ಚೆಂಡು ವಿರೂಪ: ನಿಷೇಧದ ವಿರುದ್ಧ ಚಂಡಿಮಲ್ ಮನವಿ
Team Udayavani, Jun 22, 2018, 11:49 AM IST
ದುಬೈ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧ ಒಂದು ಟೆಸ್ಟ್ ಪಂದ್ಯದ ನಿಷೇಧ ಹೇರಿ ರುವ ಅಂತಾರಾ ಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಆದೇಶದ ವಿರುದ್ಧ ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಲ್ ಐಸಿಸಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚಂಡಿಮಲ್, ತಮ್ಮ ಜೇಬಿನಿಂದ ಬಾಯಿಗೆ ಪದಾ ರ್ಥವೊಂದನ್ನು ಹಾಕಿ ಅಗಿದು ಅದರಿಂದ ಬಂದ ಸಿಹಿ ದ್ರವ್ಯವನ್ನು ಚೆಂಡಿಗೆ ಅಂಟಿಸಿ ವಿರೂಪಗೊಳಿಸಿ ದ್ದಾಗಿ,ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್, ಐಸಿಸಿಗೆ ವರದಿ ನೀಡಿದ್ದರು. ಇದನ್ನು ಚಂಡಿಮಲ್ ವಿರೋಧಿಸಿದ್ದರು.