ಮಲೇಶ್ಯ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ದ್ವಿತೀಯ ಸುತ್ತಿಗೆ
Team Udayavani, Jun 28, 2018, 6:00 AM IST
ಜಕಾರ್ತಾ: ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ “ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ ದ್ವಿತೀಯ ಸುತ್ತಿಗೆ ಕಾಲಿಟ್ಟಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೆಣಸಿದ ಸಿಂಧು, ಜಪಾ ನ್ನ ಅಯಾ ಒಹೋರಿ ವಿರುದ್ಧ 26 -24, 21- 15 ಅಂತರದ ಜಯ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ಸಿಂಧು ಸ್ಥಳೀಯ ಆಟಗಾರ್ತಿ ಯಿಂಗ್ಯಿಂಗ್ ಲೀ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕೆ. ಶ್ರೀಕಾಂತ್ ಡೆನ್ಮಾರ್ಕ್ನ ಜಾನ್ ಒ ಜರ್ಗೆ ನ್ಸನ್ ಅವರನ್ನು 21 -18, 21- 9 ಅಂತರದಿಂದ ಮಣಿಸಿ ಮುನ್ನಡೆದರು. ದ್ವಿತೀಯ ಸುತ್ತಿನಲ್ಲಿ ಅವರು ಚೈನೀಸ್ ತೈಪೆಯ ವಾಂಗ್ ತ್ಸು ವೆಯ್ ವಿರುದ್ಧ ಸೆಣಸಲಿದ್ದಾರೆ.
ಸಮೀರ್, ಪ್ರಣೀತ್ಗೆ ನಿರಾಸೆ
ಭಾರತೀಯ ಮತ್ತಿಬ್ಬರು ಆಟಗಾರರಾದ ಸಾಯಿ ಪ್ರಣೀತ್ ಮತ್ತು ಸಮೀರ್ ವರ್ಮ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ. ಸಾಯಿ ಪ್ರಣೀತ್ ಅವರು ಚೈನೀಸ್ ತೈಪೆಯ ವಾಂಗ್ ತ್ಸು ವೆಯ್ ವಿರುದ್ಧ 12-21, 7-21ಅಂತರದಲ್ಲಿ ಸೋತರೆ, ಸಮೀರ್ ಇಂಡೋ ನೇಶ್ಯದ ಟಾಮಿ ಸುಗಿಯಾತೊ ವಿರುದ್ಧ 13-21, 5-21 ಅಂತರದಿಂದ ಪರಾಭವಗೊಂಡರು.
ಸೈನಾಗೆ ಯಮಗುಚಿ ಎದುರಾಳಿ
ಮಹಿಳಾ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ ಹಾಂಕಾಂಗ್ನ ಯಿಪ್ಯಿನ್ ವಿರುದ್ಧ ಗೆಲುವು ಪಡೆದು ದ್ವಿತೀಯ ಸುತ್ತಿಗೆ ಏರಿದ್ದ ಸೈನಾ, ಜಪಾನ್ನ ಅಕಾನೆ ಯಮಾಗುಚಿ ವಿರುದ್ಧ ಸೆಣಸಲಿದ್ದಾರೆ. ಈವರೆಗೆ ಇವರಿಬ್ಬರೂ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಯಮಾಗುಚಿ 5 ಬಾರಿ ಗೆಲುವು ಸಾಧಿಸಿದರೆ, ಸೈನಾ ಕೇವಲ ಒಮ್ಮೆ ಮಾತ್ರ ಗೆದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್