ಶಿಖರ ಏರುವುದು ಸುಲಭವಲ


Team Udayavani, Jun 12, 2018, 4:19 PM IST

cta-4.jpg

ಸೊರಬ: ಸಾಧನೆಗೆ ಶಿಕ್ಷಣ, ಸೌಲಭ್ಯಗಳು ಮುಖ್ಯವಾಗುವುದಿಲ್ಲ. ಗುರಿ ಸಾಧಿಸಬೇಕೆಂಬ ಛಲವಿದ್ದಲ್ಲಿ ಅಗತ್ಯ ಸೌಲತ್ತುಗಳನ್ನು ದೊರಕಿಸುವ ಹೃದಯ ವೈಶಾಲ್ಯ ಇರುವವರು ಸಮಾಜದಲ್ಲಿ ಇರುತ್ತಾರೆ. ಇಂತಹವರ ನೆರವು
ಸಾಧಕರಿಗೆ ಬೆನ್ನೆಲಬಾಗಿ ನಿಲ್ಲುತ್ತದೆ ಎಂದು ಮೌಂಟ್‌ ಎವರೆಸ್ಟ್‌ ಶಿಖರರೋಹಿ ವಿಕ್ರಮ್‌ ಹೊನ್ನಾಳಿ ಹೇಳಿದರು.

ತಾಲೂಕಿನ ಆನವಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಯಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ತಮ್ಮ ಶಿಖರಾರೋಹಣದಲ್ಲಿ ಆದ ಅನುಭವಗಳನ್ನು ಹಂಚಿಕೊಂಡು ಅವರು ಮಾತನಾಡಿದರು.

ಮೌಂಟ್‌ ಎವರೆಸ್ಟ್‌ನಂತ ಶಿಖರ ಏರುವುದು ಸುಲಭದ ಮಾತಲ್ಲ. ಕಣ್ಣು ಸುತ್ತ ನೋಡಿದಷ್ಟು ದೂರ ಹಿಮದಿಂದ
ಆವೃತವಾದ ಶಿಖರಗಳು, ಕೊರೆಯುವ ಚಳಿ, ಕುಡಿಯಲು ನೀರು ಬೇಕೆಂದರೂ ಮಂಜನ್ನೇ ಕರಗಿಸಿ ಕುಡಿಯಬೇಕಾದ ಅನಿವಾರ್ಯತೆ ಇರುತ್ತದೆ ಎಂದರು.

 ಅಗತ್ಯವಿದ್ದಷ್ಟು ಮಾತ್ರ ಆಹಾರ ಸೇವನೆ ಹಾಗೂ ಪ್ರಕೃತಿಯೊಂದಿಗೆ ಹೋರಾಟ ಮಾಡಿ ಹಳ್ಳಕೊಳ್ಳ, ಪ್ರಪಾತಗಳನ್ನು ದಾಟಿ ಶಿಖರ ಏರುವುದು ಅತ್ಯಂತ ಕಷ್ಟಕರ. ಇಂತಹ ಅನುಭವಗಳೊಂದಿಗೆ ನಾನು ಶಿಖರದ ತುದಿಗೇರಿ ರಾಷ್ಟ್ರದ ಹಾಗೂ ಕನ್ನಡ ನಾಡಿನ ಒಬ್ಬ ಪ್ರತಿನಿ ಯಾಗಿ ಕನ್ನಡದ ಮತ್ತು ರಾಷ್ಟ್ರ ಧ್ವಜವನ್ನು ಹಾರಿಸಿದ್ದು ನನ್ನ ಮನಸ್ಸಿನಲ್ಲಿ ಬಹಳ ಉಲ್ಲಾಸ ನೀಡಿತು ಎಂದು ಹೇಳಿದರು.

ಹಿಮಗಳಿಂದ ಆವೃತವಾದ ಗಿರಿ ಪರ್ವತಗಳನ್ನು ಏರುವ ಮೊದಲು ನಮಗೆ ಅಗತ್ಯ ತರಬೇತಿ ನೀಡಿದ್ದಲ್ಲದೆ, ಸಲಕರಣೆಯನ್ನು ಸಹ ಒದಗಿಸಲಾಗಿತ್ತು. ಏ. 11ರಂದು ಶಿಖರಾರೋಹಣವನ್ನು ಆರಂಭಿಸಿದ ನಾವು, ಮೇ 17ಕ್ಕೆ
ಹಿಂದುರಿಗಿದೇವು. ಶಿಖರ ಏರುವ ಸಂದರ್ಭದಲ್ಲಿ ಒಂದು ಮತ್ತು ಎರಡನೇ ಹಂತ ದಾಟುವಾಗ ಕೊಂಚ ನಿರಳರಾಗಿದ್ದ ನಾವು, ಮೂರನೇ ಹಂತಕ್ಕೆ ಪಾದಾರ್ಪಣೆ ಮಾಡಿದಾಗ ಪ್ರಕೃತಿಯ ಪ್ರತಿರೋಧ ಎದುರಿಸಬೇಕಾಯಿತು.

