ಪ್ರಗತಿಪರರ ಹತ್ಯೆ ಖಂಡನೀಯ: ರಾಜಪ್ಪ ಮಾಸ್ತರ್
Team Udayavani, Sep 7, 2018, 5:00 PM IST
ಸೊರಬ: ಬಹುತ್ವ ಹೊಂದಿರುವ ಪ್ರಜಾಪ್ರಭುತ್ವ ದೇಶದಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ಚಿಂತಕ ಹಾಗೂ ಪ್ರಗತಿಪರರ ಹತ್ಯೆ ಆಗುತ್ತಿರುವುದು ಖಂಡನೀಯ ಎಂದು ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.
ಪಟ್ಟಣದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಸೆ.15 ಮತ್ತು 16 ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪದಾಧಿ ಕಾರಿಗಳ ಅಧ್ಯಯನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಅವರು
ಮಾತನಾಡಿದರು. ಹಲವು ಧರ್ಮಗಳ ಸಂಗಮವಾಗಿರುವುದರಿಂದಲೇ ಇಂದಿಗೂ ದೇಶದ ಐಕ್ಯತೆ ಜೀವಂತವಾಗಿದೆ. ಇದರ ಮಧ್ಯೆ ಕೆಲವು ಮನುವಾದಿಗಳು ತಮ್ಮ ಮನು ಧರ್ಮವನ್ನು ಬಲವಂತವಾಗಿ ಹೇರುವ ಪ್ರಯತ್ನ
ನಡೆಸುವ ಜತೆಗೆ ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಕೆಲ ಪ್ರಗತಿಪರ ಚಿಂತಕರನ್ನು ಹತ್ಯೆಗೈಯಲು ಪ್ರೇರಣೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಗತಿಪರರ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಕೈವಾಡವಿದೆ ಎನ್ನುವುದು ತನಿಖಾ ಸಂಸ್ಥೆಗಳಿಂದ ಗೊತ್ತಾಗಿದೆ ಎಂದರು.
ದೇಶದಲ್ಲಿ ಅಸಹಿಷ್ಣುತೆ ವಾತಾವರಣ ನಿಮಾರ್ಣವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಹಲವು
ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಅರಳಸುರಳಿ ಅಧ್ಯಕ್ಷತೆ ವಹಿಸಿ, ಸೆ.15 ಮತ್ತು 16ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮಧ್ಯಪ್ರದೇಶದ ಎನ್ಎಪಿಎಂ ರಾಷ್ಟ್ರೀಯ ಸಂಚಾಲಕ ಡಾ| ಸನೀಲಂ ಉದ್ಘಾಟನೆ ನೆರವೇರಿಸಲಿದ್ದಾರೆ. ಟಿ. ನರಸೀಪುರ ನಳಂದ ಬುದ್ಧವಿಹಾರದ ಭಂತೆ ಬುದ್ಧ ರತ್ನ ಅವರು ಸಾನ್ನಿಧ್ಯ ವಹಿಸಲಿದ್ದು,
ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸೆ.15ರಂದು ನಡೆಯುವ ಶಿಬಿರದಲ್ಲಿ ಮತಾಂಧತೆಯ ವಿರುದ್ಧ ಶೋಷಿತ ಸಮುದಾಯಗಳ ಏಕತೆ ಮತ್ತು ಸಂಘಟನೆ,
ಡಾ.ಅಂಬೇಡ್ಕರ್ ದೃಷ್ಟಿ ಕೋನದಲ್ಲಿ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ನಡೆ ಹಾಗೂ ಸೆ.16ರಂದು ಶೋಷಿತರ ವಿಮೋಚನೆ-ಭೂಮಿ, ವಸತಿ, ಮೀಸಲಾತಿ ಹಾಗೂ ಇಂದಿನ ರಾಜಕೀಯ ಪರಿಸ್ಥಿತಿ-ಗಾಂ ಧಿ, ಅಂಬೇಡ್ಕರ್, ಲೋಹಿಯಾ ಪ್ರಸ್ತುತತೆ ವಿಷಯ ಹಾಗೂ ದಲಿತ ಸಮುದಾಯದ ಅಭಿವೃದ್ಧಿ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಸಂಚಾಲಕ ಮಂಜಪ್ಪ ಹಸವಿ, ಎ.ಬಿ. ಬಸಪ್ಪ ಜಡೆ, ಶಿವಾಜಿ ಜಡೆ, ಪರಶುರಾಮ, ಕೃಷ್ಣಪ್ಪ ಉದ್ರಿ ವಡ್ಡಿಗೆರೆ, ಪುಟ್ಟಪ್ಪ ಮೂಗೂರು, ಮೊಹಮದ್ ಶಾಬೂಲಾಲ್, ಬಿ.ಎಸ್. ಬಸವರಾಜ್ ಶಿಡ್ಡಿಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು