ಟಿ-20 ರ್ಯಾಂಕಿಂಗ್ಇಮಾದ್ ವಾಸಿಮ್ ನಂ.1 ಬೌಲರ್
Team Udayavani, Jun 28, 2017, 3:35 AM IST
ದುಬಾೖ: ಪಾಕಿಸ್ಥಾನದ ಎಡಗೈ ಸ್ಪಿನ್ನರ್ ಇಮಾದ್ ವಾಸಿಮ್ ಟಿ-20 ಕ್ರಿಕೆಟಿನ ನೂತನ ನಂಬರ್ ಬೌಲರ್ ಆಗಿ ಮೂಡಿಬಂದಿದ್ದಾರೆ. ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಮೂರಕ್ಕೆ ಇಳಿದಿದ್ದಾರೆ. ಇದರಿಂದ ಭಾರತದ ಜಸ್ಪ್ರೀತ್ ಬುಮ್ರಾ ದ್ವಿತೀಯ ಸ್ಥಾನಕ್ಕೆ ಏರುವಂತಾಯಿತು.
ಇಮ್ರಾನ್ ತಾಹಿರ್ ಕಳೆದ ಜನವರಿಯಿಂದಲೂ ನಂಬರ್ ವನ್ ಟಿ-20 ಬೌಲರ್ ಆಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸುವುದರೊಂದಿಗೆ ಅಗ್ರಸ್ಥಾನದಿಂದ ಜಾರಬೇಕಾಯಿತು. ಈ ಸರಣಿಯ ವೇಳೆ ಎಸೆಯಲಾದ ಕೊನೆಯ 7 ಓವರ್ಗಳಲ್ಲಿ ತಾಹಿರ್ 75 ರನ್ ಬಿಟ್ಟುಕೊಟ್ಟು ಬಹಳ ದುಬಾರಿಯಾಗಿದ್ದರು. ಉರುಳಿಸಿದ್ದು ಒಂದೇ ವಿಕೆಟ್.
ಇಮಾದ್ ವಾಸಿಮ್ ಟಿ-20 ಕ್ರಿಕೆಟಿನ ಟಾಪ್ ಬೌಲರ್ ಎನಿಸಿಕೊಳ್ಳುತ್ತಿರುವುದು ಇದೇ ಮೊದಲು. ಬುಮ್ರಾ ಹೊರತುಪಡಿಸಿ ಟಾಪ್-10 ಯಾದಿಯಲ್ಲಿರುವ ಭಾರತದ ಮತ್ತೂಬ್ಬ ಬೌಲರ್ ಆರ್. ಅಶ್ವಿನ್. ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ 32 ಸ್ಥಾನಗಳ ಭರ್ಜರಿ ನೆಗೆತ ಕಂಡಿದ್ದು, 29ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡಿನ ಲಿಯಮ್ ಪ್ಲಂಕೆಟ್ ಕೂಡ ಭಾರೀ ಪ್ರಗತಿ ಸಾಧಿಸಿದ್ದು, 26 ಸ್ಥಾನಗಳ ಏರಿಕೆಯೊಂದಿಗೆ 38ನೇ ಸ್ಥಾನ ತಲುಪಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ನಂಬರ್ ವನ್ ಸ್ಥಾನದಲ್ಲಿ ಮುಂದುವರಿದಿದ್ದು, ಆರನ್ ಫಿಂಚ್ ಹಾಗೂ ಕೇನ್ ವಿಲಿಯಮ್ಸನ್ ಅನಂತರದ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್ ಟೀಮ್ ರ್ಯಾಂಕಿಂಗ್ ಯಾದಿಯ ದ್ವಿತೀಯ ಸ್ಥಾನದಲ್ಲಿ ಒಂಟಿಯಾಗಿ ಕಾಣಿಸಿಕೊಂಡಿತು. 3 ಪಂದ್ಯಗಳ ಈ ಸರಣಿಗೂ ಮುನ್ನ ಇಂಗ್ಲೆಂಡ್ ಪಾಕಿಸ್ಥಾನದೊಂದಿಗೆ ಜಂಟಿ ದ್ವಿತೀಯ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್ ಅಗ್ರಸ್ಥಾನ ಉಳಿಸಿಕೊಂಡಿದೆ.
ಟಾಪ್-10 ಟಿ-20 ಬೌಲರ್: 1. ಇಮಾದ್ ವಾಸಿಮ್ (780), 2. ಜಸ್ಪ್ರೀತ್ ಬುಮ್ರಾ (764), 3. ಇಮ್ರಾನ್ ತಾಹಿರ್ (744), 4. ರಶೀದ್ ಖಾನ್ (717), 4. ಸಾಮ್ಯುಯೆಲ್ ಬದ್ರಿ (717), 6. ಮುಸ್ತಫಿಜುರ್ ರೆಹಮಾನ್ (695), 7. ಜೇಮ್ಸ್ ಫಾಕ್ನರ್ (688), 8. ಸುನೀಲ್ ನಾರಾಯಣ್ (652), 9. ಶಕಿಬ್ ಅಲ್ ಹಸನ್ (648), 10. ಆರ್. ಅಶ್ವಿನ್ (644).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್