ಜೈಪುರ: ಮೆದುಳು ಶಸ್ತ್ರಚಿಕಿತ್ಸೆಯ ವೇಳೆ ಪತಿಯೊಂದಿಗೆ ಫೋನ್ ಸಂಭಾಷಣೆ
Team Udayavani, Mar 8, 2019, 7:16 AM IST
ಜೈಪುರ: 35 ವರ್ಷ ಪ್ರಾಯದ ಮಹಿಳೆಯೋರ್ವರು ವೈದ್ಯರು ತನ್ನ ಮೆದುಳಿನಲ್ಲಿದ್ದ ಗಡ್ಡೆಯನ್ನು (ಟ್ಯೂಮರ್) ಮೂರು ತಾಸುಗಳ ಸುದೀರ್ಘ ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯುವಾಗ ಆಪರೇಶನ್ ಟೇಬಲ್ನಲ್ಲಿ ಸಂಪೂರ್ಣ ಎಚ್ಚರದಿಂದಿದ್ದು ತನ್ನ ಪತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಲೇ ಇದ್ದ, ವಿಚಿತ್ರವಾದರೂ ಸತ್ಯ ಎಂಬ ಘಟನೆ ವರದಿಯಾಗಿದೆ.
ಶಾಂತಿ ದೇವಿ ಗೆ ಮಾತನಾಡಲು ಕಷ್ಟವಾಗುತ್ತಿತ್ತು ಮತ್ತು ಆಗೀಗ ಎಂಬಂತೆ ಮಂಪರು ಕವಿಯುತ್ತಿತ್ತು. ಅಂತೆಯೇ ಚಿಕಿತ್ಸೆಗೆಂದು ಆಕೆಯನ್ನು ಟೋಂಕ್ ನಿಂದ ಜೈಪುರಕ್ಕೆ ತರಲಾಗಿತ್ತು.
ಆಕೆಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರಿಗೆ ಆಕೆಯ ಮೆದುಳಲ್ಲಿ ಟ್ಯೂಮರ್ ಇರುವುದು ಕಂಡು ಬಂತು. ಇದರಿಂದಾಗಿ ಆಕೆಗೆ ಮಾತನಾಡಲು ಕಷ್ಟವಾಗುತ್ತಿತ್ತು ಮಾತ್ರವಲ್ಲದೆ ಆಕೆಯ ದೇಹದ ಬಲಭಾಗದ ಚಟುವಟಿಕೆಗಳಿಗೆ ತೊಂದರೆ ಆಗುವಂತಿತ್ತು ಎಂಬುದನ್ನು ವೈದ್ಯರು ಕಂಡುಕೊಂಡರು. ಮೆದುಳಿನಲ್ಲಿನ ಟ್ಯೂಮರ್ ತೆಗೆಯುವುದಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದವರು ಹೇಳಿದರು.
ಆದರೆ ಶಸ್ತ್ರ ಚಿಕಿತ್ಸೆಯ ವೇಳೆ ತಾನು ಜಾಗೃತಾವಸ್ಥೆಯಲ್ಲಿರುವುದನ್ನು ಶಾಂತಿ ದೇವಿ ಬಯಸಿದರು. ಅದಕ್ಕಾಗಿ ವೈದ್ಯರಲ್ಲಿ ಪಟ್ಟು ಹಿಡಿದರು. ವೈದ್ಯರು ಆಕೆಗೆ ಮೆದುಳಿನ ಶಸ್ತ್ರ ಚಿಕಿತ್ಸೆಯ ಎಲ್ಲ ಸೂಕ್ಷ$Òಗಳನ್ನು ಮತ್ತು ಸಂಕೀರ್ಣತೆಯನ್ನು ವಿವರಿಸಿದರು. ಆದರೂ ತಾನು ಶಸ್ತ್ರ ಚಿಕಿತ್ಸೆಯ ವೇಳೆ ಜಾಗೃತ ಸ್ಥಿತಿಯಲ್ಲೇ ಇರಲು ಬಯಸುವುದಾಗಿ ಛಲದಿಂದ ಹೇಳುವ ಮೂಲಕ ತನ್ನ ದಿಟ್ಟ ನಿರ್ಧಾರಕ್ಕೇ ಅಂಟಿಕೊಂಡರು.
ವೈದ್ಯರಿಗೆ ಇದೊಂದು ದೊಡ್ಡ ಸವಾಲಾಗಿತ್ತು. ಸಾಮಾನ್ಯ ವಾಗಿ ಅವರು ಜನರಲ್ ಅನೆಸ್ತಿಸಿಯಾ ನೀಡುವುದು ವಾಡಿಕೆ. ಎಂದರೆ ರೋಗಿಯನ್ನು ಪೂರ್ತಿ ಸುಪ್ತಾವಸ್ಥೆಯಲ್ಲಿರಿಸಿ ಶಸ್ತ್ರ ಚಿಕಿತ್ಸೆ ಮಾಡುವುದು. ಶಾಂತಿ ದೇವಿಯ ಆಗ್ರಹಕ್ಕೆ ಮಣಿದ ವೈದ್ಯರು ಆಕೆಯ ಅಪೇಕ್ಷೆಯ ಪ್ರಕಾರ ಆಕೆಗೆ ಶಸ್ತ್ರ ಚಿಕಿತ್ಸೆಯ ನೋವು ಗೊತ್ತಾಗದಂತೆ ಸೆಡೇಟೀವ್ ಕೊಟ್ಟರು.
ಟ್ಯೂಮರ್ ತೆಗೆಯುವ ಮೂರು ತಾಸುಗಳ ಮೆದುಳು ಶಸ್ತ್ರ ಚಿಕಿತ್ಸೆಯ ಉದ್ದಕ್ಕೂ ಜಾಗೃತ ಸ್ಥಿತಿಯಲ್ಲೇ ಇದ್ದ ಶಾಂತಿ ದೇವಿ ತನ್ನ ಪತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಲೇ ಇದ್ದರು ಎಂದು ಈ ಸಂಕೀರ್ಣ ಶಸ್ತ್ರ ಚಿಕಿತ್ಸೆ ನಡೆಸಿದ ಇಲ್ಲಿನ ಖಾಸಗಿ ಆಸ್ಪತ್ರೆಯ ನ್ಯೂರೋಸರ್ಜನ್ ಡಾ. ಪಂಕಜ್ ಗುಪ್ತ ಹೇಳಿದರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