ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕ್ ವಿರುದ್ಧ ಭಾರತ 4-0 ಜಯಭೇರಿ
Team Udayavani, Jun 24, 2018, 6:00 AM IST
ಬ್ರೆಡಾ (ಹಾಲೆಂಡ್): ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 4-0 ಗೋಲುಗಳ ಭರ್ಜರಿ ಅಂತರದಲ್ಲಿ ಪರಾಭವಗೊಳಿಸಿದೆ.
ಶನಿವಾರ ಇಲ್ಲಿನ ಬಿಎಚ್ ಆ್ಯಂಡ್ ಬಿಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 26ನೇ ನಿಮಿಷದಲ್ಲಿ ರಮಣ್ದೀಪ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ಅನಂತರ 54ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ದ್ವಿತೀಯ ಗೋಲು ಗಳಿಸಿದರೆ, ಮೂರನೇ ಗೋಲನ್ನು 57ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಹೊಡೆದರು. ನಾಲ್ಕನೇ ಗೋಲನ್ನು ಲಲಿತ್ ಉಪಾಧ್ಯಾಯ್ ಅವರು ಪಂದ್ಯದ 60ನೇ ನಿಮಿಷದಲ್ಲಿ ಸಿಡಿಸಿ ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಈವರೆಗೆ ಒಮ್ಮೆಯೂ ಚಾಂಪಿಯನ್ಸ್ ಟ್ರೋಫಿ ಗೆಲ್ಲದ ಭಾರತಕ್ಕೆ ಈ ಪಂದ್ಯಾವಳಿ ಸವಾಲಿನದ್ದಾಗಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ರವಿವಾರ ಆಡಲಿದೆ.
ಪಾಕ್ ಗೋಲಿ ಹಿಂದಕ್ಕೆ!
ಪಂದ್ಯ ಮುಗಿಯಲು ಇನ್ನೇನು ಐದು ನಿಮಿಷ ಇದ್ದಾಗ ಪಾಕಿಸ್ಥಾನ ತನ್ನ ಗೋಲ್ ಕೀಪರ್ನನ್ನೇ ವಾಪಸ್ ಕರೆಸಿಕೊಳ್ಳುವ ವಿಚಿತ್ರ ತೀರ್ಮಾನ ಕೈಗೊಂಡಿತು. ಇದರ ಬದಲು ಅಂಕಣದಲ್ಲಿದ್ದ ಆಟಗಾರರಿಗೆ ಹೆಚ್ಚುವರಿಯಾಗಿ ಮತ್ತೂಬ್ಬ ಆಟಗಾರರನ್ನು ಕೊಡಲಾಯಿತು. ಇದು ಪಾಕ್ಗೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸಿತು ಎಂದು “ಜಿಯೋ ಟಿವಿ’ ವರದಿ ಮಾಡಿದೆ. ಇದರ ಲಾಭ ಪಡೆದ ಭಾರತೀಯ ಆಟಗಾರರು ಈ ಕೊನೆ ಐದು ನಿಮಿಷಗಳಲ್ಲಿ ಮತ್ತೆರಡು ಗೋಲುಗಳನ್ನು ಬಾರಿಸಿ, ಭರ್ಜರಿ ಗೆಲುವು ಸಾಧಸಿದರು.ಆದರೆ ಪಾಕಿಸ್ಥಾನ ತನ್ನ ಗೋಲ್ಕೀಪರ್ನನ್ನು ಆಚೆ ಕರೆಸಿಕೊಂಡಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