ದಿನವಿಡೀ ಕುಣಿದು ಕುಪ್ಪಳಿಸಿದ ಕುಕ್‌!


Team Udayavani, Dec 29, 2017, 6:15 AM IST

AP12_28_2017_000011A.jpg

ಮೆಲ್ಬರ್ನ್: ತೃತೀಯ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡು ಅಜೇಯ ದ್ವಿಶತಕದೊಂದಿಗೆ ಮುನ್ನುಗ್ಗಿದ ಅಲಸ್ಟೇರ್‌ ಕುಕ್‌ ಸಾಹಸದಿಂದ ಮೆಲ್ಬರ್ನ್ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪಡೆ ಆತಿಥೇಯ ಆಸ್ಟ್ರೇಲಿಯಕ್ಕೆ ಬಿಸಿ ಮುಟ್ಟಿಸಲು ಹೊರಟಿದೆ.

ಆಸ್ಟ್ರೇಲಿಯದ 327ಕ್ಕೆ ಉತ್ತರವಾಗಿ 2 ವಿಕೆಟಿಗೆ 192 ರನ್‌ ಮಾಡಿದ್ದ ಇಂಗ್ಲೆಂಡ್‌, ಗುರುವಾರದ ಆಟ ಮುಂದುವರಿಸಿ 9 ವಿಕೆಟಿಗೆ 491 ರನ್‌ ಪೇರಿಸಿದೆ. ಇದರಲ್ಲಿ ಕುಕ್‌ ಪಾಲು ಅಜೇಯ 244 ರನ್‌. ಇಂಗ್ಲೆಂಡ್‌ ಹೊಂದಿರುವ ಮುನ್ನಡೆ 164 ರನ್‌. ಪಂದ್ಯವಿನ್ನೂ 2 ದಿನ ಬಾಕಿ ಇದೆ. ಈಗಾಗಲೇ ಸರಣಿ ಸೋತಿರುವ ಆಂಗ್ಲರ ಪಡೆ ಕಾಂಗರೂಗಳಿಗೆ ಬಾಕ್ಸಿಂಗ್‌ ಡೇ ಪಂಚ್‌ ಕೊಟ್ಟಿàತೇ ಎಂಬುದೊಂದು ಕುತೂಹಲ.

ದಿನವಿಡೀ ಮೆರೆದ ಕುಕ್‌
ತೃತೀಯ ದಿನವಿಡೀ ಮೆಲ್ಬರ್ನ್ ಅಂಗಳದಲ್ಲಿ ಮೆರೆದಾಡಿದ ಕುಕ್‌ ಆಸ್ಟ್ರೇಲಿಯದ ಬೌಲರ್‌ಗಳನ್ನು ಕಾಡುತ್ತಲೇ ಹೋದರು. ಮ್ಯಾರಥಾನ್‌ ಬ್ಯಾಟಿಂಗಿನೊಂದಿಗೆ ಒಂದೊಂದೇ ದಾಖಲೆಯನ್ನು ವಶಪಡಿಸಿಕೊಳ್ಳುವುದೇ ಕುಕ್‌ ಕಾಯಕವಾಯಿತು. ಅವರಿಗೆ ಜಾನಿ ಬೇರ್‌ಸ್ಟೊ (22), ಮೊಯಿನ್‌ ಅಲಿ (20) ಮತ್ತು ಕ್ರಿಸ್‌ ವೋಕ್ಸ್‌ (26) ಸಾಮಾನ್ಯ ಬೆಂಬಲವಿತ್ತರು. ಆದರೆ 9ನೇ ವಿಕೆಟಿಗೆ ಆಗಮಿಸಿದ ಸ್ಟುವರ್ಟ್‌ ಬ್ರಾಡ್‌ ಇವರೆಲ್ಲರನ್ನೂ ಮೀರಿಸಿದರು; ಮಾಜಿ ಕಪ್ತಾನನೊಂದಿಗೆ ಶತಕದ ಜತೆಯಾಟ ನಿಭಾಯಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಕುಕ್‌-ಬ್ರಾಡ್‌ 18 ಚಿಲ್ಲರೆ ಓವರ್‌ಗಳಲ್ಲಿ ಭರ್ತಿ 100 ರನ್‌ ಪೇರಿಸಿದರು. ಇದು ಆ್ಯಶಸ್‌ನಲ್ಲಿ ಇಂಗ್ಲೆಂಡಿನ 9ನೇ ವಿಕೆಟಿಗೆ 91 ವರ್ಷಗಳ ಬಳಿಕ ದಾಖಲಾದ ಮೊದಲ ಶತಕದ ಜತೆಯಾಟ. ಇಲ್ಲಿ ಇನ್ನೊಂದು ಸ್ವಾರಸ್ಯವಿದೆ, ಕುಕ್‌ ಮತ್ತು ಬ್ರಾಡ್‌ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಜತೆಯಾಗಿ ಆಡುತ್ತಿರುವುದು ಇದು ಕೇವಲ 2ನೇ ಸಲ!

ಸ್ಟುವರ್ಟ್‌ ಬ್ರಾಡ್‌ 63 ಎಸೆತಗಳಿಂದ 56 ರನ್‌ ಮಾಡಿ (8 ಬೌಂಡರಿ, 1 ಸಿಕ್ಸರ್‌) ಔಟಾದರು. ಕೊನೆಯವರಾಗಿ ಬಂದ ಜೇಮ್ಸ್‌ ಆ್ಯಂಡರ್ಸನ್‌ 15 ಎಸೆತ ಎದುರಿಸಿದ್ದು, ಇನ್ನೂ ಖಾತೆ ತೆರೆದಿಲ್ಲ. ಕುಕ್‌ 244 ರನ್ನಿಗಾಗಿ 409 ಎಸೆತ ನಿಭಾಯಿಸಿದ್ದಾರೆ; 27 ಸಲ ಚೆಂಡನ್ನು ಬೌಂಡರಿ ದಾಟಿಸಿದ್ದಾರೆ.

ಕುಕ್‌ 104ರಿಂದ ದಿನದಾಟ ಮುಂದುವರಿಸಿದ್ದರು. ಇವರೊಂದಿಗೆ 49 ರನ್‌ ಗಳಿಸಿ ಆಡುತ್ತಿದ್ದ ನಾಯಕ ಜೋ ರೂಟ್‌ 61 ರನ್‌ ಮಾಡಿ ಔಟಾದರು (133 ಎಸೆತ, 7 ಬೌಂಡರಿ). ಆಸ್ಟ್ರೇಲಿಯ ಪರ ಹ್ಯಾಝಲ್‌ವುಡ್‌, ಲಿಯೋನ್‌ ಮತ್ತು ಕಮಿನ್ಸ್‌ ತಲಾ 3 ವಿಕೆಟ್‌ ಉರುಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-327. ಇಂಗ್ಲೆಂಡ್‌-9 ವಿಕೆಟಿಗೆ 491 (ಕುಕ್‌ ಬ್ಯಾಟಿಂಗ್‌ 244, ರೂಟ್‌ 61, ಬ್ರಾಡ್‌ 56, ಹ್ಯಾಝಲ್‌ವುಡ್‌ 95ಕ್ಕೆ 3, ಲಿಯೋನ್‌ 109ಕ್ಕೆ 3, ಕಮಿನ್ಸ್‌ 117ಕ್ಕೆ 3).

ಟಾಪ್ ನ್ಯೂಸ್

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.