ಗಿರಿ ಶಿಖರ ಏರಿದಂತೆ ಆಮ್ಲಜನಕದ ಕೊರತೆಯಿಂದಾಗಿ ಉಸಿರಾಡಲು ತೊಂದರೆಯಾದಾಗ ಐದು ಕೆ.ಜಿ. ತೂಕ
ಆಕ್ಸಿಜನ್‌ ಸಿಲಿಂಡರ್‌ ಆಳವಡಿಸಿಕೊಂಡು ಉಸಿರಾಟದ ತೊಂದರೆಯನ್ನು ನಿವಾರಿಸಿಕೊಳ್ಳುವಂತಾಯಿತು ಎಂದರು.
 
ಆಳದ ಪ್ರಪಾತಗಳನ್ನು ದಾಟುವಾಗ ಶೇರ್ಪಗಳ ಸಹಾಯದಿಂದ ದಾಟಿದೆವು. ಶಿಖರದ ಮೇಲೇರುತ್ತಿದ್ದಂತೆ ಅಲ್ಲಲ್ಲಿ ಕೊಳ್ಳಗಳಲ್ಲಿ ನಾಲ್ಕಾರು ಪರ್ವತಾರೋಹಿಗಳ ಶವವನ್ನು ಕಂಡಾಗ ಎದೆ ನಡುಗಿತು. ಆದರೂ ಗುರಿ ಮುಟ್ಟಲೇ ಬೇಕೆಂಬ ಛಲದಿಂದ ನಾವಿದ್ದ 25 ಜನರ ತಂಡದಲ್ಲಿ 8 ಜನ ಮಾತ್ರ ಶಿಖರದ ತುದಿಗೇರಲು ಸಾಧ್ಯವಾಯಿತು ಎಂದು
ಹೇಳಿದರು.

 ಶಿಖರದ ತುದಿಗೆ ಪಾದಾರ್ಪಣೆ ಮಾಡುತ್ತಿದ್ದಂತೆ ಮೈಯಲ್ಲಾ ರೋಮಾಂಚನ, ವಿಶ್ವದ ಅತ್ಯಂತ ಎತ್ತರದ ಪ್ರದೇಶ ಮುಟ್ಟಿದ ಹೆಮ್ಮೆ. ಕನ್ನಡ ನಾಡಿನ ಹಾಗೂ ದೇಶದ ಧ್ವಜ ಹಾರಿಸಿದ್ದು ಪದಗಳಲ್ಲಿ ಹೇಳಲು ಅಸಾಧ್ಯ ಎಂದು ತಮ್ಮ ಪರ್ವತಾರೋಹಣ ಸಂದರ್ಭದಲ್ಲಾದ ಅನುಭವಗಳನ್ನು ಹಂಚಿಕೊಂಡರು. 

ಈ ವೇಳೆ ಮೌಂಟ್‌ ಶಿಖರ ಏರಿದ ಪ್ರಥಮ ಪರ್ವತಾರೋಹಿಗಳಾದ ಥೇನ್‌ ಸಿಂಗ್‌ ಮತ್ತು ಎಡ್ಮಂಡ್‌ ಹಿಲ್ಲರಿ ಸ್ನೇಹದ ಬಗ್ಗೆ ಸ್ಮರಿಸಿ, ಇವರಲ್ಲಿ ಇದುವರೆಗೂ ಪ್ರಥಮ ಮೌಂಟ್‌ ಎವರೆಸ್ಟ್‌ ಶಿಖರದ ತುದಿಗೆ ಕಾಲಿಟ್ಟ ಪರ್ವತಾರೋಹಿ ಯಾರೆಂಬುದು ಅವರು ಇದುವರೆಗೂ ಹೇಳಿಲ್ಲ. ಇದೇ ಸ್ನೇಹ. ಸಾಧನೆಗಿಂತ ಸ್ನೇಹ ದೊಡ್ಡದು ಎಂಬುವುದನ್ನವರು ತೋರಿಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಿಇಒ ಮಂಜುನಾಥ್‌, ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌, ಗ್ರಾಪಂ
ಉಪಾಧ್ಯಕ್ಷ ಕೇಶವ ರಾಯ್ಕರ್‌, ಸದಸ್ಯರಾದ ಉಮೇಶ್‌ ಉಡುಗಣಿ, ಖಲಂದರ್‌ ಸಾಬ್‌, ಕೃಷ್ಣಮೂರ್ತಿ, ರೂಪಾ ಇತರರಿದ್ದರು. 

ಟಾಪ್ ನ್ಯೂಸ್

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.