ಅಮೆರಿಕಕ್ಕೆ ತೆರಳಲು ವಿವೇಕರಿಗೆ ನೆರವು ನೀಡಿದ್ದ ಮೈಸೂರು ಅರಸರು
Team Udayavani, Jan 13, 2022, 3:38 PM IST
ಮೈಸೂರು: ದೇಶದ ಮಹಾನ್ ನಾಯಕರ ಸಾಲಿನಲ್ಲಿ ಧ್ರುವತಾರೆಯಾಗಿ ಕಂಗೊಳಿಸುವ ಸ್ವಾಮಿ ವಿವೇಕಾನಂದರ ಜಯಂತಿಯನ್ನು ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸುವ ಮೂಲಕ ವಿವೇಕಾನಂದರನ್ನು ಸ್ಮರಿಸಲಾಯಿತು. ನಗರದ ಚೆಲುವಾಂಬನ ಉದ್ಯಾನ, ವಿವೇಕಾನಂದ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಸ್ಮರಿಸಲಾಯಿತು.
ಜಿಲ್ಲಾಡಳಿತ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಹಿಂದೂಸ್ತಾನ್ ಕಾಲೇಜು ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಸ್ವಾಮಿ ವಿವೇಕಾನಂದರಿಗೂ ಮೈಸೂರಿಗೆ ಒಂದು ಸಂಬಂಧ ಇದೆ. ವಿವೇಕಾನಂದರು ಅಮೆರಿಕಗೆ ತೆರಳಲು ಧನ ಸಹಾಯ ಮಾಡಿದ್ದೆ ಮೈಸೂರಿನ ಅರಸರು. ಹಿಂದು ಧರ್ಮ ಪುನರುತ್ಥಾನ ಮಾಡಲು ಅನೇಕ ಹಿರಿಯರು ಶ್ರಮವಹಿಸಿದ್ದಾರೆ. ಆದರೆ ಸ್ವಾಮಿ ವಿವೇಕಾನಂದರು ಕಿರಿಯ ವಯಸ್ಸಿನಲ್ಲೇ ವಿದೇಶದಲ್ಲೂ ಹಿಂದು ಧರ್ಮದ ಕೀರ್ತಿ ಪತಾಕೆ ಆರಿಸಿದರು. ಅಮೆರಿಕದಲ್ಲಿ ನಡೆದ ಚಿಕಾಗೋ ಧಾರ್ಮಿಕ ಸಮ್ಮೇಳನದಲ್ಲಿ ತಮ್ಮ ಮಾತಿನ ಮೂಲಕ ವಿವೇಕಾನಂದರು ಇಡೀ ಜಗತ್ತಿನ ಗಮನ ಸೆಳೆದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಮಾತನಾಡಿ, ಸ್ವಾಮಿ ವಿವೇಕಾನಂದ ಜನ್ಮೋತ್ಸವ ಪ್ರಯುಕ್ತ ಯುವಕರನ್ನು ಜಾಗೃತಿಗೊಳಿಸಲು ಏಳು ದಿನಗಳ ಕಾಲ ವಿವಿಧ ಕಾಲೇಜುಗಳಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಪ್ರೇಮ್ಕುಮಾರ್, ಪ್ರಾಂಶುಪಾಲರಾದ ಡಾ.ಸಿ.ಜಿ.ಪ್ರಿಯಾ, ಎನ್ಎಸ್ಎಸ್ ಸಂಯೋಜನಾಧಿಕಾರಿ ಆರ್.ಡಿ.ಸುಷ್ಮಾ ಮತ್ತಿತರರು ಹಾಜರಿದ್ದರು.
ನಿರಂಜನ ಮಠ: ನಿರಂಜನ ಉಳಿಸಿ ಹೋರಾಟ ಸಮಿತಿಯಿಂದ ನಿರಂಜನ ಮಠದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಹೊಸಮಠದ ಚಿದಾನಂದ ಸ್ವಾಮೀಜಿ, ಮಂಡ್ಯದ ಬೇಬಿ ಮಠ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮೇಯರ್ ಸುನಂದಾ ಪಾಲನೇತ್ರ, ಕೃಷಿಕ ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ, ಜೆಎಸ್ಎಸ್ ಕನ್ನಡ ಉಪನ್ಯಾಸಕರಾಗಿ ಸಿದ್ದ ಮಲ್ಲಿಕಾರ್ಜುನಸ್ವಾಮಿ, ವೀರಶೈವ ಮಹಾಸಭಾದ ಉಪಾಧ್ಯಕ್ಷ ದಕ್ಷಿಣ ಮೂರ್ತಿ, ನಿರಂಜನ ಹೋರಾಟ ಸಮಿತಿಯ ಟಿ.ಎಸ್. ಲೋಕೇಶ್, ಮಹದೇವಸ್ವಾಮಿ ,ಜಯಗೌಡ, ಬ್ಯಾತಹಳ್ಳಿ ನಾಗರಾಜು, ರಘು ಇದ್ದರು.
