ಯುಪಿ ಕ್ರಿಕೆಟ್ನಲ್ಲಿ ಬಿರುಗಾಳಿ ಸಂಕಟದಲ್ಲಿ ಬಿಸಿಸಿಐ
Team Udayavani, Jul 20, 2018, 6:25 AM IST
ಹೊಸದಿಲ್ಲಿ: ಹಗರಣಗಳಿಗೆ ಸಿಲುಕಿ ಒಳಗೊಳಗೇ ಕುದಿಯುತ್ತಿರುವ ಬಿಸಿಸಿಐನಲ್ಲಿ ಮತ್ತೂಂದು ಬಿರುಗಾಳಿ ಎದ್ದಿದೆ. ಆದರೆ ಪ್ರಕರಣ ನೇರವಾಗಿ ತನಗೆ ಸಂಬಂಧಿಸಿದ್ದಲ್ಲ ಎನ್ನುವುದು ಸದ್ಯ ಬಿಸಿಸಿಐಗೆ ಸಮಾಧಾನದ ಸಂಗತಿ.
ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ನಿರ್ದೇಶಕ ರಾಜೀವ್ ಶುಕ್ಲ ಅವರ ಕಾರ್ಯದರ್ಶಿ ಮೊಹಮ್ಮದ್ ಅಕ್ರಮ್ ಸೈಫಿ ಅವರು ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಹಲವು ಬೇಡಿಕೆಯಿಟ್ಟಿದ್ದಾರೆ. ಹಣ ಮತ್ತು ಸ್ತ್ರೀಯರನ್ನು ಪೂರೈಸಿದರೆ ಆಯ್ಕೆ ಖಚಿತವೆಂದಿದ್ದಾರೆಂದು ಹಿಂದಿ ಟೀವಿ ವಾಹಿನಿಯೊಂದು ತನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದೆ. ಇದು ಸಂಚಲನ ಸೃಷ್ಟಿಸಿದ್ದು, ಅಕ್ರಮ್ ಸೈಫಿಯನ್ನು ಅಮಾನತು ಮಾಡಿ ಬಿಸಿಸಿಐ ತನಿಖೆಗೆ ಆದೇಶಿಸಿದೆ.
ಹಿಂದಿ ವಾಹಿನಿ ನ್ಯೂಸ್ 1 ರಹಸ್ಯ ಕಾರ್ಯಾಚರಣೆ ಮೂಲಕ ಕ್ರಿಕೆಟಿಗ ರಾಹುಲ್ ಶರ್ಮರೊಂದಿಗೆ ಅಕ್ರಮ್ ಸೈಫಿ ನಡೆಸಿ
ದ್ದಾರೆನ್ನಲಾದ ದೂರವಾಣಿ ಸಂಭಾಷಣೆಯನ್ನು ಬಹಿರಂಗಪಡಿ ಸಿತ್ತು. ಈ ಸಂಭಾಷಣೆ ಬುಧವಾರ ಪ್ರಸಾರವಾಗಿತ್ತು. ಸಂಭಾಷಣೆಯಲ್ಲಿ ಹಲವು ಸ್ಫೋಟಕ ಸಂಗತಿಗಳಿವೆ. ಒಂದು ವೇಳೆ ಇವು ಸಾಬೀತಾದರೆ ಭಾರತೀಯ ಕ್ರಿಕೆಟ್ನಲ್ಲಿ ಇನ್ನಷ್ಟು ದೊಡ್ಡ ತಲೆಗಳು ಉರುಳುವುದು ಖಚಿತವೆನ್ನಲಾಗಿದೆ.
ಸಂಭಾಷಣೆಯಲ್ಲೇನಿದೆ?
ಸಂಭಾಷಣೆಯಲ್ಲಿ ರಾಹುಲ್ ಶರ್ಮರನ್ನು ಸದ್ಯ ದಲ್ಲೇ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಸೈಫಿ ನೀಡಿದ್ದಾರೆ. ಆದರೆ ಅದಕ್ಕಾಗಿ ಹೊಸದಿಲ್ಲಿ ಹೊಟೇಲ್ಗೆ ಸ್ತ್ರೀಯೊಬ್ಬಳ್ಳನ್ನು ಕಳುಹಿಸಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಧ್ವನಿಮುದ್ರಣವನ್ನು ನೀಡುವಂತೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳದ ಮುಖ್ಯಸ್ಥ ಅಜಿತ್ ಸಿಂಗ್ ಹಿಂದಿ ವಾಹಿನಿಗೆ ಮನವಿ ಮಾಡಿದ್ದಾರೆ.
