ದಾರಿ ತಪ್ಪಿಸುತ್ತಿರುವ ದೃಶ್ಯ ಲೋಕ


Team Udayavani, Aug 2, 2018, 12:30 AM IST

20.jpg

ಸಿನೆಮಾ, ಟಿ.ವಿ. ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕೆನ್ನುವುದು ನಿಜ. ಆದರೆ ಅದಕ್ಕಿಂತಲೂ ಅವಕ್ಕೆ ಬಹುಮುಖ್ಯವಾಗಿ ಸಮಾಜದ ಹಿತ ಮುಖ್ಯವಾಗಬೇಕಲ್ಲವೇ? ಹಣಗಳಿಕೆಯ ಹಪಾಹಪಿಯಲ್ಲಿ ನೈತಿಕತೆಯ ಗೆರೆಯನ್ನು ದಾಟಿ ಮುಂದೋಡುವುದು ಎಷ್ಟು ಸರಿ? 

ಈಗೀಗ ಟೆಲಿವಿಷನ್‌ ಮತ್ತು ಸಿನೆಮಾ ಮಾಧ್ಯಮಗಳು ತಮ್ಮ ಮೂಲ ಉದ್ದೇಶವನ್ನೇ ಮರೆತು ಕೇವಲ ವಾಣಿಜ್ಯೋದ್ದೇಶ ಕ್ಕಾಗಿಯೇ ಅಸ್ತಿತ್ವದಲ್ಲಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬಹು ಭಾಷೆಗಳ ನೆಲೆವೀಡಾಗಿರುವ ಭಾರತದಂಥ ದೇಶದ ವಿಶಾಲ ಪರಿಸರದಲ್ಲಿ ಒಂದೊಂದು ಭಾಷೆಗೂ ಪ್ರತ್ಯೇಕ ವಾಹಿನಿಗಳು(ಸುದ್ದಿ-ಸೀರಿಯಲ್‌) ಮತ್ತು ಸಿನೆಮಾ ಉದ್ಯಮಗಳಿವೆ. ಈ ಬೆಳವಣಿಗೆ ಸಹಜವೂ ಹೌದು. ಆದರೆ ಹೀಗೆ ಹುಟ್ಟಿಕೊಂಡ ಉದ್ಯಮವು ಅನಾರೋಗ್ಯಕರ ಸ್ಪರ್ಧೆಗೆ ಬಿದ್ದು ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಮುಂದೆ ಸಾಗಿದೆ. ಅಂತರ್ಜಾಲದ ವೇಗದ ಬೆಳವಣಿಗೆಯ ಹೊರತಾಗಿಯೂ  ದೇಶದಲ್ಲಿ ಈಗಲೂ ಬೇರುಮಟ್ಟದಲ್ಲಿ ಸಿನಿಮಾ ಮತ್ತು ಕಿರುತೆರೆ ಅತ್ಯಂತ ಯಶಸ್ವಿ ಮನೋರಂಜನಾ ಮಾಧ್ಯಮಗಳಲ್ಲೊಂದಾಗಿವೆ. ಇತರೆ ಸಂಪರ್ಕ ಮಾಧ್ಯಮಗಳಾದ ದಿನಪತ್ರಿಕೆ, ಆಕಾಶವಾಣಿಗಳಿಗಿಂತ ಹೆಚ್ಚು ಪ್ರಭಾವಶಾಲಿಗಳಿವು.  

