ಸಾನಿಯಾ ಜೋಡಿ ಪರಾಭವ: ಜೊಕೊ, ನಡಾಲ್‌ ಮುನ್ನಡೆ


Team Udayavani, Jun 1, 2017, 10:38 AM IST

AP5_31_2017_000228B.jpg

ಪ್ಯಾರಿಸ್‌: ಹಾಲಿ ಚಾಂಪಿಯನ್‌ಗಳಾದ ನೊವಾಕ್‌ ಜೊಕೋವಿಕ್‌, ಗಾರ್ಬಿನ್‌ ಮುಗುರುಜಾ ಫ್ರೆಂಚ್‌ ಓಪನ್‌ 3ನೇ ಸುತ್ತು ಮುಟ್ಟಿದ್ದಾರೆ. ಮತ್ತೂಬ್ಬ ಪ್ರಬಲ ಆಟಗಾರ ರಫೆಲ್‌ ನಡಾಲ್‌ ಕೂಡ ಮುನ್ನಡೆದಿದ್ದಾರೆ. ಆದರೆ ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌, ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ ಅವರ ಟೆನಿಸ್‌ ಪುನರಾ ಗಮನ ಎನ್ನುವುದು ಫ್ರೆಂಚ್‌ ಓಪನ್‌ ದ್ವಿತೀಯ ಸುತ್ತಿನ ಆಘಾತಕಾರಿ ಸೋಲಿ ನೊಂದಿಗೆ ಕೊನೆಗೊಂಡಿದೆ. ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೋಡಿ ಕೂಡ ಹೊರಬಿದ್ದಿದೆ.

ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನೊವಾಕ್‌ ಜೊಕೋವಿಕ್‌ ಪೋರ್ಚುಗಲ್‌ನ ಜೋ ಸೂಸ ಅವರನ್ನು 6-1, 6-4, 6-3ರಿಂದ ಮಣಿಸಿದರೆ, ಮುಗುರುಜಾ ಎಸ್ತೋನಿಯಾದ ಅನೆಟ್‌ ಕೊಂಟಾವೀಟ್‌ ಅವರನ್ನು ಬಹಳ ಕಷ್ಟದಿಂದ ಹಿಮ್ಮೆಟ್ಟಿಸಿದರು. ಮುಗುರುಜಾ ಗೆಲುವಿನ ಅಂತರ 6-7 (4-7), 6-4, 6-2. ರಫೆಲ್‌ ನಡಾಲ್‌ ಹಾಲೆಂಡಿನ ರೊಬಿನ್‌ ಹಾಸೆ ವಿರುದ್ಧ ಗೆದ್ದರು.

ವನಿತಾ ಸಿಂಗಲ್ಸ್‌ ಸೆಣಸಾಟದಲ್ಲಿ 15ನೇ ಶ್ರೇಯಾಂಕದ ಕ್ವಿಟೋವಾ ಅವರನ್ನು ಅಮೆರಿಕದ ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ಭಾರೀ ಹೋರಾಟದ ಬಳಿಕ 7-6 (7-5), 7-6 (7-5) ಅಂತರದಿಂದ ಪರಾಭವಗೊಳಿಸಿದರು.

ವನಿತಾ ಡಬಲ್ಸ್‌ನಲ್ಲಿ ಅಗ್ರ ರ್‍ಯಾಂಕಿಂಗ್‌ ಹೊಂದಿರುವ 32ರ ಹರೆಯದ ಬೆಥನಿ, ಜೆಕ್‌ ಆಟಗಾರ್ತಿಯ ಎಲ್ಲ ರೀತಿಯ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತರು. ಎರಡೂ ಸೆಟ್‌ಗಳನ್ನು ಟೈ-ಬ್ರೇಕರ್‌ಗೆ ವಿಸ್ತರಿಸಿ ಅಲ್ಲಿ ಅದೃಷ್ಟದಾಟದಲ್ಲಿ ಜಯಶಾಲಿಯಾದರು. ಕಳೆದ ವರ್ಷ ಪ್ಯಾರಿಸ್‌ ಹಣಾಹಣಿಯಲ್ಲಿ 3ನೇ ಸುತ್ತಿನ ತನಕ ಮುನ್ನಡೆದಿದ್ದ ಕ್ವಿಟೋವಾ ಪಾಲಿಗೆ 2012ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದೇ ದೊಡ್ಡ ಸಾಧನೆಯಾಗಿದೆ.

