ಥೀಮ್ ಏಟಿಗೆ ಜೊಕೋ ಔಟ್
Team Udayavani, Jun 8, 2017, 3:11 PM IST
ಪ್ಯಾರಿಸ್: ಫ್ರೆಂಚ್ ಓಪನ್ ಪಂದ್ಯಾವಳಿ ಬುಧವಾರ ಅಚ್ಚರಿಯ ಫಲಿತಾಂಶವೊಂದಕ್ಕೆ ಸಾಕ್ಷಿಯಾಗಿದೆ. ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಕ್ವಾರ್ಟರ್ ಫೈನಲ್ ಎಡವಿ ಕೂಟದಿಂದ ನಿರ್ಗಮಿಸಿದ್ದಾರೆ. ಸರ್ಬಿಯನ್ ಆಟಗಾರನಿಗೆ ಆಘಾತವಿಕ್ಕಿದವರು ಆಸ್ಟ್ರೇಲಿಯದ 6ನೇ ಶ್ರೇಯಾಂಕಿತ ಆಟಗಾರ ಡೊಮಿನಿಕ್ ಥೀಮ್. ಮಿಶ್ರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಜೋಡಿ ಪ್ರಶಸ್ತಿ ಸುತ್ತಿಗೆ ನೆಗೆದಿದೆ.
23ರ ಹರೆಯದ ಥೀಮ್ 7-6 (7-5), 6-3, 6-0 ಅಂತರದಿಂದ ಜೊಕೋವಿಕ್ ಅವರನ್ನು ಕೆಡವಿ ದರು. ಆರಂಭಿಕ ಸೆಟ್ನಿಂದಲೇ ತನ್ನ ಆಟವನ್ನು ಬಿರುಸುಗೊಳಿಸುತ್ತಲೇ ಹೋದ ಥೀಮ್, ಕೊನೆಯ ಸೆಟ್ನಲ್ಲಿ ಜೊಕೋಗೆ ಒಂದೂ ಅಂಕ ಬಿಟ್ಟುಕೊಡದೆ ತನ್ನ ತಾಕತ್ತು ಪರಿಚಯಿಸಿದ್ದರು. ಇದು ಥೀಮ್ ಕಾಣುತ್ತಿರುವ ಸತತ 2ನೇ ಫ್ರೆಂಚ್ ಓಪನ್ ಸೆಮಿಫೈನಲ್. ಕಳೆದ ವರ್ಷ ಇದೇ ಹಂತದಲ್ಲಿ ಅವರು ಜೊಕೋವಿಕ್ಗೆ ಶರಣಾಗಿ ಕೂಟದಿಂದ ಹೊರಬಿದ್ದಿದ್ದರು. ಆ ಸೋಲಿಗೆ ಸರಿಯಾಗಿ ಒಂದು ವರ್ಷದ ಬಳಿಕ ಸೇಡು ತೀರಿಸಿಕೊಂಡಿದ್ದಾರೆ. ಸರ್ಬಿ ಯನ್ ಆಟಗಾರನ ವಿರುದ್ಧ ಥೀಮ್ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಹಿಂದಿನ ಐದೂ ಪಂದ್ಯಗಳಲ್ಲಿ ಅವರು ಸೋಲನುಭವಿಸಿದ್ದರು.
ರಫೆಲ್ ನಡಾಲ್ ಎದುರಾಳಿ
ಡೊಮಿನಿಕ್ ಥೀಮ್ ಸೆಮಿಫೈನಲ್ನಲ್ಲಿ ಆವೆಯಂಗಳದ ಕಿಂಗ್, ಸ್ಪೇನಿನ ರಫೆಲ್ ನಡಾಲ್ ಸವಾಲನ್ನು ಎದುರಿಸಬೇಕಿದೆ. ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನಿನವರೇ ಆದ ಕರೆನೊ ಬುಸ್ಟ ಗಾಯಾಳಾಗಿ ಹಿಂದೆ ಸರಿದುದರಿಂದ ನಡಾಲ್ ಹಾದಿ ಸುಗಮಗೊಂಡಿತು. ಆಗ ನಡಾಲ್ 6-2, 2-0 ಅಂತರದ ಮುನ್ನಡೆಯಲ್ಲಿದ್ದರು.
ಹಾಲೆಪ್, ಪ್ಲಿಸ್ಕೋವಾ ಗೆಲುವು
ವನಿತೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ರೊಮೇನಿಯಾದ ತೃತೀಯ ಶ್ರೇಯಾಂಕಿತೆ ಸಿಮೋನಾ ಹಾಲೆಪ್ ಮತ್ತು ದ್ವಿತೀಯ ಶ್ರೇಯಾಂಕದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಸಿಮೋನಾ ಹಾಲೆಪ್ ಭಾರೀ ಸ್ಪರ್ಧೆಯೊಡ್ಡಿದ ಉಕ್ರೇನಿನ 5ನೇ ಶ್ರೇಯಾಂಕದ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅವರನ್ನು 3-6, 7-6 (8-6), 6-0 ಅಂತರದಿಂದ ಮಣಿಸಿದರು. ಕ್ಯಾರೋಲಿನಾ ಪ್ಲಿಸ್ಕೋವಾ 7-6 (7-3), 6-4 ಅಂತರದಿಂದ ಫ್ರಾನ್ಸ್ನ 28ನೇ ಶ್ರೇಯಾಂಕಿತೆ ಕ್ಯಾರೋಲಿನಾ ಗಾರ್ಸಿಯಾ ಅವರನ್ನು ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…