ಶೀಘ್ರವೇ ಕೌರ್ಗೆ ಡಿಎಸ್ಸಿ ಹುದ್ದೆ: ಪಂಜಾಬ್ ಸಿಎಂ
Team Udayavani, Jan 21, 2018, 12:54 PM IST
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ವುಮನ್ ಹರ್ಮನ್ಪ್ರೀತ್ ಕೌರ್ ಅವರನ್ನು ವೃತ್ತಿಯಿಂದ ಬಿಡುಗಡೆಗೊಳಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರೈಲ್ವೇಸ್ಗೆ ಸೂಚನೆ ನೀಡಿದ್ದಾರೆ. ಹಾಗೇ ಶೀಘ್ರವೇ “ಡಿಎಸ್ಪಿ’ ಹುದ್ದೆಗೆ ಸೇರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಹರ್ಮನ್ಪ್ರೀತ್ ಕೌರ್ ರೈಲ್ವೇಸ್ ಜತೆ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಹುದ್ದೆ ತೊರೆಯಬೇಕಾದರೆ ದಂಡವಾಗಿ 27 ಲಕ್ಷ ರೂ. ಅನ್ನು ಕಟ್ಟಬೇಕಾಗಿದೆ. ಹೀಗಾಗಿ ಕೌರ್ ರೈಲ್ವೇಸ್ ಹುದ್ದೆಯನ್ನು ತೊರೆಯುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ರೈಲ್ವೇಸ್ ಜತೆ ಮಾತುಕತೆ ನಡೆಸಲಾಗಿದೆ. ಶೀಘ್ರವೇ ಡಿಎಸ್ಪಿ ಹುದ್ದೆ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಲಂಡನ್ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಕೌರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ದರು. ಈ ಮೂಲಕ ಭಾರತ ತಂಡ ರನ್ನರ್ ಅಪ್ ಸ್ಥಾನ ಪಡೆಯಲು ನೆರವಾಗಿದ್ದರು. ಆ ನಂತರ ಪಂಜಾಬ್ ಸರ್ಕಾರ ಕೌರ್ಗೆ 5 ಲಕ್ಷ ರೂ. ಬಹುಮಾನ ಮತ್ತು ಡಿಎಸ್ಪಿ ಹುದ್ದೆಯನ್ನು ಘೋಷಿಸಿತ್ತು.