ಬೇಡರ ಹೊಸಳ್ಳಿಯಲ್ಲಿ ಆರು ವೀರ ಮಾಸ್ತಿ ಗುಡಿ ಪತ್ತೆ
Team Udayavani, Sep 15, 2018, 5:01 PM IST
ಶಿವಮೊಗ್ಗ: ತಾಲೂಕಿನ ಕೆಳಗಿನ ಬೇಡರ ಹೊಸಹಳ್ಳಿಯಲ್ಲಿ ಈಚೆಗೆ ಆರುವೀರ ಮಾಸ್ತಿ ಗುಡಿಗಳು ಪತ್ತೆಯಾಗಿವೆ. ಮಾಸ್ತಿಗುಡಿ ಕ್ಷತ್ರಿಯ ಸಮಾಜದವರ ಶವ ಸುಡುವ ಜಾಗ ಎಂದು ಕರೆಯುವ ಈ ಜಾಗದಲ್ಲಿ ಈಚೆಗೆ ಪುರಾತತ್ವ ಸಂಗ್ರಾಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯಕಾಲೇಜು ಸಹಯೋಗದಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳೊಂದಿಗೆ ಸ್ವತ್ಛತಾ ಕಾರ್ಯ ಕೈಗೊಂಡ ವೇಳೆ ಪತ್ತೆಯಾಗಿದೆ.
ಒಂದು ದೇವಾಲಯ ಸುಸ್ಥಿತಿಯಲ್ಲಿದ್ದು ಇನ್ನೂ ಐದು ಗುಡಿಗಳು ದುಸ್ಥಿತಿಯಲ್ಲಿದೆ. ಈ ಗುಡಿಗಳಿಲ್ಲಿರುವ ವೀರಮಾಸ್ತಿ ಶಿಲ್ಪಗಳು ಬಹಳ ಅಪರೂಪದವು ಎಂದು ಹೇಳಲಾಗುತ್ತಿದೆ. ಎಲ್ಲಾ ಕಡೆ ವೀರಗಲ್ಲು ಗುಡಿ ಅಥವಾ ಮಾಸ್ತಿಗಲ್ಲು ಗುಡಿ ನೊಡಬಹುದು. ಆದರೆ ಇಲ್ಲಿ ಒಂದೇ ಹತ್ತಿರ ಆರು ವೀರ ಮಾಸ್ತಿಗಲ್ಲು ಗುಡಿಗಳು ಕಂಡು ಬಂದಿದೆ. ಸ್ಥಳೀಯರ ಪ್ರಕಾರ ಇಲ್ಲಿ ಏಳು ಗುಡಿಗಳು ಇರುವುದಾಗಿ ತಿಳಿಸಿದ್ದಾರೆ. ಆದರೆ ಸ್ವತ್ಛತೆ ಮಾಡುವಾಗ ಆರು ಮಾತ್ರ ಪತ್ತೆಯಾಗಿವೆ.
ವೀರಮಾಸ್ತಿಗಲ್ಲು ಗುಡಿಗಳ ವಿಶೇಷ: ವೀರರು ತಮ್ಮ ಊರಿನ ರಕ್ಷಣೆಗೋಸ್ಕರ ಕಳ್ಳರು ನುಗ್ಗಿದರೆ, ಗೋವುಗಳನ್ನು ಕದಿಯುತ್ತಿದ್ದರೆ, ಸ್ತ್ರೀಯರ ಅಪಹರಣ ಮಾಡುತ್ತಿದ್ದರೆ, ಯಾವುದಾದರೂ ಕಾಡು ಪ್ರಾಣಿಗಳು ಊರಿನ ಒಳಗೆ ನುಗ್ಗಿದರೆ ಆ ವೇಳೆ ಅವರನ್ನು ಸದೆ ಬಡಿದು ವೀರ ಮರಣ ಅಪ್ಪಿದಾಗ ಇಂತಹ ವೀರಗಲ್ಲು ನೆಡುತ್ತಿದ್ದರು. ಆದರೆ ಇಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ.
ಒಂದು ಸೈನಿಕ ವ್ಯವಸ್ಥೆಯಲ್ಲಿ ಹೋರಾಡಿ ಮಡಿದವರ ವೀರಮಾಸ್ತಿಗಲ್ಲುಗಳೇ ಇರಬಹುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಆರು ವೀರಮಾಸ್ತಿಗಲ್ಲು ಗುಡಿಯಲ್ಲಿ ನಮಗೆ ಕಂಡುಬಂದತೆ ನಾಲ್ಕು ಗುಡಿಯಲ್ಲಿ ವೀರಮಾಸಿಗಲ್ಲುಗಳು ಹಾಗೂ ಇನ್ನೊಂದರಲ್ಲಿ ಅಂದರೆ ಇದಕ್ಕೆ ಗುಡಿಯಿಲ್ಲದೆ ಬಯಲಲ್ಲಿ ಇದ್ದು ವೀರಯುದ್ಧಕ್ಕೆ ಕುದುರೆಯ ಮೇಲೆ ಕುಳಿತು ಹೊರಟಿರುವ ದೃಶ್ಯ ಕಂಡುಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