ಆದರೆ ಇವುಗಳು ತಮ್ಮ ಮೂಲ ಉದ್ದೇಶವನ್ನು ಮರೆತು ಯಾವಾಗ ಹಣ ಮಾಡುವ ಪೈಪೋಟಿಗೆ ಬಿದ್ದವೋ ಆಗಲೇ ಅಪಾಯ ಆರಂಭವಾಗಿದ್ದು. ಇಂದು ಟೆಲಿವಿಷನ್‌, ಸಿನೆಮಾ, ನ್ಯೂಸ್‌ ಚಾನೆಲ್‌ಗ‌ಳ ಹಾವಳಿ ಎಷ್ಟಾಗಿಬಿಟ್ಟಿದೆಯೆಂದರೆ ಜನರನ್ನು ಸೆಳೆಯುವುದಕ್ಕಾಗಿ ಇವು ನೈತಿಕತೆಯ ಗೆರೆಯನ್ನು ದಾಟಿ ತುಂಬಾ ದೂರ ಮುನ್ನಡೆದುಬಿಟ್ಟಿವೆ. ಎಲ್ಲಾ ಕಾಲಕ್ಕೂ ಮನುಷ್ಯನ ನಡವಳಿಕೆಯನ್ನು ನಿರ್ಧರಿಸು ವುದರ‌ಲ್ಲಿ ಕಾಮದ ಪಾತ್ರ ಬಹು ದೊಡ್ಡದು ಎನ್ನುತ್ತಾನೆ ಖ್ಯಾತ ಮನಃಶಾಸ್ತ್ರಜ್ಞ ಸಿಗೆ¾ಂಡ್‌ ಫ್ರಾಯ್ಡ. ಆತನ ಪ್ರಕಾರ ಮಗು ವೊಂದರಲ್ಲಿ ಲೈಂಗಿಕ ತಿಳಿವಳಿಕೆ 5 ವರ್ಷದಿಂದ 13 ವರ್ಷದವರೆಗೆ ರೂಪುಗೊಳ್ಳುತ್ತಾ ಸಾಗುತ್ತದೆ. ಇದು ಮೊದಲು ಮೊಗ್ಗಿನಂತಿದ್ದು ಹರೆಯಕ್ಕೆ ಕಾಲಿಡುತ್ತಿದ್ದಂತೆ ಅರಳಿ ಹೂವಾಗಿ ಬಿಡುತ್ತದೆ. ಆಗ ಈ ಮುಕ್ತ ಮನಸ್ಸುಗಳ ಮೇಲೆ ಲೈಂಗಿಕ ಅಕರ್ಷಣೆ ಸಹಜವಾಗಿ ಮೂಡುತ್ತದೆ. ವಸ್ತುಸ್ಥಿತಿ ಹೀಗಿರು  ವಾಗ… ಆ ಮನಸ್ಸುಗಳನ್ನು ಅಡ್ಡದಾರಿಗೆಳೆಯುವುದಕ್ಕೇನೋ ಎಂಬಂತೆ ತಯಾರಾಗಿ ನಿಂತಿರುತ್ತವೆ ಈ ದೃಶ್ಯ ಮಾಧ್ಯಮಗಳು. ಇಂದು ಸಿನೆಮಾ, ಸೀರಿಯಲ್‌ ಅಥವಾ ಸುದ್ದಿ ವಾಹಿನಿಗಳೂ ಕೂಡ ಅಶ್ಲೀಲ ದೃಶ್ಯಾವಳಿಗಳನ್ನು ಬಿತ್ತರಿಸುತ್ತಾ ಹರೆಯದ ಮನಸ್ಸುಗಳನ್ನು ಚಂಚಲಗೊಳಿಸುತ್ತಿವೆ. ಇಂಥದ್ದನ್ನೆಲ್ಲ ನೋಡಿ ದಾಗ ಯುವ ಮನಸ್ಸು ನಿಯಂತ್ರಣಕ್ಕೆ ಬರಲಾಗದೇ ಅವಾಂತ ರಗಳಿಗೆ ಕಾರಣವಾಗಬಹುದು. 

ಅಮೆರಿಕದ ಸಮಾಜಶಾಸ್ತ್ರಜ್ಞ ಎಲಿಯಟ್‌, ಮಾನವ ತನ್ನ ವಿಶ್ರಾಂತ ಸಮಯದಲ್ಲಿ ದೇಹಕ್ಕೆ ಮನಸ್ಸಿಗೆ ಕೊಡುವ ಒಂದು ನೂತನ-ವಿಶೇಷ ಅನುಭವವೇ ಮನೋರಂಜನೆ ಎಂದಿದ್ದರು. ಆದರೆ ಇದೀಗ ಇದು ವಿಷಮಯ ಅನುಭವವಾಗಿ ಬದಲಾ ಗುತ್ತಿದೆ. ಲೈಂಗಿಕತೆ, ಕೊಲೆ, ಹಿಂಸೆಯಂಥ ಘಟನೆಗಳನ್ನು ವೈಭವೀಕರಿಸಿ ಯುವಮನಸ್ಸುಗಳ ಮೇಲೆ ದೃಶ್ಯ ಪ್ರಪಂಚ ಅತಿ ಕೆಟ್ಟ ಪರಿಣಾಮ ಬೀರುತ್ತಿದೆ. 

ಅಶ್ಲೀಲತೆ ಮತ್ತು ಹಿಂಸಾತ್ಮಕ ದೃಶ್ಯಗಳು ಕೇವಲ ಯಾವುದೇ ಒಂದು ಭಾಷೆಯ ಮಾಧ್ಯಮಗಳಿಗೆ ಸೀಮಿತವಾಗಿರದೆ ಇಡೀ ಭಾರತೀಯ ದೃಶ್ಯ ಮಾಧ್ಯಮವನ್ನು ಅವರಿಸಿದೆ. ಇಂದು ಯಾವುದಾದರೊಂದು ಒಳ್ಳೆಯ (ಅಶ್ಲೀಲರಹಿತ) ಚಲನಚಿತ್ರ ಬಂದಿದೆಯೆಂದರೆ ಅದು ನಮ್ಮ ಪುಣ್ಯ ಎಂಬಂತಹ ಸನ್ನಿವೇಶ ಸೃಷ್ಟಿಯಾಗಿದೆ. ಕೌಟುಂಬಿಕ ಕಥೆಯ ಹಿನ್ನೆಲೆಯನ್ನು ಹೊಂದಿರುವ ಕೆಲ ಚಿತ್ರಗಳಲ್ಲಿಯೂ ಬಾಕ್ಸಾಫೀಸ್‌ ದೃಷ್ಟಿಯನ್ನಿಟ್ಟುಕೊಂಡು ಮಸಾಲೆ ಸೇರಿಸಿ ಹಣ ಗಳಸಿಕೊಳ್ಳುವುದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಇದರಿಂದಾಗಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕೂತು ನೋಡುವಂತಹ ಚಿತ್ರಗಳೇ ಭವಿಷ್ಯದಲ್ಲಿ ನೋಡಲು ಸಾಧ್ಯವಿಲ್ಲವೇನೋ ಎಂಬ ಪ್ರಶ್ನೆ ಮೂಡುತ್ತಿದೆ.

ಸಿನೆಮಾಗಳ ವಿಷಯವನ್ನೇ ನೋಡಿ… ಬಹುತೇಕ ಚಿತ್ರಗಳಲ್ಲಿ ಅರೆನಗ್ನತೆ, ವ್ಯಭಿಚಾರ, ಅತ್ಯಾಚಾರ, ವಂಚನೆ ಮತ್ತು ಹತ್ಯೆ ಸನ್ನಿವೇಶಗಳನ್ನು ಆ ಕಥೆಗೆ ಪೂರಕವಿರಲಿ, ಇಲ್ಲದಿರಲಿ ಮಿತಿ ಮೀರಿ ಬಳಸಲಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಬೇಕಿದ್ದ ಲೈಂಗಿಕತೆ, ಚುಂಬನದಂಥ ಕಾರ್ಯಗಳು ಈಗ ಬಹಿರಂಗವಾಗಿಯೇ ಪರದೆಯ ಮೇಲೆ ಪ್ರದರ್ಶ ನವಾಗುತ್ತವೆ. ಹೆಣ್ಣನ್ನು ದೇವತೆ ಎಂದು ಪೂಜಿಸುವ ಭಾರತೀಯ ಸಂಸ್ಕೃತಿಯ ಸಮಾಜದಲ್ಲಿ ಇದೇ ಮಹಿಳೆಯನ್ನು ಎಲ್ಲಾ ಮಾಧ್ಯಮದಲ್ಲೂ ಅತ್ಯಂತ ಕೀಳಾಗಿ ಚಿತ್ರಿಸಲಾಗುತ್ತಿದೆ. ಇದರ ನೇರ ಪರಿಣಾಮವು ಸಮಾಜದಲ್ಲಿ ಈಗಾಗಲೇ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಅಪರಾಧ ಪ್ರಕರಣಗಳ ರೂಪದಲ್ಲಿ ಕಾಣಿಸುತ್ತಿದೆ.

ಇಂದು ಸಮಾಜದಲ್ಲಿ ಅನೀತಿಗಳ ಪ್ರಮಾಣ ಹೆಚ್ಚಳವಾಗಿದ್ದರೆ ಅದಕ್ಕೆ ಈ ಮಾಧ್ಯಮಗಳ ಕೊಡುಗೆಯೂ ಬಹಳಷ್ಟಿದೆ ಎನ್ನುವು ದನ್ನು ಅಲ್ಲಗಳೆಯಲಾಗದು. ಸಿನೆಮಾ, ಟಿ.ವಿ. ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರ ಬೇಕೆನ್ನುವುದು ನಿಜ. ಆದರೆ ಅದಕ್ಕಿಂತಲೂ ಅವಕ್ಕೆ ಬಹು ಮುಖ್ಯವಾಗಿ ಸಮಾಜದ ಹಿತ ಮುಖ್ಯವಾಗಬೇಕಲ್ಲವೇ?

ಮಂಜುನಾಥ ಉಲುವತ್ತಿ ಶೆಟ್ಟರ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.