ಸಾಗರವಾಗಲಿ ಸುಂದರ..!


Team Udayavani, Aug 24, 2018, 6:02 PM IST

shiv.jpg

ಸಾಗರ: ಪ್ರಗತಿಯ ದಾರಿಯೇ ವಿಚಿತ್ರ. ಯಾವುದೇ ನಗರ, ತಾಲೂಕು, ಜಿಲ್ಲೆ, ರಾಜ್ಯ ಸಮಸ್ಯೆಗಳಿಲ್ಲದೆ ಸಂತೃಪ್ತ ಎಂಬುದಿಲ್ಲ. ಮೂಲಭೂತ ಸಮಸ್ಯೆಗಳು ಬಗೆಹರಿದರೆ ಎರಡನೇ ಹಂತದ ಸಮಸ್ಯೆಗಳು ಮುಂಚೂಣಿಗೆ ಬರುತ್ತವೆ. ಇದಕ್ಕೆ ಸಾಗರ ನಗರವೂ
ಹೊರತಲ್ಲ. ನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಬಂದುದರಿಂದ ನೀರಿನ ಕೊರತೆ ಎಂಬ ಮೂಲ ಸಮಸ್ಯೆಗೆ ಮಂಗಳ ಹಾಡಿದಂತಾಯಿತು. ಆದರೆ ಬಂದ ನೀರಿನ ಸಮರ್ಪಕ ವಿಲೇವಾರಿಗೆ ಪೈಪ್‌ ಲೈನ್‌ ಸಮಸ್ಯೆ, ನೀರು ಹಾದು ಬರುವ ದಾರಿಯ ಗ್ರಾಮಗಳಿಗೂ ನೀರು ಒದಗಿಸಲು ಕೈಗೊಂಡ ಯೋಜನೆಯ ವಿಳಂಬ, ಕೊನೆಗೆ ಶರಾವತಿಯಿಂದ
ಸಾಗರಕ್ಕೆ ನೀರು ದಬ್ಬುವ ಪಂಪ್‌ ಪದೇ ಪದೇ ಕೈಕೊಡುವುದು ಕೂಡ ಜನರಿಗೆ ಅಸಹನೀಯ ಎನ್ನಿಸಬಹುದು!

ಕೆರೆಗಳ ಮರುಜನ್ಮದತ್ತ: ಸಾಗರ ತಾಲೂಕಿನ ಮಟ್ಟಿಗೆ ಹೇಳುವುದಾದರೆ, ಸಮಸ್ಯೆಗಳ ಪರಿಹಾರಕ್ಕೆ ಸಂಕಷ್ಟ ಕಾಲದ ಯೋಜನೆ, ದೂರಗಾಮಿ ಪರಿಣಾಮದ ಕಲ್ಪನೆಗಳು ಡ್ರಾಯಿಂಗ್‌ ರೂಂನಿಂದ ಕಾರ್ಯಕ್ಷೇತ್ರಕ್ಕೆ ಬರಬೇಕಿದೆ. ಶಿವಮೊಗ್ಗ ಜಿಲ್ಲೆಯ
ಸೊರಬ, ಶಿಕಾರಿಪುರಗಳಂತೆ ಸಾಗರದಲ್ಲಿಯೂ ಅಧಿಕ ಪ್ರಮಾಣದಲ್ಲಿ ಕೆರೆಗಳಿವೆ. ಈ ಕೆರೆಗಳಲ್ಲಿ ನೀರು ನಿರಂತರವಾಗಿ ಕಾಣಲು ಕಾಯಕಲ್ಪದ ದಾಹವಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಒಂದು ಯೋಜನೆಯನ್ನು ಪೂರೈಸುವುದಕ್ಕಿಂತ ಅದಕ್ಕೊಂದು ವಾರ್ಷಿಕ ಅನುದಾನ ನಿಗದಿಪಡಿಸಿ ಇದರಲ್ಲಿ ಆಗುವಷ್ಟು ಕೆಲಸ ಮಾಡಬಹುದು ಎನ್ನುತ್ತದೆ. ಕೆರೆಗಳ ವಿಚಾರದಲ್ಲಿ ಕೂಡ ಈ
ಕ್ರಮಕ್ಕೆ ಮುಂದಾಗಿರುವುದರಿಂದ ಸಮಸ್ಯೆ ಜೀವಂತವಾಗಿಯೇ ಇದೆ. ಈ ಆರ್ಥಿಕ ವರ್ಷದಲ್ಲಿ ಒಂದು ಕೆರೆಯನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆದು, ದಂಡೆಗಳನ್ನು ಭದ್ರಗೊಳಿಸಿ, ಸಾಧ್ಯವಾದರೆ
ಪ್ರವಾಸೋದ್ಯಮಕ್ಕೆ ಅಣಿಗೊಳಿಸದಿದ್ದರೆ ಶ್ರಮ ವ್ಯರ್ಥ. ಸಾಗರದ ಪ್ರಸಿದ್ಧ ಗಣಪತಿ ಕೆರೆಯಿಂದ ಆರಂಭಿಸಿ ತಾಲೂಕಿನ ಅತಿ ವಿಶಾಲ ಕೆಳದಿ ಕೆರೆ ಸೇರಿಸಿ ಪ್ರತಿ ಗ್ರಾಮದಲ್ಲಿಯೂ ಇರುವ ಕನಿಷ್ಟ ಒಂದು ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿಗಳನ್ನು ಹಂತ
ಹಂತವಾಗಿ ನಡೆಸಲೇಬೇಕಾದ ಅಗತ್ಯವಿದೆ. ಬೇಸಿಗೆ ನೀರಿಗಾಗಿ ಟ್ಯಾಂಕರ್‌ ಹೊಡೆಯುವುದು ತಾತ್ಕಾಲಿಕ ಪರಿಹಾರವಾದರೆ ಬೋರ್‌ವೆಲ್‌ ಕೊರೆಯುವುದು ಭವಿಷ್ಯದ ಕೊಡಗು ಅಪಾಯವನ್ನು ಆಹ್ವಾನಿಸಿದಂತೆ!

