೆಯೇ ಉದ್ದೇಶವಾಗಿರುವವರಿಗೆ ಟಿಪ್ಪು ಒಬ್ಬ ಪರಮತ ಸಹಿಷ್ಣು ರಾಜನಾಗಿ ಕಾಣುತ್ತಾನೆಯೇ ಹೊರತು ಉಳಿದೆಲ್ಲ ಭಾರತೀಯರಿಗೆ ಆತ ಖಳನಾಯಕನಾಗಿಯೇ ಉಳಿಯುತ್ತಾನೆ ಎಂದರು.
ಜಿಲ್ಲಾ ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಮನಿಪಾಲ್, ತಾಲೂಕು ಸಂಚಾಲಕ ರವಿ ಗುಡಿಗಾರ್, ದಯಾನಂದ ಆಚಾರ್, ರಜನಿ ನಾಯ್ಕ, ಪ್ರಸನ್ನ ಕೆ.ವಿ., ಶಶಿಕುಮಾರ್, ಚಂದನ್ ಸೊಪ್ಪಿನಕೇರಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