ಶಿವಮೊಗ್ಗೆಯಲ್ಲಿ ನಡೆದಿತ್ತು ಅಟಲ್‌ ಷಷ್ಟ್ಯಾಬ್ದಿ


Team Udayavani, Aug 17, 2018, 3:02 PM IST

shiv.jpg

ಶಿವಮೊಗ್ಗ: ವಾಜಪೇಯಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆ ಷಷ್ಟ್ಯಾಬ್ದಿ ಕಾರ್ಯಕ್ರಮ 1988ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು. ಆಗ ಶಿವಮೊಗ್ಗ ಜನತಾ ಪರಿವಾರದ ಘಟಕದಿಂದ 61 ಸಾವಿರ ಹಣ ಸಂಗ್ರಹಿಸಿ ಕೊಡಲಾಗಿತ್ತು. ಅದನ್ನು ಡಿಡಿ ಮಾಡಿ ಕೊಡಲಾಗಿತ್ತು. ಹಿರಿಯರಿಗೆ ಹಣ ಸಂಗ್ರಹ ಮಾಡಿಕೊಡುವ ಪದ್ಧತಿ ಇತ್ತು. ನ್ಯಾಷನಲ್‌ ಕಾಲೇಜಯ ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು.

ಸಭೆಯ ಬ್ಯಾನರ್‌ನಲ್ಲಿ ನೂರು ವರ್ಷ ಬಾಳಿ ಎಂದು ಸಂಸ್ಕೃತದಲ್ಲಿ ಬರೆಯಲಾಗಿತ್ತು. ಹಿಂದೆ ಕೃಷ್ಣ ಪಾಂಚಜನ್ಯ ಊದುವ ಫೋಟೋ ಹಾಕಲಾಗಿತ್ತು. ಅದೇ ಮೊದಲು ನಾನು ಅವರನ್ನು ನೋಡಿದ್ದು ಎಂದು ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್‌ ನೆನಪು ಮಾಡಿಕೊಂಡರು. ಅದಾದ ಮೇಲೆ 1992ರಲ್ಲಿ ಮತ್ತೂಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು. ಆಗ ಅವರನ್ನು ಮತ್ತೂರಿಗೆ ಕರೆದುಕೊಂಡು ಹೋಗುವುದು ನಮ್ಮ ಆಸೆಯಾಗಿತ್ತು ಅದಕ್ಕಾಗಿ ಗ್ರಾಮದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಡಿ.ಎಚ್‌. ಶಂಕರ ಮೂರ್ತಿ ಅವರ ಮೂಲಕ ಅವರಿಗೆ ತಿಳಿಸಿದೆ. ಆದರೆ ಅವರು ತಕ್ಷಣ ಏನು ಹೇಳಲಿಲ್ಲ. ಆದರೆ ಅವರು ಬರುತ್ತಾರೋ ಇಲ್ಲವೋ ಎಂದು ಆತಂಕ ಶುರುವಾಗಿತ್ತು. ಸರ್ಕಿಟ್‌ ಹೌಸ್‌ನಲ್ಲಿ ಉಳಿದುಕೊಂಡಿದ್ದ ಅವರು ರಾತ್ರಿ ಮಲಗಲು ತೆರಳಿದರು. ಅಲ್ಲಿವರೆಗೂ ಏನು ಹೇಳಿರಲಿಲ್ಲ. ಬಾಗಿಲ ಬಳಿ ಹೋಗಿ ಬಾಗಿಲು ಹಾಕುವ ಮುನ್ನ ಬೆಳಗ್ಗೆ ಹೋಗೋಣ ಎಂದರು. ಅದೊಂದು ನಮಗೆ ಥ್ರಿಲ್ಲಿಂಗ್‌ ಎಕ್ಸಪೀರಿಯನ್ಸ್‌ ಎಂದರು.

ಬೆಳಗ್ಗೆ ತುಂಗಾ ನದಿ ಪಕ್ಕದ ಗ್ರಾಮದಲ್ಲಿ 500 ಮಂದಿ ಸೇರುವ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅವರಿಗೆ 108 ಮಣಿ ಇರುವ ಸ್ಫಟಿಕದ ಹಾರ ಕೊಟ್ಟು ಮುಂದಿನ ಬಾರಿ ಬರುವಾಗ ಪ್ರಧಾನಿಯಾಗಿ ಬನ್ನಿ ಎಂದು ಹಾರೈಸಲಾಗಿತ್ತು. ಇಡೀ ಕಾರ್ಯಕ್ರಮ ಸಂಸ್ಕೃತದಲ್ಲಿ ನಡೆಯಿತು. ಬಾಲ್ಯ ದಿನಗಳಲ್ಲಿ ಸಂಸ್ಕೃತ ಕಲಿಯುವುದು ಎಷ್ಟು ಕಷ್ಟವಾಗಿತ್ತು ಎಂದು ನೆನಪು ಮಾಡಿಕೊಂಡರು.