ವೀನಸ್‌ ಸುಲಭ ಜಯ:  ಕೂಟದ ಅತೀ ಹಿರಿಯ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ದ್ವಿತೀಯ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು. 10ನೇ ಶ್ರೇಯಾಂಕದ ಅಮೆರಿಕನ್‌ ಆಟಗಾರ್ತಿ ಜಪಾನಿನ ಕುರುಮಿ ನರಾ ಅವರನ್ನು 6-3, 6-1 ಅಂತರದ ಸೋಲುಣಿಸಿದರು.

ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌ ಬೆಲ್ಜಿಯಂನ ಕ್ಸರ್ಟನ್‌ ಫ್ಲಿಪ್‌ಕೆನ್ಸ್‌ ವಿರುದ್ಧ ದ್ವಿತೀಯ ಸೆಟ್‌ನಲ್ಲಿ ಭಾರೀ ಸ್ಪರ್ಧೆ ಎದುರಿಸಿದರೂ ಅಂತಿಮವಾಗಿ 6-2, 7-6 (8-6) ಅಂತರದಿಂದ ಗೆದ್ದು ದ್ವಿತೀಯ ಸುತ್ತು ದಾಟಿದರು.

ನಂಬರ್‌ ವನ್‌ ಖ್ಯಾತಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು ಮೊದಲ ಸುತ್ತಿನಲ್ಲೇ ಕೆಡವಿ ಸುದ್ದಿಯಾಗಿದ್ದ ರ್ಯಶದ ಎಕತೆರಿನಾ ಮಕರೋವಾ ದ್ವಿತೀಯ ಸುತ್ತಿನಲ್ಲಿ ಉರುಳಿ ಹೋಗಿದ್ದಾರೆ. ಅವರನ್ನು ಉಕ್ರೇನಿನ ಲೆಸಿಯಾ ಸುರೆಂಕೊ 6-2, 6-2ರಿಂದ ಸುಲಭದಲ್ಲಿ ಸೋಲಿಸಿದರು.

ಸೋಲನುಭವಿಸಿದ ಸೋಂಗ : ಫ್ರಾನ್ಸ್‌ನ ಬಲಾಡ್ಯ ಆಟಗಾರ, 12ನೇ ಶ್ರೇಯಾಂಕದ ಜೋ ವಿಲ್‌ಫ್ರೆಡ್‌ ಸೋಂಗ ಆರ್ಜೆಂಟೀನಾದ ಯುವ ಟೆನಿಸಿಗ ರೆಂಜೊ ಒಲಿವೊ ಕೈಯಲ್ಲಿ ದ್ವಿತೀಯ ಸುತ್ತಿನ ಸೋಲಿನ ಆಘಾತಕ್ಕೆ ಸಿಲುಕಿದ್ದು ಪುರುಷರ ಸಿಂಗಲ್ಸ್‌ ಸ್ಪರ್ಧೆಯ ಅಚ್ಚರಿಯ ಫ‌ಲಿತಾಂಶವೆನಿಸಿದೆ. ಒಲಿವೊ 7-5, 6-4, 6-7 (6-8), 6-4ರಿಂದ ಸೋಂಗಾಗೆ ಸೋಲುಣಿಸಿದರು.

ಆಸ್ಟ್ರಿಯಾದ 6ನೇ ಶ್ರೇಯಾಂಕದ ಆಟಗಾರ ಡೊಮಿನಿಕ್‌ ಥೀಮ್‌ 7-5, 6-1, 6-3ರಿಂದ ಇಟೆಲಿಯ ಸಿಮೋನ್‌ ಬೊಲೆಲ್ಲಿ ಅವರನ್ನು ಮಣಿಸಿದರು. 

ಸಾನಿಯಾ ಜೋಡಿಗೆ ಆಘಾತ
ವನಿತಾ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ-ಕಜಾಕ್‌ಸ್ಥಾನದ ಯೆರೋಸ್ಲಾವಾ ಶ್ವೆಡೋವಾ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಇವರನ್ನು ಆಸ್ಟ್ರೇಲಿಯದ ಡರಿಯಾ ಗವ್ರಿಲೋವಾ-ರಶ್ಯದ ಅನಸ್ತಾಸಿಯಾ ಪಾವುÉಚೆಂಕೋವಾ ಸೇರಿಕೊಂಡು 7-6 (7-5), 1-6, 6-2ರಿಂದ ಪರಾಭವಗೊಳಿಸಿದರು.
 

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.