ಬಿಎಸ್ ವೈ ಹಳ್ಳಿಯವರು, ಮುಗ್ಧರು, ಎಚ್ ಡಿಕೆ ಬ್ಲ್ಯಾಕ್ ಮೇಲರ್: ಆಯನೂರು
Team Udayavani, Feb 9, 2019, 10:19 AM IST
ಶಿವಮೊಗ್ಗ:ಬಿಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರರು ಅವರನ್ನು ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಬಿಎಸ್ ವೈ ಹಳ್ಳಿಯವರು, ಮುಗ್ಧರು. ಇಂತಹ ಕೆಟ್ಟ ಕೆಲಸ ಮಾಡಲು ಬಿಎಸ್ ವೈಗೆ ಗೊತ್ತಾಗುವುದಿಲ್ಲ ಎಂದು ಬಿಜೆಪಿ ಎಂಎಲ್ ಸಿ ಆಯನೂರು ಮಂಜುನಾಥ್ ಬಹುಪರಾಕ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತೃಪ್ತ ಕಾಂಗ್ರೆಸ್ ಶಾಸಕರನ್ನು ನಾವು ಸಂಪರ್ಕಿಸಲು ಹೋಗಿಲ್ಲ. ಅತೃಪ್ತ ಶಾಸಕರೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. 38 ಶಾಸಕರನ್ನು ಹೊಂದಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಾದರೆ, 104 ಶಾಸಕರನ್ನು ಹೊಂದಿರುವ ಬಿಜೆಪಿಗೆ ಸಿಎಂ ಸ್ಥಾನ ಪಡೆಯುವ ನೈತಿಕತೆ ಇದೆ ಎಂದರು.
ಕುಮಾರಸ್ವಾಮಿ ಆಡಿಯೋ, ವಿಡಿಯೋ ಸಂಸ್ಥೆಯ ಮಾಲೀಕರಾಗಿದ್ದಾರೆ. ಹೀಗಾಗಿ ನಕಲಿ ಶಾಮರ ತಂಡ ಕಟ್ಟಿಕೊಂಡು ನಕಲಿ ಆಡಿಯೋ, ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಚ್ ಡಿಕೆ ಒಬ್ಬ ಬ್ಲ್ಯಾಕ್ ಮೇಲರ್:
ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಬ್ಲ್ಯಾಕ್ ಮೇಲರ್. ಇಂತಹ ಕಲೆಗಳು ಗೊತ್ತಿರುವುದು ಅವರಿಗೆ ಹೆಚ್ಚು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮುಲ್ ಬೇಬಿ ಎಂದು ವ್ಯಂಗ್ಯವಾಡಿರುವ ಆಯನೂರು, ಯಡಿಯೂರಪ್ಪನವರು ಇಂತಹ ನಕಲಿ ಆಡಿಯೋ, ವಿಡಿಯೋಕ್ಕೆಲ್ಲ ಹೆದರುವುದಿಲ್ಲ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು