ಶಬರಿಮಲೆ: ಚಿಂತನೆ ರೀತಿ ಬದಲಾಗಲಿ
Team Udayavani, Nov 9, 2018, 3:44 AM IST
ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿ ಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ನಿಂತಿರುವುದು ಮಾತ್ರವಲ್ಲ, ಬಹುತೇಕ ಆಚರಣೆಗಳು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣವಾದವುಗಳಾಗಿವೆ. ಆದ್ದರಿಂದ ಅಂತಹ ಆಚರಣೆಗಳನ್ನು ಕೇವಲ ಸಮಾನತೆಯ-ಆಧುನಿಕ- ಮನುಷ್ಯ ನಿರ್ಮಿತ ಕಾನೂನಿನ ದೃಷ್ಟಿಕೋನದಿಂದ ನೋಡುವ ಬದಲು ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಹಿನ್ನೆಲೆಯಲ್ಲಿ ಏಕೆ ನೋಡಬಾರದು? ನಮ್ಮ ದೇಶದಲ್ಲಿ ಬಹಳಷ್ಟು ಆಚರಣೆ-ನಂಬಿಕೆಗಳನ್ನು ವಿದೇಶೀಯರ ಶಂಖದಿಂದ ಬಂದರೆ ತೀರ್ಥ ಎಂಬ ಧೋರಣೆಯಂತೆ, ವಿದೇಶಿಯರು ಸಾಬೀತುಪಡಿಸಿದರೆ ಮಾತ್ರ ನಂಬುವ ಜಾಯಮಾನ ನಮ್ಮದು. ಉದಾಹರಣೆಗೆ ಶ್ರೀರಾಮ ಸೇತುವನ್ನು ರಾಜಕೀಯ ಪ್ರೇರಿತ ಸ್ವಹಿತಾಸಕ್ತಿಯ ದೃಷ್ಟಿಯಿಂದ ಒಡೆಯುವ ಪ್ರಯತ್ನ ಮಾಡಲಾಯಿತು. ಓರ್ವ ಹಿರಿಯ ರಾಜಕೀಯ ಮಹಾಶಯರು ಶ್ರೀರಾಮ ಯಾವ ವಿಶ್ವ ವಿದ್ಯಾಲಯದ ಇಂಜಿನಿಯರ್? ಎಂಬ ಉದ್ಧಟತನದ ನುಡಿಮುತ್ತು ಉದುರಿಸುವವರೆಗೂ ಮುಂದುವರೆದರು. ಆದರೆ ದೈವಿಕ ನಿರ್ಮಾಣವೆಂಬ ನಂಬಿಕೆಯ ಹಿಂದಿರುವ ವೈಜ್ಞಾನಿಕ ನೆಲಗಟ್ಟನ್ನು ಒಂದಿಂಚೂ ಅಲುಗಾಡಿಸಲು ಸಾಧ್ಯವಾಗಿಲ್ಲ ಎನ್ನುವುದು ಬೇರೆ ಮಾತು. ಆದರೆ ಈ ರಾಮಸೇತು ಬಗ್ಗೆ ಅಮೆರಿಕದ ನಾಸಾ ಅಧ್ಯಯನ ಇದು ಮಾನವ ನಿರ್ಮಿತ ಅಲ್ಲ ಎಂದು ಘೋಷಿಸಿದ ನಂತರವಷ್ಟೇ ಎಲ್ಲವೂ ತಣ್ಣಗಾಯಿತು.
ಶನಿ ಶಿಂಗಣಾಪುರ ಮತ್ತು ಶಬರಿಮಲೆ ಇವೆಲ್ಲದರ ಕುರಿತಾದ ತೀರ್ಪು ಮೇಲ್ನೋಟಕ್ಕೆ ಒಂದೇ ಎಂಬಂತೆ ಅನ್ನಿಸಿದರೂ ಪ್ರತ್ಯೇಕವಾಗಿ ಅವಲೋಕಿಸಿದರೆ ಎರಡೂ ಬೇರೆಯೇ ರೀತಿಯ ಆಚರಣೆಗಳು. ಶನಿ ಶಿಂಗಣಾಪುರಕ್ಕೆ ಸಾರ್ವಕಾಲಿಕವಾಗಿ ಎಲ್ಲಾ ವರ್ಗದ ಮಹಿಳೆಯರಿಗೆ ಪ್ರವೇಶಕ್ಕೆ ನಿರ್ಬಂಧವಿತ್ತು, ಶನಿ ಶಿಂಗಣಾಪುರ ಕೇವಲ ಯಾತ್ರಾ ಸ್ಥಳವಾಗಿದ್ದು ಅಲ್ಲಿಗೆ ಭೇಟಿ ನೀಡಬೇಕಾದರೆ ಯಾವುದೇ ಪೂರ್ವ ನಿರ್ಬಂಧಗಳಿರುವುದಿಲ್ಲ. (ಅದಕ್ಕೂ ಯಾವುದಾದರೂ ಹಿನ್ನೆಲೆ ಇದ್ದಿರಬಹುದು, ಅದು ಬೇರೆ ವಿಷಯ) ಆದರೆ ಸುಮಾರು 48 ದಿನಗಳ ಕಠಿಣ ವ್ರತಾಚರಣೆಯೊಂದಿಗೆ ಪಾದಯಾತ್ರೆ ಮೂಲಕವೇ ದೇಗುಲಕ್ಕೆ ಪ್ರವೇಶಿಸುವ ಆಚರಣೆ ಶಬರಿಮಲೆಯಲ್ಲಿರುವ ಪದ್ಧತಿ. ಹೀಗಾಗಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಇರುವ ನಿರ್ಬಂಧಗಳ ಹಿನ್ನೆಲೆಯನ್ನು ಸ್ತ್ರೀಯರ ದೇಹ ಪ್ರಕೃತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ದಕ್ಷಿಣ ಭಾರತದ ದೇವಸ್ಥಾನಗಳ ನಿರ್ಮಾಣದಲ್ಲಿ ಇರುವ ಕೆಲವೊಂದು ವಿಶಿಷ್ಟ ವಿಚಾರಗಳ ಬಗ್ಗೆ ತಜ್ಞರ ಪ್ರತಿಪಾದನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅಗತ್ಯ.