ಮತ್ತೂಂದು ಕಡೆ ಸೈಫಿ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಯದುವೀರ್ ಸಿಂಗ್, ರಾಹುಲ್ ಶರ್ಮ ಭಾರತ ತಂಡದಲ್ಲಿ ಆಡಿಲ್ಲ, ಉತ್ತರಪ್ರದೇಶದ ಸಂಭಾವ್ಯರ ಪಟ್ಟಿಯಲ್ಲೂ ಸ್ಥಾನ ಪಡೆದಿಲ್ಲ. ಅವರಿಗೆ ಯಾವ ಮಹತ್ವವೂ ಇಲ್ಲ. ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಈ ಇಬ್ಬರ ನಡುವೆ ನಡೆದ ಮಾತುಕತೆ ಅವರ ಖಾಸಗಿ ವಿಚಾರ. ಅದಕ್ಕೂ ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಸೈಫಿಗೂ ನಮಗೂ ಸಂಬಂಧವಿಲ್ಲ
ಇದೇ ವೇಳೆ ತನಗೂ ಸೈಫಿಗೂ ಸಂಬಂಧವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ತಮಗೆ ಬೇಕಾಗಿರುವ ಕಾರ್ಯದರ್ಶಿಯನ್ನು ಆಯ್ಕೆ ಮಾಡಿಕೊಳ್ಳುವುದು ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಪಟ್ಟಿದ್ದು. ಆದರೆ ಆ ಕಾರ್ಯದರ್ಶಿಗಳ ಸಂಬಳವನ್ನು ಬಿಸಿಸಿಐ ಪಾವತಿಸುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಪಟ್ಟಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಉತ್ತರಪ್ರದೇಶ ಮಾಜಿ ನಾಯಕ ಮೊಹಮ್ಮದ್ ಕೈಫ್ ಆಘಾತ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರನ್ನು ಭ್ರಷ್ಟಾಚಾರಿಗಳು ತುಳಿಯುತ್ತಿದ್ದಾರೆ. ರಾಜೀವ್ ಶುಕ್ಲ ಅವರು ಈ ಪ್ರಕರಣದಲ್ಲಿ ಮುಕ್ತ ತನಿಖೆ ನಡೆಸುತ್ತಾರೆ. ಯುವ ಪ್ರತಿಭೆಗಳಿಗೆ ನ್ಯಾಯ ಒದಗಿಸುತ್ತಾರೆಂಬ ಭರವಸೆಯಿದೆ ಎಂದಿದ್ದಾರೆ.
ಯಾರು ಈ ರಾಹುಲ್ ಶರ್ಮ?
ರಾಹುಲ್ ಶರ್ಮ ಉತ್ತರಪ್ರದೇಶದ ಕ್ರಿಕೆಟಿಗ. ಅವರಿನ್ನೂ ಉತ್ತರಪ್ರದೇಶವನ್ನೇ ರಣಜಿಯಲ್ಲಿ ಪ್ರತಿನಿಧಿಸಿಲ್ಲ. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಅವರು ಸೈಫಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಸೈಫಿ ಲಂಚ ಕೇಳಿದ್ದಾರೆ, ತಂಡದಲ್ಲಿ ಆಯ್ಕೆ ಮಾಡಿಕೊಳ್ಳಲು ಇನ್ನಿತರ ಆಮಿಷಗಳನ್ನೂ ಒಡ್ಡಿದ್ದಾರೆ. ಅವರು ನಕಲಿ ವಯೋಮಿತಿ ಪ್ರಮಾಣಪತ್ರ ನೀಡುತ್ತಾರೆಂದು ರಾಹುಲ್ ಆರೋಪಿಸಿದ್ದಾರೆ.
ವಿಚಾರಣಾಧಿಕಾರಿ ನೇಮಕ
ಇನ್ನೆರಡು ದಿನದೊಳಗೆ ವಿಚಾರಣಾಧಿಕಾರಿ ನೇಮಕ ಮಾಡಲಾಗುತ್ತದೆ. ಅವರು 15 ದಿನದೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು. ಇದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಸೈಫಿ ಅಮಾನತಿನಲ್ಲಿರುತ್ತಾರೆಂದು ಬಿಸಿಸಿಐ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