ಸುದ್ದಿಕೋಶ: ವಿಮಾನಯಾನ ಇನ್ನು ಆಗಲಿದೆ ಪ್ರಯಾಣಿಕ ಸ್ನೇಹಿ


Team Udayavani, May 23, 2018, 6:00 AM IST

18.jpg

ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನದ ನಿಯಮಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂಥ ಹೊಸ ನೀತಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತ ಕರಡನ್ನು ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್‌ ಸಿನ್ಹಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಏನೇನಿದೆ ಎಂಬ ಮಾಹಿತಿ.

ವಿಮಾನ ತಡವಾದರೆ
ನಿಗದಿತ ಸಮಯಕ್ಕಿಂತ 3 ಗಂಟೆಗೂ ಮಿಗಿಲಾಗಿ ವಿಮಾನ ಪ್ರಯಾಣ ತಡವಾದರೆ ಪ್ರತಿ ಪ್ರಯಾಣಿಕನಿಗೆ 5,000 ರೂ. ಪರಿಹಾರ. 4-12 ಗಂಟೆ ತಡವಾ ದರೆ 10,000- 20,000 ರೂ.ವರೆಗೆ ಪರಿಹಾರ. 

ಸಂಪರ್ಕ ವಿಮಾನ ತಪ್ಪಿದರೆ
ಪ್ರಯಾಣ ವಿಳಂಬದಿಂದಾಗಿ, ಪ್ರಯಾಣಿಕ ತಲುಪುವ ನಗರದಿಂದ ಮತ್ತೂಂದು ನಗರಕ್ಕೆ ಹೊರಡಬೇಕಿದ್ದ ಸಂಪರ್ಕ ವಿಮಾನ ಪ್ರಯಾಣಿಕರ ಕೈತಪ್ಪಿದರೆ ಪರಿಹಾರ. ಸಂಪರ್ಕ ವಿಮಾನ ಹೊರಡುವ ಸಮಯಕ್ಕಿಂತ 3 ಗಂಟೆಗಳ ವಿಳಂಬಕ್ಕೆ 5,000 ರೂ., 4ರಿಂದ 12 ಗಂಟೆ ಹಾಗೂ 12 ಗಂಟೆಗಳಿಗೂ ಹೆಚ್ಚಿನ ವಿಳಂಬಕ್ಕೆ 10,000ರಿಂದ 20,000 ರೂ.ಗಳವರೆಗೆ ಪರಿಹಾರ. 

ಟಿಕೆಟ್‌ ರದ್ದು, ಹಣ ವಾಪಸ್‌
ಮುಂಗಡ ಟಿಕೆಟ್‌ ಕಾಯ್ದಿರಿಸಿದ 24 ಗಂಟೆ ನಂತರ, ವಿಮಾನ ಹೊರಡುವ 96 ಗಂಟೆ ಗೂ ಮೊದಲು ಪ್ರಯಾಣಿಕ ಟಿಕೆಟ್‌ ರದ್ದುಗೊಳಿಸಿದರೆ, ಅವರಿಗೆ ಟಿಕೆಟ್‌ನ ಹಣ ಸಂಪೂರ್ಣ ಮರುಪಾವತಿ. ಟಿಕೆಟ್‌ ಕ್ಯಾನ್ಸಲೇಷನ್‌ ದಂಡ ಪಾವತಿಸುವ ಹಾಗಿಲ್ಲ.

ರದ್ದತಿ ಶುಲ್ಕ ಮುದ್ರಣ
ಟಿಕೆಟ್‌ಗಳ ಮೇಲೆ ರದ್ದತಿ ದಂಡಗಳ ಮುದ್ರಣ ಕಡ್ಡಾಯ. ವಿಮಾನ ಸೇವಾ ಸಂಸ್ಥೆ ಹಾಗೂ ಟಿಕೆಟ್‌ ಏಜೆಂಟರು ಜಂಟಿಯಾಗಿ ಹಾಕುವ ಈ ದಂಡವು ಪ್ರಯಾಣದ ಮೂಲ ಬೆಲೆ ಮತ್ತು ಇಂಧನ ಸರ್‌ ಚಾರ್ಜ್‌ಗಳ ಒಟ್ಟು ಮೊತ್ತವನ್ನು ದಾಟುವಂತಿಲ್ಲ. 

ವೈಫೈ ಅನುಕೂಲ
ವಿಮಾನ ಪ್ರಯಾಣ ಆರಂಭಿಸಿದ ಮರು ಕ್ಷಣವೇ ವಿಮಾನದಲ್ಲಿ ವೈಫೈ ಸೌಲಭ್ಯ. ವಿಮಾನ 3,000 ಮೀಟರ್‌ (9842 ಅಡಿ) ಎತ್ತರ ತಲುಪಿದಾಗ ಮೊಬೈಲ್‌ ಬಳಸಲು ಪ್ರಯಾಣಿಕರಿಗೆ ಅನುಮತಿ. 

ವಿಮಾನ ರದ್ದಾದಲ್ಲಿ ಹಣ ಮರುಪಾವತಿ
ನಿಗದಿತ ವಿಮಾನ ರದ್ದಾಗಿರುವ ಬಗ್ಗೆ 2 ವಾರ ಮೊದಲೇ ಅಥವಾ 24 ಗಂಟೆಗಳಿಗೂ ಮುನ್ನವೇ ಪ್ರಕಟಿಸಲ್ಪಟ್ಟರೆ, ಸಂಬಂಧಪಟ್ಟ ವಿಮಾನ ಸೇವಾ ಸಂಸ್ಥೆಯಿಂದ ಪ್ರಯಾಣಿಕರ ಟಿಕೆಟ್‌ ಹಣ ಸಂಪೂರ್ಣ ಮರುಪಾವತಿ. ಪ್ರಯಾಣಿಕರು ಇಚ್ಛಿಸಿದಲ್ಲಿ, ರದ್ದಾದ ವಿಮಾನದ ಪ್ರಯಾಣ ಅವಧಿಯಿಂದ 2 ಗಂಟೆಯೊಳಗೆ ಬದಲಿ ವಿಮಾನ ವ್ಯವಸ್ಥೆ.  

ಇ- ಸೇವೆ
ಏರ್‌ ಸೇವಾ ಮೊಬೈಲ್‌ ಅಪ್ಲಿಕೇಷನ್‌ ಪುನರುತ್ಥಾನಕ್ಕೆ ಚಿಂತನೆ. 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.