ಬಿಸಿಸಿಐ ಅಧ್ಯಕ್ಷರ ಖರ್ಚನ್ನೇ ಭರಿಸಲ್ಲ ಎಂದ ಸಿಒಎ
Team Udayavani, Jun 21, 2018, 7:15 AM IST
ನವದೆಹಲಿ: ಬಿಸಿಸಿಐನ ನಿಯೋಜಿತ ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ನಡುವೆ ಮತ್ತೂಂದು ಸುತ್ತಿನ ತಿಕ್ಕಾಟ ಆರಂಭವಾಗಿದೆ. ಹಂತಹಂತವಾಗಿ ಬಿಸಿಸಿಐನ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳುತ್ತಿರುವ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿಗೇ ಆಘಾತ ನೀಡಿದ್ದಾರೆ.
ಜೂ.28ರಿಂದ ಜು.2ರವರೆಗೆ ನಡೆಯುವ ಐಸಿಸಿ ವಾರ್ಷಿಕ ಸಭೆ ನಂತರ 3 ಟಿ20 ಪಂದ್ಯ ನೋಡಿ ಭಾರತಕ್ಕೆ ವಾಪಸಾಗುತ್ತೇನೆಂದು ಅಮಿತಾಭ್ ಹೇಳಿದ್ದಾರೆ. ಅದನ್ನು ಆಡಳಿತಾಧಿಕಾರಿಗಳು ಖಂಡತುಂಡವಾಗಿ ನಿರಾಕರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಆಡುವ 3 ಟಿ20 ಪಂದ್ಯ ನೋಡಲು ನೀವು ಮುಂಚಿತವಾಗಿ ಅನುಮತಿ ತೆಗೆದುಕೊಂಡಿಲ್ಲ. ಜೊತೆಗೆ ನಿಮ್ಮ ಕೆಲಸದಲ್ಲಿ ನಮಗೆ ಯಾವ ಮಹತ್ವವೂ ಕಾಣುತ್ತಿಲ್ಲ. ಆದ್ದರಿಂದ ಐಸಿಸಿ ಸಭೆಯ ನಂತರ ನಾವು ಖರ್ಚನ್ನು ಭರಿಸಲು ಸಾಧ್ಯವಿಲ್ಲ ಎಂದು ಆಡಳಿತಾಧಿಕಾರಿಗಳು ಹೇಳಿದ್ದಾರೆ. ಇದು ಇಬ್ಬಣಗಳ ನಡುವೆ ಮತ್ತೂಂದು ಘರ್ಷಣೆಗೆ ಕಾರಣವಾಗಲಿದೆ.