ಇಂಟರ್‌ಲಾಕ್‌ ಸೂತ್ರ!: ನಗರಗಳ ಟ್ರಾμಕ್‌ನ್ನು ರಸ್ತೆ ಅಗಲೀಕರಣದಿಂದ ಮಾತ್ರ ನಿರ್ವಹಿಸಬಹುದು ಎಂಬ ತಪ್ಪು ಕಲ್ಪನೆಯಿದೆ. ಸಾಗರ ನಗರದ ವಿಚಾರಕ್ಕೇ ಬಂದರೆ ಶಿಸ್ತಿನ ವಾಹನ ನಿಲುಗಡೆ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರ ಒದಗಿಸಬಲ್ಲದು. ಈಗಲೂ
ನಗರಾಡಳಿತ ರಸ್ತೆ ಪಕ್ಕದ ಚರಂಡಿಗಳ ಮೇಲೆ ಸ್ಲಾÂಬ್‌ ಗಳನ್ನು ಅಳವಡಿಸಿ ಪಾರ್ಕಿಂಗ್‌ ವಾಹನಗಳು ಅದರ ಮೇಲೆ ಸುಸೂತ್ರವಾಗಿ ನಿಲ್ಲಿಸುವಂತೆ ಮಾಡಿದರೆ ಸಮಸ್ಯೆಯ ಅರ್ಧ ಭಾಗ ಸುಧಾರಿಸುತ್ತದೆ. 

ಬೇಕಾಬಿಟ್ಟಿ ಹಾಕಲಾಗಿರುವ ವಿದ್ಯುತ್‌ ಹಾಗೂ ಫೋನ್‌ ಕಂಬಗಳನ್ನು ಸರಿಪಡಿಸಿದರೆ ವಾಹನ ನಿಲುಗಡೆ ಸುಧಾರಿಸುತ್ತದೆ. ಬೀದಿ ಬದಿಯ ವ್ಯಾಪಾರವನ್ನು ಖಡಕ್ಕಾಗಿ ರಸ್ತೆ, ಫುಟ್‌ಪಾತ್‌ಗಳಿಂದ ನಿಷೇಧಿ ಸಬೇಕು. ಮಾನವೀಯ ದೃಷ್ಟಿ ಪ್ರಶ್ನೆಗೆ, ಅವರಿಗೆ ಪರ್ಯಾಯ
ಸ್ಥಳ ಸೂಚಿಸಬೇಕು. ಆರಂಭದಲ್ಲಿ ಪರ್ಯಾಯ ಸ್ಥಳದಲ್ಲಿ ವ್ಯಾಪಾರ ಆಗದಿರಬಹುದು. ನಂತರ ಜನ ಖರೀದಿಗೆ ಬಂದೇ ಬರುತ್ತಾರೆ. ನಗರದೊಳಗಿನ ಕಿರಿದಾದ ಸಂಪರ್ಕ ರಸ್ತೆಗಳಿಗೆ ಡಾಂಬರೀಕರಣ ಅಥವಾ ಕಾಂಕ್ರೀಟ್‌ ಹಾಕುವುದಕ್ಕಿಂತ ಇಂಟರ್‌
ಲಾಕ್‌ ಬ್ರಿಕ್ಸ್‌ಗಳನ್ನು ಅಳವಡಿಸಿದ ರಸ್ತೆ ನಿರ್ಮಾಣಕ್ಕೆ ಮುಂದಾದರೆ ಬಹುವಾರ್ಷಿಕವಾಗಿ ಸಮಸ್ಯೆ ಎದುರಾಗುವುದಿಲ್ಲ. ಸುಮಾರು ಆರು ವರ್ಷಗಳ ಹಿಂದೆ ಕೋರ್ಟ್‌ ರಸ್ತೆಯಿಂದ ಚಾಮರಾಜಪೇಟೆಗೆ ತಲುಪುವ ಚಾಂದಿನಿ ಆಸ್ಪತ್ರೆ ಎದುರು ಹಾಕಿದ
ಇಂಟರ್‌ಲಾಕ್‌ ರಸ್ತೆ ಇವತ್ತಿಗೂ ಸುರಕ್ಷಿತವಾಗಿದೆ. 

ಕಾಂಕ್ರೀಟ್‌ ಬಡ್ಡಿಯಲ್ಲಿ ಡಾಂಬರು!: ಕಾಂಕ್ರೀಟ್‌ ರಸ್ತೆಗಳು ಮಲೆನಾಡಿಗಲ್ಲ. ತೀರಾ ಕುಸಿಯುವ ಸ್ಥಿತಿಯ ರಸ್ತೆಗೆ ಮಾತ್ರ ಇದು ಸರಿ. ತೀವ್ರ ಮಳೆಯಿಂದ ಇವು ಪಾಚಿಗಟ್ಟಿ ಅಪಾಯಕ್ಕೆ ತೆರೆದುಕೊಳ್ಳುತ್ತಿವೆ. ವರದಪುರದ ಶ್ರೀಧರಾಶ್ರಮಕ್ಕೆ ಹಾಕಿರುವ
ಕಾಂಕ್ರೀಟ್‌ ರಸ್ತೆ ಜಾರದಿರಲು 15 ದಿನಗಳಿಗೊಮ್ಮೆ ಶ್ರೀಧರಾಶ್ರಮದಿಂದ ಸುಣ್ಣ ಹಾಕಿ ಪಾಚಿಯನ್ನು ತೆಗೆಯುವ ಕೆಲಸ ಮಾಡಲಾಗುತ್ತದೆ. ಇಷ್ಟಕ್ಕೂ ಇವು ವಿಪರೀತ ದುಬಾರಿ. ವರದಪುರದ ರಸ್ತೆಗೆ ಒಂದು ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲಿದ್ದ
ಡಾಂಬರು ರಸ್ತೆಯನ್ನು ಕಿತ್ತು ತೆಗೆಯಲಾಗಿದೆ. 

ಕಾಮಗಾರಿ ಸಂಪನ್ನಗೊಳಿಸಲು ಇನ್ನೂ 50 ಲಕ್ಷ ರೂ. ಬೇಕಾಗಿದೆ. ಒಂದೊಮ್ಮೆ ಒಂದೂವರೆ ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿ ಅದರ ಬಡ್ಡಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸರಿಸುಮಾರು 40 ಲಕ್ಷ ಖರ್ಚು ಮಾಡಿ ಹೊಸದಾಗಿ ಡಾಂಬರೀಕರಣ
ಮಾಡಬಹುದಿತ್ತು. ಆಗ ಮೂಲಧನ ಕೂಡ ಕೈಯಲ್ಲಿ ಉಳಿಯುತ್ತಿತ್ತು!

ಇವಿಷ್ಟಲ್ಲದೆ ಸಾಗರ ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ಸೇರಿದಂತೆ ಅನೇ ಸಮಸ್ಯೆಗಳು ಇದ್ದು ಇವನ್ನೆಲ್ಲ ಶಾಶ್ವತವಾಗಿ ಪರಿಹರಿಸುವತ್ತ ಚಿಂತನೆ ಹಾಗೂ ದೂರಗಾಮಿ ಯೋಜನೆಯ ಅಗತ್ಯವಿದೆ.

ಮಾ.ವೆಂ.ಸ. ಪ್ರಸಾದ್‌ 

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

ಅಡಿಕೆ ವ್ಯಾಪಾರಿಗಳಿಗೆ 4 ಕೋ. ರೂ. ವಂಚನೆ: ಓರ್ವನ ಸೆರೆ

Sagara ಅಡಿಕೆ ವ್ಯಾಪಾರಿಗಳಿಗೆ 4 ಕೋ. ರೂ. ವಂಚನೆ: ಓರ್ವನ ಸೆರೆ

ಕೆ.ಎಸ್ ಈಶ್ವರಪ್ಪ

Shimoga; ಮೋದಿ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ: ಕೆ.ಎಸ್ ಈಶ್ವರಪ್ಪ

4-shivamogga

LS Polls: ‘ಮೋದಿ ಪ್ರಧಾನಿಯಾಗಿಸಲು ಬಿಜೆಪಿ ಬೆಂಬಲಿಸಿ’

ಗೀತಾ ಶಿವರಾಜ್ ಕುಮಾರ್ ಗೆಲ್ಲುವುದು ಖಚಿತ: ಒಬಿಸಿ ಜಿಲ್ಲಾಧ್ಯಕ್ಷ ರಮೇಶ್ ಹೇಳಿಕೆ

ಗೀತಾ ಶಿವರಾಜ್ ಕುಮಾರ್ ಗೆಲ್ಲುವುದು ಖಚಿತ: ಒಬಿಸಿ ಜಿಲ್ಲಾಧ್ಯಕ್ಷ ರಮೇಶ್ ಹೇಳಿಕೆ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.