ಶಿಕ್ಷಕರಿಗೆ ಗೌರವ : ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ(ಎಸ್ವಿಎಇಐ)ಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಗುರು ವಂದನಾ ಕಾರ್ಯಕ್ರಮ ನಡೆಯಿತು. ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯನಂದ ಅವರು ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಇದೇ ವೇಳೆ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಅತ್ಯುತ್ತಮ 50 ಶಿಕ್ಷಕರನ್ನು ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ಪೋತರಾಜ್ ಮಾತನಾಡಿದರು. ಉಪಾಧ್ಯಕ್ಷ ಎಂ.ರಾಜಶೇಖರ್, ಗೌರವ
ಕಾರ್ಯದರ್ಶಿ ಬಿ.ಶಿವಲಿಂಗಪ್ಪ, ಖಜಾಂಚಿ ಟಿ.ಪ್ರಭಾಕರ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಆವರಣದಲ್ಲಿ ಸ್ಮರಣೆ : ಮೈಸೂರಿನ ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ವಿವೇಕನಂದರ ಪ್ರತಿಮೆಗೆ
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಯುವಜನರಲ್ಲಿ ಶೌರ್ಯ, ಧೈರ್ಯ ತುಂಬಿದವರು ಸ್ವಾಮಿ ವಿವೇಕಾನಂದರು. ಅವರ ಆದರ್ಶ ಯುವಜನತೆಗೆ ತಲುಪಿಸಿದರೆ ರಾಷ್ಟ್ರ ಪ್ರಜ್ಞೆ ಬೆಳಗಲಿದೆ ಎಂದರು. ಸಮಾಜ ಸೇವಕ ಡಾ. ಕೆ ರಘುರಾಂ, ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಲೋಹಿತ್, ಪೃಥ್ವಿ ಸಿಂಗ್ ಚಂದವತ್, ಮಹೇಂದ್ರ ಎಂ ಶೈವಾ, ಸೂರಜ್, ಸದಾನಂದ, ಸುಚೀಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪಡುವಾರಹಳ್ಳಿಯಲ್ಲಿ ಸ್ಮರಣೆ : ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ವಾಲ್ಮೀಕಿ ರಸ್ತೆಯಲ್ಲಿ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಶಾಸಕರಾದ ಎಲ್ .ನಾಗೇಂದ್ರ ಪುಷ್ಪಾರ್ಚನೆ ಮಾಡಿ, ಜಗತ್ತು ನಮ್ಮ ಸಂಸ್ಕೃತಿಯ ಮೇಲೆ ಪ್ರಭಾವಕ್ಕ ಒಳಗಾಗಲು ಸ್ವಾಮಿ ವಿವೇಕಾನಂದರು ಸ್ಫೂರ್ತಿಯಾಗಿದ್ದಾರೆ . ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ. ವಿವೇಕಾನಂದರ ವಾಣಿಯು ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಅಳವಡಿಸಿಕೊಂಡರೇ ಸಮಾಜದಲ್ಲಿ ಬದಲಾವಣೆ ಕಾಣಬಹುದು. ದುರ್ಬಲ ಆಲೋಚನೆಗಳನ್ನು ಬಿಟ್ಟು ಸದಾ ಕ್ರಿಯಾಶೀಲ ಮನೋಭಾವವನ್ನು ಬೆಳೆಸಿಕೊಂಡು ಬದಲಾಗಬೇಕು ಎಂದು ಸಲಹೆ ನೀಡಿದರು. ಈ ವೇಳೆ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಕೆ ಉಮಾಶಂಕರ್, ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ನಗರಪಾಲಿಕೆ ಸದಸ್ಯರಾದ ನಮ್ರತಾ ರಮೇಶ್, ಎಂ.ಚಿಕ್ಕವೆಂಕಟು, ವೇದಾವತಿ, ಸಿ.ಡಿ.ಕುಮಾರ್, ಚಾಮರಾಜ ಆಶ್ರಯ ಸಮಿತಿ ಸದಸ್ಯ ಎಂ.ಮಹೇಶ್, ರಾಜಕೀಯ ರವಿಕುಮಾರ್, ಎಚ್.ಹರೀಶ್ ಕುಮಾರ್, ಎಸ್.ಅರವಿಂದ, ಎಸ್.ಬಿ.ಶಿವು, ಬಿ.ಕುಮಾರ್, ಸುರೇಂದ್ರ, ಕೇಬಲ್ ಕಿಟ್ಟಿ ವೇಣು, ಗೋಪಾಲ, ಆಟೋ ಕಾಂತ, ಉಮಾ
ಬೋರಪ್ಪ, ನೇತ್ರಾವತಿ, ಗೋಕುಲಂ ಜಯಣ್ಣ, ರವಿಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