ಸಾಗರವಾಗಲಿ ಸುಂದರ..!


Team Udayavani, Aug 24, 2018, 6:02 PM IST

shiv.jpg

ಸಾಗರ: ಪ್ರಗತಿಯ ದಾರಿಯೇ ವಿಚಿತ್ರ. ಯಾವುದೇ ನಗರ, ತಾಲೂಕು, ಜಿಲ್ಲೆ, ರಾಜ್ಯ ಸಮಸ್ಯೆಗಳಿಲ್ಲದೆ ಸಂತೃಪ್ತ ಎಂಬುದಿಲ್ಲ. ಮೂಲಭೂತ ಸಮಸ್ಯೆಗಳು ಬಗೆಹರಿದರೆ ಎರಡನೇ ಹಂತದ ಸಮಸ್ಯೆಗಳು ಮುಂಚೂಣಿಗೆ ಬರುತ್ತವೆ. ಇದಕ್ಕೆ ಸಾಗರ ನಗರವೂ
ಹೊರತಲ್ಲ. ನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಬಂದುದರಿಂದ ನೀರಿನ ಕೊರತೆ ಎಂಬ ಮೂಲ ಸಮಸ್ಯೆಗೆ ಮಂಗಳ ಹಾಡಿದಂತಾಯಿತು. ಆದರೆ ಬಂದ ನೀರಿನ ಸಮರ್ಪಕ ವಿಲೇವಾರಿಗೆ ಪೈಪ್‌ ಲೈನ್‌ ಸಮಸ್ಯೆ, ನೀರು ಹಾದು ಬರುವ ದಾರಿಯ ಗ್ರಾಮಗಳಿಗೂ ನೀರು ಒದಗಿಸಲು ಕೈಗೊಂಡ ಯೋಜನೆಯ ವಿಳಂಬ, ಕೊನೆಗೆ ಶರಾವತಿಯಿಂದ
ಸಾಗರಕ್ಕೆ ನೀರು ದಬ್ಬುವ ಪಂಪ್‌ ಪದೇ ಪದೇ ಕೈಕೊಡುವುದು ಕೂಡ ಜನರಿಗೆ ಅಸಹನೀಯ ಎನ್ನಿಸಬಹುದು!

ಕೆರೆಗಳ ಮರುಜನ್ಮದತ್ತ: ಸಾಗರ ತಾಲೂಕಿನ ಮಟ್ಟಿಗೆ ಹೇಳುವುದಾದರೆ, ಸಮಸ್ಯೆಗಳ ಪರಿಹಾರಕ್ಕೆ ಸಂಕಷ್ಟ ಕಾಲದ ಯೋಜನೆ, ದೂರಗಾಮಿ ಪರಿಣಾಮದ ಕಲ್ಪನೆಗಳು ಡ್ರಾಯಿಂಗ್‌ ರೂಂನಿಂದ ಕಾರ್ಯಕ್ಷೇತ್ರಕ್ಕೆ ಬರಬೇಕಿದೆ. ಶಿವಮೊಗ್ಗ ಜಿಲ್ಲೆಯ
ಸೊರಬ, ಶಿಕಾರಿಪುರಗಳಂತೆ ಸಾಗರದಲ್ಲಿಯೂ ಅಧಿಕ ಪ್ರಮಾಣದಲ್ಲಿ ಕೆರೆಗಳಿವೆ. ಈ ಕೆರೆಗಳಲ್ಲಿ ನೀರು ನಿರಂತರವಾಗಿ ಕಾಣಲು ಕಾಯಕಲ್ಪದ ದಾಹವಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಒಂದು ಯೋಜನೆಯನ್ನು ಪೂರೈಸುವುದಕ್ಕಿಂತ ಅದಕ್ಕೊಂದು ವಾರ್ಷಿಕ ಅನುದಾನ ನಿಗದಿಪಡಿಸಿ ಇದರಲ್ಲಿ ಆಗುವಷ್ಟು ಕೆಲಸ ಮಾಡಬಹುದು ಎನ್ನುತ್ತದೆ. ಕೆರೆಗಳ ವಿಚಾರದಲ್ಲಿ ಕೂಡ ಈ
ಕ್ರಮಕ್ಕೆ ಮುಂದಾಗಿರುವುದರಿಂದ ಸಮಸ್ಯೆ ಜೀವಂತವಾಗಿಯೇ ಇದೆ. ಈ ಆರ್ಥಿಕ ವರ್ಷದಲ್ಲಿ ಒಂದು ಕೆರೆಯನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆದು, ದಂಡೆಗಳನ್ನು ಭದ್ರಗೊಳಿಸಿ, ಸಾಧ್ಯವಾದರೆ
ಪ್ರವಾಸೋದ್ಯಮಕ್ಕೆ ಅಣಿಗೊಳಿಸದಿದ್ದರೆ ಶ್ರಮ ವ್ಯರ್ಥ. ಸಾಗರದ ಪ್ರಸಿದ್ಧ ಗಣಪತಿ ಕೆರೆಯಿಂದ ಆರಂಭಿಸಿ ತಾಲೂಕಿನ ಅತಿ ವಿಶಾಲ ಕೆಳದಿ ಕೆರೆ ಸೇರಿಸಿ ಪ್ರತಿ ಗ್ರಾಮದಲ್ಲಿಯೂ ಇರುವ ಕನಿಷ್ಟ ಒಂದು ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿಗಳನ್ನು ಹಂತ
ಹಂತವಾಗಿ ನಡೆಸಲೇಬೇಕಾದ ಅಗತ್ಯವಿದೆ. ಬೇಸಿಗೆ ನೀರಿಗಾಗಿ ಟ್ಯಾಂಕರ್‌ ಹೊಡೆಯುವುದು ತಾತ್ಕಾಲಿಕ ಪರಿಹಾರವಾದರೆ ಬೋರ್‌ವೆಲ್‌ ಕೊರೆಯುವುದು ಭವಿಷ್ಯದ ಕೊಡಗು ಅಪಾಯವನ್ನು ಆಹ್ವಾನಿಸಿದಂತೆ!