ಅದು ಹೀಗೂ ಇರಬಹುದಲ್ಲ?
ದಕ್ಷಿಣ ಭಾರತದ ಬಹುತೇಕ ಹಿಂದೂ ಮಂದಿರಗಳು ನಿರ್ದಿಷ್ಟವಾದ ಕಾಂತಕ್ಷೇತ್ರದಲ್ಲಿವೆ. ಕಾಂತಕ್ಷೇತ್ರಗಳ ಈ ದೇವಾಲಯಗಳಲ್ಲಿ ವಿಗ್ರಹದ ಪ್ರಾಣ ಪ್ರತಿಷ್ಠೆಯಾಗುವ ಸಮಯದಲ್ಲಿ ಪ್ರತಿಷ್ಠಾಪಕರು ವಿಗ್ರಹಕ್ಕೆ ಜೀವ ಶಕ್ತಿಯನ್ನು ವರ್ಗಾಯಿಸುತ್ತಾರೆ. ಹಾಗಾಗಿ ವಿಗ್ರಹ ಮತ್ತು ದೇವಾಲಯದ ಸಂಪೂರ್ಣ ಪರಿಸರದಲ್ಲಿ ಅವಿಛಿನ್ನ ಧನಾತ್ಮಕ ಶಕ್ತಿಯೊಂದು ಪ್ರವಹಿಸುತ್ತಿರುತ್ತದೆ.
ಮನುಷ್ಯನ ದೇಹದಲ್ಲಿಯೂ ವಿವಿಧ ಹಂತಗಳಿವೆ. ಪ್ರಾಣ ಅಥವಾ ಜೀವ ಶಕ್ತಿ ಎಂಬುದು ಶರೀರ ಶಕ್ತಿಯಾಗಿದ್ದು ಅದು ನಮ್ಮ ದೇಹದ ನರನಾಡಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಅದು ನಮ್ಮ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.
ಮಹಿಳೆಯರ ದೇಹ ಪ್ರಕೃತಿ ಋತು ಚಕ್ರದ ಅವಧಿಯಲ್ಲಿ ಸೂಕ್ಷ್ಮವಾಗಿರುವುದರಿಂದ ಈ ರೀತಿಯ ದೇವಾಲಯಗಳಿಗೆ ಪ್ರವೇಶದ ಮೇಲೆ ನಿರ್ಭಂಧ ವಿಧಿಸಿರಬಹುದು. ಆದರೆ ನ್ಯಾಯಾಲಯದಲ್ಲಿ ಈ ಸಂಬಂಧದ ವಿಚಾರಣೆ ನಡೆದಾಗ ಇಂತಹ ತಜ್ಞರ ಅಭಿಪ್ರಾಯಗಳನ್ನು ಸಂಬಂಧಿಸಿದ ಯಾರೊಬ್ಬರೂ ಹಾಜರು ಪಡಿಸಿರಲಿಲ್ಲ. ಪತ್ರಿಕಾ ವರದಿಗಳ ಆಧಾರದಲ್ಲಿ ಒಂದು ಹಂತದಲ್ಲಿ ನ್ಯಾಯವಾದಿಯೊಬ್ಬರು ಶಬರಿಮಲೆ ಇನ್ನೊಂದು ಅಯೋಧ್ಯೆ ಆಗಬಹುದು ಎಂಬ ಎಚ್ಚರಿಕೆ ಮಾತುಗಳನ್ನು ಆಡಿದ್ದರೇ ಹೊರತು ಸಮರ್ಥ ದಾಖಲೆಗಳನ್ನು ಮಂಡಿಸಲಿಲ್ಲ.
ನ್ಯಾಯಾಧೀಶರು ತಮ್ಮ ಮುಂದೆ ಮಂಡಿಸಿದ ದಾಖಲೆಗಳನ್ನು ಆಧರಿಸಿ ತೀರ್ಮಾನಕ್ಕೆ ಬರುವರೇ ಹೊರತು ಅದರಾಚೆಗೆ ವ್ಯವಹರಿಸುವ ಬಗ್ಗೆ ನ್ಯಾಯಾಲಯ ಪರಿಗಣಿಸುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ, ರಾಜಕೀಯ ದೃಷ್ಟಿಯಿಂದ ನೋಡದೆ ಮತ್ತೂಮ್ಮೆ ಈ ಕುರಿತು ಮೇಲ್ಮನವಿ ಸಲ್ಲಿಸಿ ಸಮರ್ಥವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನಿರ್ಧಾರಕ್ಕೆ ಬರುವುದು ಸಾಧ್ಯವಿದೆ. ಅದರ ಬದಲು ಈಗಿನಂತೆ ಸಾಂವಿಧಾನಿಕ ಪ್ರಾಧಿಕಾರವಾಗಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬೀದಿಯಲ್ಲಿ ನಿಂತು ಪ್ರತಿಭಟಿಸುವುದು ಪ್ರಜಾಪ್ರಭುತ್ವವನ್ನು ಅಣಕಿಸಿದಂತಲ್ಲವೇ?
ಮೋಹನದಾಸ ಕಿಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು