22ವರ್ಷದಿಂದ ಈ ದಂಪತಿ ಭೂಗತ ಚರಂಡಿಯ ಅಂದದರಮನೆಯಲ್ಲಿ ಬದುಕುತ್ತಿದೆ !


Team Udayavani, Feb 7, 2017, 10:30 AM IST

Gutter-1.jpg

ಮೆಡೆಲಿನ್‌, ಕೊಲಂಬಿಯಾ : ನಂಬಿದ್ರೆ ನಂಬಿ – ಬಿಟ್ರೆ ಬಿಡಿ – ಕೊಲಂಬಿಯಾದ ಮೆಡೆಲಿನ್‌ ಈ ದಂಪತಿ ಕಳೆದ 22 ವರ್ಷಗಳಿಂದ ಭೂಗತ ಚರಂಡಿಯೊಳಗೆ ತಮ್ಮ ಸಂಸಾರವನ್ನು ನಡೆಸುತ್ತಿದ್ದಾರೆ.

ಭೂಗತ ಗಟಾರದೊಳಗಿನ ಅವರ ಗುಹೆಯಂತಹ ಮನೆಯಲ್ಲಿ ವಿದ್ಯುತ್‌ ಇದೆ, ಟಿವಿ ಇದೆ; ಸಾಮಾನ್ಯ ಜೀವನಕ್ಕೆ ಅವಶ್ಯವಿರುವ ಎಲ್ಲ ಸೌಕರ್ಯಗಳೂ ಇವೆ. ಹಬ್ಬ ಹರಿದಿನಗಳಂದು ಮತ್ತು ರಜಾ ದಿನಗಳಂದು ಈ ದಂಪತಿ ತಮ್ಮ ಈ ಗಟಾರದೊಳಗಿನ ಮನೆಯನ್ನು ಅಲಂಕರಿಸುತ್ತಾರೆ; ತಮ್ಮಿಂದಾದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ. ನೆಮ್ಮದಿಯ ಸಂತಸದ ಬದುಕನ್ನು ಬದುಕುತ್ತಿದ್ದಾರೆ; ಇವರ ಈ ಗಟಾರದೊಳಗಿನ ಮನೆಯನ್ನು ಕಾಯಲು ಇವರಿಗೊಂದು ನಾಯಿಯೂ ಇದೆ; ಅದರ ಹೆಸರು ಬ್ಲ್ಯಾಕೀ ಅಂತ. 

ಈ ದಂಪತಿಯ ಹೆಸರು ಮಾರಿಯಾ ಗಾರ್ಸಿಯಾ (ಪತ್ನಿ) ಮತ್ತು ಮಿಗೆಲ್‌ ರೆಸ್ಟ್ರೆಪೋ (ಪತಿ) ಅಂತ. ಹಿಂದೆ ಇವರು ಸ್ವತಃ ಮಾದಕ ದ್ರವ್ಯ ವ್ಯಸನಿಗಳಾಗಿದ್ದರು. ಹಾಗೆ ವ್ಯಸನಿಗಳಾಗಿರುತ್ತಾ ಪರಸ್ಪರ ನಿಕಟರಾದರು. ಪ್ರೇಮ, ಕಾಮ ಆದ ಬಳಿಕ ಸಂಸಾರಿಗಳೂ ಆದರು. ಜತೆಯಾಗಿ ಜೀವಿಸಲು ಒಂದು ಮನೆ ಬೇಕಲ್ಲ; ಅದು ಮಾತ್ರ ಅವರ ಬಳಿ ಇರಲಿಲ್ಲ.

ಮೇಲಾಗಿ ಕೊಲಂಬಿಯದ ಮೆಡೆಲಿನ್‌ ಪ್ರದೇಶವು ಮಾದಕ ದ್ರವ್ಯ ಕಳ್ಳಸಾಗಣೆಯ ಕೇಂದ್ರ ಬಿಂದು; ಹಾಗಾಗಿ ಇಲ್ಲಿ ನಿತ್ಯ ಹಿಂಸೆ, ನಿತ್ಯ ಗೋಳು, ನಿತ್ಯ ನರಕ. 

ಈ ಹಿಂಸೆ, ಗೋಳು, ನರಕದಿಂದ ಪಾರಾಗಲು ಗಾರ್ಸಿಯಾ ಮತ್ತು ಮಿಗೆಲ್‌ ತಮ್ಮ ಭದ್ರತೆ ಮತ್ತು ನೆಮ್ಮದಿಯ ಬದುಕಿಗಾಗಿ ಭೂಗತ ಚರಂಡಿಯ ಗಟಾರವನ್ನೇ ಆಯ್ದುಕೊಂಡರು. ನೆಲದ ಮೇಲಿನ ನರಕಕ್ಕಿಂತ ನೆಲದಡಿಯ ನರಕವೇ ಅವರಿಗೆ ಹಿತವೆನಿಸಿತು.

ಈ ಹಿತಾನುಭವದಲ್ಲಿ ಅವರು ಈಗಾಗಲೇ 22 ವರ್ಷಗಳ ಸ್ವರ್ಗ ಸುಖವನ್ನು ನೆಲದಡಿಯ ಗಟಾರವೆಂಬ ನರಕದಲ್ಲಿ ಅನುಭವಿಸಿದ್ದಾರೆ; ಅನುಭವಿಸುತ್ತಿದ್ದಾರೆ. ಹಾಗಂತ ಈ ಪತಿ ಪತ್ನಿ ಈಗ ಮಾದಕ ದ್ರವ್ಯ ವ್ಯವಸನಿಗಳಲ್ಲ. ಅದನ್ನವರು ಎಂದೋ ತ್ಯಜಿಸಿದ್ದಾರೆ ! 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.