ಇಂಟರ್‌ಲಾಕ್‌ ಸೂತ್ರ!: ನಗರಗಳ ಟ್ರಾμಕ್‌ನ್ನು ರಸ್ತೆ ಅಗಲೀಕರಣದಿಂದ ಮಾತ್ರ ನಿರ್ವಹಿಸಬಹುದು ಎಂಬ ತಪ್ಪು ಕಲ್ಪನೆಯಿದೆ. ಸಾಗರ ನಗರದ ವಿಚಾರಕ್ಕೇ ಬಂದರೆ ಶಿಸ್ತಿನ ವಾಹನ ನಿಲುಗಡೆ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರ ಒದಗಿಸಬಲ್ಲದು. ಈಗಲೂ
ನಗರಾಡಳಿತ ರಸ್ತೆ ಪಕ್ಕದ ಚರಂಡಿಗಳ ಮೇಲೆ ಸ್ಲಾÂಬ್‌ ಗಳನ್ನು ಅಳವಡಿಸಿ ಪಾರ್ಕಿಂಗ್‌ ವಾಹನಗಳು ಅದರ ಮೇಲೆ ಸುಸೂತ್ರವಾಗಿ ನಿಲ್ಲಿಸುವಂತೆ ಮಾಡಿದರೆ ಸಮಸ್ಯೆಯ ಅರ್ಧ ಭಾಗ ಸುಧಾರಿಸುತ್ತದೆ. 

ಬೇಕಾಬಿಟ್ಟಿ ಹಾಕಲಾಗಿರುವ ವಿದ್ಯುತ್‌ ಹಾಗೂ ಫೋನ್‌ ಕಂಬಗಳನ್ನು ಸರಿಪಡಿಸಿದರೆ ವಾಹನ ನಿಲುಗಡೆ ಸುಧಾರಿಸುತ್ತದೆ. ಬೀದಿ ಬದಿಯ ವ್ಯಾಪಾರವನ್ನು ಖಡಕ್ಕಾಗಿ ರಸ್ತೆ, ಫುಟ್‌ಪಾತ್‌ಗಳಿಂದ ನಿಷೇಧಿ ಸಬೇಕು. ಮಾನವೀಯ ದೃಷ್ಟಿ ಪ್ರಶ್ನೆಗೆ, ಅವರಿಗೆ ಪರ್ಯಾಯ
ಸ್ಥಳ ಸೂಚಿಸಬೇಕು. ಆರಂಭದಲ್ಲಿ ಪರ್ಯಾಯ ಸ್ಥಳದಲ್ಲಿ ವ್ಯಾಪಾರ ಆಗದಿರಬಹುದು. ನಂತರ ಜನ ಖರೀದಿಗೆ ಬಂದೇ ಬರುತ್ತಾರೆ. ನಗರದೊಳಗಿನ ಕಿರಿದಾದ ಸಂಪರ್ಕ ರಸ್ತೆಗಳಿಗೆ ಡಾಂಬರೀಕರಣ ಅಥವಾ ಕಾಂಕ್ರೀಟ್‌ ಹಾಕುವುದಕ್ಕಿಂತ ಇಂಟರ್‌
ಲಾಕ್‌ ಬ್ರಿಕ್ಸ್‌ಗಳನ್ನು ಅಳವಡಿಸಿದ ರಸ್ತೆ ನಿರ್ಮಾಣಕ್ಕೆ ಮುಂದಾದರೆ ಬಹುವಾರ್ಷಿಕವಾಗಿ ಸಮಸ್ಯೆ ಎದುರಾಗುವುದಿಲ್ಲ. ಸುಮಾರು ಆರು ವರ್ಷಗಳ ಹಿಂದೆ ಕೋರ್ಟ್‌ ರಸ್ತೆಯಿಂದ ಚಾಮರಾಜಪೇಟೆಗೆ ತಲುಪುವ ಚಾಂದಿನಿ ಆಸ್ಪತ್ರೆ ಎದುರು ಹಾಕಿದ
ಇಂಟರ್‌ಲಾಕ್‌ ರಸ್ತೆ ಇವತ್ತಿಗೂ ಸುರಕ್ಷಿತವಾಗಿದೆ. 

