ಕಾಫಿ ನಾಡಿಗೆ ಬಂದಿಳಿದ ರೇಸ್‌ ಕಾರುಗಳು


Team Udayavani, Nov 23, 2017, 10:46 AM IST

23-17.jpg

ಚಿಕ್ಕಮಗಳೂರು: ಪ್ರತಿಷ್ಠಿತ ಏಷ್ಯಾ ಪೆಸಿಫಿಕ್‌ ಮತ್ತು ಇಂಡಿಯನ್‌ ನ್ಯಾಷನಲ್‌ ರ್ಯಾಲಿ ಶುಕ್ರವಾರದಿಂದ 3 ದಿನ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ರ್ಯಾಲಿಯಲ್ಲಿ ಧೂಳೆಬ್ಬಿಸಲು ಕಾರುಗಳು ಈಗಾಗಲೆ ನಗರಕ್ಕೆ ಆಗಮಿಸಿದ್ದು ಅಭಿಮಾನಿಗಳು ರ್ಯಾಲಿ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಏಷ್ಯಾ ಫೆಸಿಫಿಕ್‌ ರ್ಯಾಲಿಯ ಕಳೆದ ಬಾರಿಯ ಚಾಂಪಿಯನ್‌ ಗೌರವ್‌ ಗಿಲ್‌ ಈ ಬಾರಿಯೂ ಮತ್ತೂಮ್ಮೆ ಚಾಂಪಿಯನ್‌ಶಿಪ್‌
ತಮ್ಮದಾಗಿಸಿ ಕೊಳ್ಳಲು ಹೋರಾಟ ನಡೆಸಲಿದ್ದಾರೆ. ಗೌರವ್‌ ಗಿಲ್‌ ಓಡಿಸಲಿರುವ ಕಾರು ಸಹ ಈಗಾಗಲೆ ನಗರಕ್ಕೆ ಆಗಮಿಸಿದ್ದು, ಟೀಮ್‌ ಎಂ.ಆರ್‌.ಎಫ್‌. ತಂಡದ ಮೆಕ್ಯಾನಿಕ್‌ಗಳು ಕಾರನ್ನು ಸಿದ್ಧಪಡಿಸುತ್ತಿದ್ದಾರೆ. ಎಪಿಆರ್‌ಸಿ ಸ್ಪರ್ಧಾಳುಗಳು ಒಟ್ಟು 502 ಕಿ.ಮೀ. ದೂರವನ್ನು ಕ್ರಮಿಸಬೇಕಾಗಿದ್ದು, ಅದರಲ್ಲಿ 207.54 ಕಿ.ಮೀ. ವಿಶೇಷ ಹಂತಗಳನ್ನು ಒಳಗೊಂಡಿದೆ. ಐಎನ್‌ಆರ್‌ಸಿ ಸ್ಪರ್ಧಿಗಳು 260 ಕಿ.ಮೀ., ಆಂಬರ್‌ ವ್ಯಾಲಿಯಲ್ಲಿ ನಡೆಯುವ ಪ್ರೇಕ್ಷಕರ ವಿಶೇಷ ಹಂತದ ರ್ಯಾಲಿ ಸುಮಾರು 2.2 ಕಿ.ಮೀ. ದೂರ ಕ್ರಮಿಸಬೇಕು. ಈ ವಿಶೇಷ ಹಂತದ ರ್ಯಾಲಿ ಆಂಬರ್‌ ವ್ಯಾಲಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗುತ್ತದೆ. ಉಳಿದಂತೆ ಎಪಿಆರ್‌ಸಿ ಮತ್ತು ಐಎನ್‌ಆರ್‌ಸಿ ರ್ಯಾಲಿಗಳು ಎಬಿಸಿ ಆವರಣದಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ.

ಈ ಎಲ್ಲಾ ಕಾರುಗಳು ಮೂಡಿಗೆರೆ ಸಮೀಪದ ಚಟ್ನಹಳ್ಳಿ ಕಾಫಿ ತೋಟದಲ್ಲಿ ಸಂಚರಿಸಿ ಮೊದಲ ಹಂತ ಮುಗಿಸಲಿವೆ.
ಜಾಗರ ಮನೆ ಮುಖಾಂತರ ಕುಂಬರಗೋಡು, ಚಂದ್ರಾಪುರದಲ್ಲಿ 3ನೇ ಹಂತ ಮುಕ್ತಾಯಗೊಳ್ಳಲಿದೆ. ಭಾನುವಾರ ಮತ್ತೆ ಬೆಳಿಗ್ಗೆ ಮೂಡಸಸಿ, ಜಾಗರಮನೆ, ಮತ್ತೆ ಮೂಡಸಸಿ, ಜಾಗರಮನೆಯನ್ನು ಸುತ್ತಿ  ಕೊಂಡು ಎಬಿಸಿ ಆವರಣಕ್ಕೆ ಬಂದು ಸ್ಪರ್ಧೆ ಮುಕ್ತಾಯಗೊಳ್ಳಲಿದೆ. ಭಾನುವಾರ ಮಧ್ಯಾಹ್ನ ಎಬಿಸಿ ಆವರಣದಲ್ಲಿ ಪೋಡಿಯಂ ಅಂತ್ಯದ ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.