ಸಂಸ್ಕೃತ ಅಭ್ಯಾಸ ಮಾಡುವಾಗ ತಲೆ ಜುಟ್ಟಿನ ತುದಿಯನ್ನು ದಾರಕ್ಕೆ ಕಟ್ಟಿಕೊಂಡು ಅದನ್ನು ಮೊಳೆಗೆ ಕಟ್ಟುತ್ತಿದ್ದರು. ರಾತ್ರಿಯೆಲ್ಲಾ ಅಭ್ಯಾಸ ಮಾಡುವಾಗ ನಿದ್ದೆಗೆ ಜಾರಿದರೆ ದಾರ ಎಳೆಯುತಿತ್ತು. ಮತ್ತೆ ಎಚ್ಚರವಾಗಿ ಅಭ್ಯಾಸ ಮಾಡುತ್ತಿದ್ದರು ಎಂದು ಸಹ ತಮ್ಮ ನೆನಪು ಹಂಚಿಕೊಂಡಿದ್ದರು ಕಾರ್ಯಕ್ರಮದಲ್ಲಿ ಎಂದು ಭಾನುಪ್ರಕಾಶ್‌ ಅವರು ತಿಳಿಸಿದರು.

ಕಾಂಟೆಸ್ಸಾ ಕಾರಿನಲ್ಲಿ ಊರಿಂದ ಹೊರಟು ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಕಾರು ನಿಂತಿತ್ತು. ಏನಾಯಿತು ಎಂದು ಹೋಗಿ
ನೋಡಿದರೆ ನನ್ನ ಸಂಬಂಧಿಯೊಬ್ಬರು ಕಾರಿಗೆ ಅಡ್ಡ ಹಾಕಿದ್ದರು. ಅವರ ತಂದೆಗೆ ಪ್ಯಾರಾಲಿಸೀಸ್‌ ಆಗಿತ್ತು. ಅವರಿಗೆ ಕಾರ್ಯಕ್ರಮಕ್ಕೆ ಬರಲು ಆಗಿರಲಿಲ್ಲ. ಆದರೆ ಅವರನ್ನು ನೋಡಬೇಕೆಂಬ ಆಸೆಯಿತ್ತು. ಮನವಿ ಮಾಡುತ್ತಿದ್ದಂತೆ ಕಾರಿನಿಂದ ಇಳಿದು ಹಳ್ಳಿ ಮನೆಯ ಕಟ್ಟೆ ಮೇಲೆ ಕೂತಿದ್ದ ಅವರನ್ನು ಭೇಟಿ ಮಾಡಿ ಮಾತನಾಡಿಸಿದರು. ಇದು ವಾಜಪೇಯಿ ಅವರ ಸರಳ ವ್ಯಕ್ತಿತ್ವಕ್ಕೆ ಉದಾಹರಣೆ ಅಂದರು.

1999ರಲ್ಲಿ ನಡೆದ ಬೈಎಲೆಕ್ಷನ್‌ನಲ್ಲಿ ಆಯನೂರು ಮಂಜುನಾಥ್‌ ಅವರು ಲೋಕಸಭೆ ಚುನಾವಣೆಗೆ ನಿಂತಿದ್ದರು. ನೆಹರು ಕ್ರೀಡಾಂಗಣದಲ್ಲಿ ಬೃಹತ್‌ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರು ಮಂಗಳೂರಿನಿಂದ ಬರಬೇಕಿತ್ತು. ಆದರೆ ಮಳೆ ಕಾರಣ ಅವರು ಬರಲಾಗಲಿಲ್ಲ. ಅವರು ಬಂದಿದ್ದರೆ ಮಂಜಣ್ಣ ಅವರು ಗೆಲ್ಲುತ್ತಿದ್ದರೇನೋ ಎಂದು ಭಾನುಪ್ರಕಾಶ್‌ ತಿಳಿಸಿದರು

ರಿಪ್ಪನ್‌ಪೇಟೆ: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರಿಗೂ ಹಾಗೂ ರಿಪ್ಪನ್‌ಪೇಟೆಗೂ ಅವಿನಾಭಾವ ಸಂಬಂಧ ಇಂದು ನಿನ್ನೆಯದಲ್ಲ. ಜನಸಂಘದ ಅಧ್ಯಕ್ಷರಾಗಿ ಸಂಘಟನೆಗಾಗಿ 1977 ರ ಸಾಲಿನಲ್ಲಿ ರಾಷ್ಟ್ರಾದ್ಯಂತ ಪ್ರಚಾರ ಕೈಗೊಂಡ ಸಂದರ್ಭ ರಿಪ್ಪನ್‌ಪೇಟೆಯ ಜನರಿಗೂ ಅವರ ದರ್ಶನ ಭಾಗ್ಯ ದೊರೆತಿತ್ತು. 