ಕಾಂಕ್ರೀಟ್‌ ಬಡ್ಡಿಯಲ್ಲಿ ಡಾಂಬರು!: ಕಾಂಕ್ರೀಟ್‌ ರಸ್ತೆಗಳು ಮಲೆನಾಡಿಗಲ್ಲ. ತೀರಾ ಕುಸಿಯುವ ಸ್ಥಿತಿಯ ರಸ್ತೆಗೆ ಮಾತ್ರ ಇದು ಸರಿ. ತೀವ್ರ ಮಳೆಯಿಂದ ಇವು ಪಾಚಿಗಟ್ಟಿ ಅಪಾಯಕ್ಕೆ ತೆರೆದುಕೊಳ್ಳುತ್ತಿವೆ. ವರದಪುರದ ಶ್ರೀಧರಾಶ್ರಮಕ್ಕೆ ಹಾಕಿರುವ
ಕಾಂಕ್ರೀಟ್‌ ರಸ್ತೆ ಜಾರದಿರಲು 15 ದಿನಗಳಿಗೊಮ್ಮೆ ಶ್ರೀಧರಾಶ್ರಮದಿಂದ ಸುಣ್ಣ ಹಾಕಿ ಪಾಚಿಯನ್ನು ತೆಗೆಯುವ ಕೆಲಸ ಮಾಡಲಾಗುತ್ತದೆ. ಇಷ್ಟಕ್ಕೂ ಇವು ವಿಪರೀತ ದುಬಾರಿ. ವರದಪುರದ ರಸ್ತೆಗೆ ಒಂದು ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲಿದ್ದ
ಡಾಂಬರು ರಸ್ತೆಯನ್ನು ಕಿತ್ತು ತೆಗೆಯಲಾಗಿದೆ. 

ಕಾಮಗಾರಿ ಸಂಪನ್ನಗೊಳಿಸಲು ಇನ್ನೂ 50 ಲಕ್ಷ ರೂ. ಬೇಕಾಗಿದೆ. ಒಂದೊಮ್ಮೆ ಒಂದೂವರೆ ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿ ಅದರ ಬಡ್ಡಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸರಿಸುಮಾರು 40 ಲಕ್ಷ ಖರ್ಚು ಮಾಡಿ ಹೊಸದಾಗಿ ಡಾಂಬರೀಕರಣ
ಮಾಡಬಹುದಿತ್ತು. ಆಗ ಮೂಲಧನ ಕೂಡ ಕೈಯಲ್ಲಿ ಉಳಿಯುತ್ತಿತ್ತು!

ಇವಿಷ್ಟಲ್ಲದೆ ಸಾಗರ ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ಸೇರಿದಂತೆ ಅನೇ ಸಮಸ್ಯೆಗಳು ಇದ್ದು ಇವನ್ನೆಲ್ಲ ಶಾಶ್ವತವಾಗಿ ಪರಿಹರಿಸುವತ್ತ ಚಿಂತನೆ ಹಾಗೂ ದೂರಗಾಮಿ ಯೋಜನೆಯ ಅಗತ್ಯವಿದೆ.

ಮಾ.ವೆಂ.ಸ. ಪ್ರಸಾದ್‌ 

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.