ಅಪ್ಪ- ಮಗನಿಂದ ಸ್ವಾರ್ಥ ರಾಜಕಾರಣ
Team Udayavani, Oct 27, 2018, 5:18 PM IST
ಶಿಕಾರಿಪುರ: ಇಲ್ಲಿನ ಶಾಸಕರು ಹಾಗೂ ಅವರ ಪುತ್ರರ ವರ್ತನೆ ಸಂವಿಧಾನದಲ್ಲಿ ಬಂದ್ಯಾ ಭಾವ ಹೋದ್ಯಾ ಭಾವ ಎನ್ನುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದರು.
ಶುಕ್ರವಾರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸಂವಿಧಾನದಲ್ಲಿ ಗ್ರಾಪಂನಿಂದ ಲೋಕಸಭೆಯವರೆಗೂ ಮತದಾರರು 5 ವರ್ಷಕ್ಕಾಗಿ ರಾಜಕಾರಣಿಗಳನ್ನು ಆರಿಸಿ ಕಳಿಸುತ್ತಾರೆ. ಆದರೆ ಶಿಕಾರಿಪುರದಲ್ಲಿ ಇಲ್ಲಿನ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಅಪ್ಪನಿಗಾಗಿ ಮಗ ಮಗನಿಗಾಗಿ ಅಪ್ಪ ಎಂದು ಆರು ತಿಂಗಳಿಗೊಮ್ಮೆ ಅಧಿ ಕಾರವನ್ನು ಹಂಚಿಕೊಳ್ಳುತ್ತಾ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ. ಸಾರ್ವಜನಿಕರ ಜೊತೆ ಆಟವಾಡುತ್ತಿರುವ ಇಂತಹ ಚುನಾವಣೆಯನ್ನು ಕಂಡು ನನಗೆ ಕಣ್ಣೀರು ಬರುವಂತಾಗಿದೆ ಎಂದರು.
ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಕುಬಟೂರಿನಿಂದ ಶಿವಮೊಗ್ಗದವರೆಗೂ ನಾನು ಪಾದಯಾತ್ರೆ ಮಾಡಿದ್ದು ಶೋಕಿಗಾಗಿ ಅಲ್ಲ. ತಾಲೂಕಿನ ಸಂಪೂರ್ಣ ನೀರಾವರಿ ಯೋಜನೆ ಮಾಡಲು ಎಂದರು. ಶಿಕಾರಿಪುರದಲ್ಲಿ ಅರಣ್ಯ ಭೂಮಿ ಅರ್ಜಿಗಳು ಬಾಕಿ ಇದ್ದ ಸಮಯದಲ್ಲಿ
ನಾನು ವಿಧಾನಸಭಾ ಅಧ್ಯಕ್ಷನಾಗಿದ್ದೆ. ಆಗ ಪ್ರಾಮಾಣಿಕತೆಯಿಂದ ಹಗಲು ರಾತ್ರಿ ಶ್ರಮಪಟ್ಟು ಎರಡು ವರ್ಷಗಳಿಂದ ಕೊಳೆಯುತ್ತ ಬಿದ್ದಿದ್ದ
4 ಸಾವಿರ ಅರ್ಜಿಗಳನ್ನು ಇಥ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ಅದರಿಂದ ಅರ್ಜಿಗಳು ಶೀಘ್ರ ಇತ್ಯರ್ಥವಾಗುವ ಹಂತ ತಲುಪಿವೆ.
ಕಾಗೋಡು ತಿಮ್ಮಪ್ಪ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