 ಜಿಲ್ಲೆಗಾಗಮಿಸುವ ಮಾಹಿತಿಯನ್ನರಿತ ಅಂದಿನ ಕೆಲವು ಯುವಕರು ಸಂಘಟನೆಯ ಮುಖಂಡರನ್ನು ಸಂಪರ್ಕಿಸಿ ತಮ್ಮ
ಊರಿಗೂ ಬರುವಂತೆ ಪಟ್ಟು ಹಿಡಿದ ಪರಿಣಾಮ ಮೊದಲೇ ಪ್ರವಾಸ ಸ್ಥಳಗಳನ್ನು ನಿಗ ದಿಪಡಿಸಲಾಗಿದ್ದರೂ ಕೊಂಚ ಸಮಯಾವಕಾಶ ಮಾಡಿಕೊಂಡು ತೀರ್ಥಹಳ್ಳಿ ಮಾರ್ಗವಾಗಿ ರಿಪ್ಪನ್‌ಪೇಟೆಗೆ ಆಗಮಿಸಿದ್ದರು. ಪಟ್ಟಣದಲ್ಲಿ ಸೇರಿದ ಹಲವು ಗ್ರಾಮಸ್ಥರನ್ನುದ್ದೇಶಿಸಿ ಆಕರ್ಷಿತ ಭಾಷಣದಿಂದ ಇಲ್ಲಿನ ಯುವಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಈ ಸಂದರ್ಭದಲ್ಲಿ ಸಂಘಟನೆಗಾಗಿ ಗ್ರಾಮಸ್ಥರಿಂದ ಒಂದು ಸಾವಿರದ ಎರಡು ನೂರು ರೂಪಾಯಿಗಳ ದೇಣಿಗೆ ಸಂಗ್ರಹಿಸಿದ್ದಾಗಿ ಸ್ಥಳೀಯ ಘಟಕ ಅಧ್ಯಕ್ಷ ಎಚ್‌.ಎಸ್‌. ಪ್ರಭಾಕರ ತಿಳಿಸಿದರು. ಇಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಲೋಕಸಭಾ ಅಧ್ಯಕ್ಷ ಕೆ.ಎಸ್‌. ಹೆಗಡೆ, ಸ್ಥಳೀಯ ಮುಖಂಡ ದಿ| ಕೆ.ಪಿ. ಕೃಷ್ಣಮೂರ್ತಿ ಇದ್ದರು 

ಟಾಪ್ ನ್ಯೂಸ್

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Modi ಕೀಳುಮಟ್ಟಕ್ಕಿಳಿದು ಮಾತನಾಡಬಾರದು: ಸಿಎಂ ಸಿದ್ದರಾಮಯ್ಯ

Modi ಕೀಳುಮಟ್ಟಕ್ಕಿಳಿದು ಮಾತನಾಡಬಾರದು: ಸಿಎಂ ಸಿದ್ದರಾಮಯ್ಯ

ದಿಂಗಾಲೇಶ್ವರ ಶ್ರೀಗೆ ನಾಮಪತ್ರ ವಾಪಾಸ್ ಪಡೆದು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ: ಸಿಎಂ

ದಿಂಗಾಲೇಶ್ವರ ಶ್ರೀಗೆ ನಾಮಪತ್ರ ವಾಪಾಸ್ ಪಡೆದು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ: ಸಿಎಂ

B.Y. Raghavendra: ಇಂಟರ್‌ಸಿಟಿ ರೈಲಿನ ಪ್ರಯಾಣಿಕರ ಬಳಿ ಬಿವೈಆರ್‌ ಮತಬೇಟೆ

B.Y. Raghavendra: ಇಂಟರ್‌ಸಿಟಿ ರೈಲಿನ ಪ್ರಯಾಣಿಕರ ಬಳಿ ಬಿವೈಆರ್‌ ಮತಬೇಟೆ

ರಾಘವೇಂದ್ರ

Shimoga; ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಗೆ ಹಿಂದೂಗಳ ಬಲಿ: ರಾಘವೇಂದ್ರ ಕಿಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.