YouTube Subscribe ಸಮರ: ಪ್ಯೂಡಿಪೈ ಹಿಂದಿಕ್ಕಿದ T- ಸಿರೀಸ್


Team Udayavani, Feb 25, 2019, 3:19 AM IST

t-series-25-2.jpg

ಇದೊಂದು ಸೈಬರ್ ಸಬ್ ಸ್ಕ್ರೈಬರ್ ಸಮರದ ಇಂಟರೆಸ್ಟಿಂಗ್ ಕಥೆ. ವಿಶ್ವದ ಜನಪ್ರಿಯ ವಿಡಿಯೋ ಸ್ಟ್ರೀಮರ್ ಯೂ-ಟ್ಯೂಬ್ ನಲ್ಲಿ ಅತೀ ಹೆಚ್ಚು ಸಬ್ ಸ್ಕ್ರೈಬರ್ ಗಳನ್ನು ಹೊಂದಿದವರ ನಡುವಿನ ಜಿದ್ದಾಜಿದ್ದಿನ ವಿಷಯ. ಸ್ವೀಡನ್ ಮೂಲದ ಯೂ-ಟ್ಯೂಬರ್ ಪ್ಯೂಡಿಪೈ ವಿಶ್ವದಲ್ಲೇ ಅತೀ ಹೆಚ್ಚು ಯೂ ಟ್ಯೂಬ್ ಸಬ್ ಸ್ಕ್ರೈಬರ್ ಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾನೆ. ಆದರೆ ಈತನಿಗೆ ಕತ್ತುಕತ್ತಿನ ಸ್ಪರ್ಧೆ ನೀಡುತ್ತಿದ್ದಿದ್ದು ಭಾರತೀಯ ಮ್ಯೂಸಿಕ್ ಕಂಪೆನಿ ಟಿ-ಸಿರೀಸ್.

ಹೀಗಿರುತ್ತಾ, ಮೊನ್ನೆ ಶುಕ್ರವಾರದಂದು ಟಿ-ಸಿರೀಸ್ ಈ ಸಬ್ ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಚಾನೆಲನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಯೂಟ್ಯೂಬ್ ಸಬ್ ಸ್ಕ್ರೈಬರ್ ಚಾನೆಲ್ ಎಂದು ಗುರುತಿಸಿಕೊಂಡಿತು. ಆದರೆ ವಿಷಾದವೆಂದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಕೇವಲ 8 ನಿಮಿಷಗಳ ಕಾಲ ಮಾತ್ರ ಟಿ ಸಿರಿಸ್ ಗ್ ಈ ನಂಬರ್ 1 ಪಟ್ಟ ಲಭ್ಯವಾಯ್ತು. ಈ ಸಮಯದಲ್ಲಿ ಟಿ-ಸಿರೀಸ್ ಪ್ಯೂಡಿಪೈ ನ ಚಾನೆಲ್ ಗಿಂತ 2000 ಅಧಿಕ ಸಬ್ ಸ್ಕ್ರೈಬರ್ ಗಳನ್ನು ಹೊಂದಿತ್ತು.

ತನ್ನ ಸಬ್ ಸ್ಕ್ರೈಬರ್ಸ್, ವಿಡಿಯೋ ನೋಡಿದವರ ಸಂಖ್ಯೆಗಳ ಸಾಚಾತನವನ್ನು ಪರೀಕ್ಷಿಸಲು ಯೂ-ಟ್ಯೂಬ್ ಪ್ರತೀ ವರ್ಷ ನಡೆಸುವ ಆಡಿಟ್ ಪ್ರಕ್ರಿಯೆಯಿಂದಾಗಿ ಈ ಬದಲಾವಣೆ ಸಂಭವಿಸಿತು ಎಂದು ಅಂತರ್ಜಾಲ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಪ್ಯೂಡಿಪೈ ಒಮ್ಮಿಂದೊಮ್ಮೆಲೇ ತನ್ನ 20,000 ಸಬ್ ಸ್ಕ್ರೈಬರ್ ಗಳನ್ನು ಕಳೆದುಕೊಳ್ಳುವಂತಾಯ್ತು ಮತ್ತು ಟಿ-ಸಿರೀಸ್ ಕೆಲ ನಿಮಿಷಗಳ ಮಟ್ಟಿಗಾದರೂ ನಂಬರ್ 1 ಪಟ್ಟಕ್ಕೆ ಏರುವಂತಾಯಯ್ತು.

ಭೂಷಣ್ ಕುಮಾರ್ ಮಾಲಿಕತ್ವದ ಟಿ-ಸಿರೀಸ್ 1980ರಿಂದಲೂ ಭಾರತದಲ್ಲಿ ಚಿರಪರಿಚಿತವಾಗಿದೆ. ಇನ್ನು ಸ್ವೀಡನ್ ಮೂಲದ ಫೆಲಿಕ್ಸ್ ಅರ್ವಿಡ್ ಉಲ್ಫ್ ಝೆಲ್ಬರ್ಗ್ ಯೂ-ಟ್ಯೂಬ್ ನಲ್ಲಿ ತನ್ನ ಹಾಸ್ಯದ ವಿಡಿಯೋಗಳಿಂದ ಹೆಸರುವಾಸಿಯಾಗಿದ್ದು ಅಂತರ್ಜಾಲ ವಲಯದಲ್ಲಿ ‘ಪ್ಯೂಡಿಪೈ’ ಎಂದೇ ಕರೆಸಿಕೊಳ್ಳುತ್ತಿದ್ದಾನೆ. ಅಂದಹಾಗೆ ಪ್ರಸ್ತುತ ಟಿ-ಸಿರೀಸ್ 86,970,587 (8.50 ಕೋಟಿ ಪ್ಲಸ್) ಜನ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿದ್ದು ಪ್ಯೂಡಿಪೈ ಅವರ ಚಾನೆಲ್ ನ ಸಬ್ ಸ್ಕ್ರೈಬರ್ ಗಳ ಸಂಖ್ಯೆ 87,119,111 (8.70 ಕೋಟಿ ಪ್ಲಸ್) ಆಗಿದೆ. ಯೂ-ಟ್ಯೂಬ್ ನಲ್ಲಿ ನಂಬರ್ 1 ಪಟ್ಟಕ್ಕಾಗಿ ಈ ಎರಡು ಚಾನೆಲ್ ಗಳ ನಡುವೆ ಕಳೆದ 6 ವರ್ಷಗಳಿಂದ ನಿಕಟ ಸ್ಪರ್ಧೆ ನಡೆಯುತ್ತಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.