ಅಧಿಕಾರಿಗೆ ಬೆದರಿಕೆ: ಬಿಸಿಸಿಐ ಖಜಾಂಚಿಗೆ ಸುಪ್ರೀಂ ನೋಟಿಸ್
Team Udayavani, Nov 30, 2017, 6:10 AM IST
ನವದೆಹಲಿ: ಬಿಸಿಸಿಐನ ಹಣಕಾಸು ಅಧಿಕಾರಿ ಸಂತೋಷ್ ರಾಂಗೆ¡àಕರ್ಗೆ ಖಜಾಂಚಿ ಅನಿರುದ್ಧ ಚೌಧರಿ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ಈಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಮತ್ತು ಚೌಧರಿಗೆ ನೋಟಿಸ್ ಜಾರಿ ಮಾಡಿ ಇನ್ನು 2 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಜೊತೆಗೆ ಬಿಸಿಸಿಐಗೆ ನೂತನ ಸಂವಿಧಾನ ರಚನೆ ಸಂಬಂಧ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿದೆ.
ರಾಂಗೆ¡àಕರ್ ಅವರು ತಮಗೆ ಮೂರು ಬಾರಿ ಚೌಧರಿಯಿಂದ ಬೆದರಿಕೆ ಬಂದಿದೆಯೆಂದು ನ್ಯಾಯಾಲಯ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ಗೆ ಇ-ಮೇಲ್ ಮಾಡಿದ್ದಾರೆ. ಅದನ್ನು ವಕೀಲ ಗೋಪಾಲ್ ಸುಬ್ರಹ್ಮಣ್ಯ ಉಲ್ಲೇಖೀಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೌಧರಿ ಆರೋಪವನ್ನು ಅಲ್ಲಗಳೆದಿದ್ದಾರೆ. ಇದು ನಾನು ಹಣಕಾಸು ಅವ್ಯವಹಾರವನ್ನು ಉಂಟಾಗಿರುವ ಬೆಳವಣಿಗೆಯಿರಬಹುದು. ರಾಂಗೆ¡àಕರ್ರನ್ನು ನಾನು ಕೆಲವು ಬಾರಿ ಅವ್ಯವಹಾರದ ಕುರಿತು ಪ್ರಶ್ನಿಸಿದ್ದೆ ಎಂದು ಚೌಧರಿ ಹೇಳಿದ್ದಾರೆ.
ಸಂವಿಧಾನ ಪುನಾರಚನೆ ವಿಚಾರಣೆ ಮುಂದೂಡಿಕೆ: ಬಿಸಿಸಿಐಗೆ ನೂತನ ಸಂವಿಧಾನ ರಚಿಸುವ ಸಂಬಂಧ ಅಧಿಕಾರಿಗಳು ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿರುವ ನ್ಯಾಯಪೀಠ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು