ಖೇಲೋ ಇಂಡಿಯಾ ಬಂಪರ್ ಯೋಜನೆ
Team Udayavani, Jul 24, 2018, 10:53 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಆರಂಭಿಸಿದ ಖೇಲೋ ಇಂಡಿಯಾ ಯೋಜನೆ ಪ್ರಸಕ್ತ ಋತುವಿನಿಂದ ಇನ್ನಷ್ಟು ಆಶಾದಾಯಕ ವಾಗಲಿದೆ. “ಖೇಲೋ ಇಂಡಿಯಾ ಟ್ಯಾಲೆಂಟ್ ಐಡೆಂಟಿಫಿಕೇಶನ್ ಡೆವಲಪ್ಮೆಂಟ್’ (ಟಿಐಸಿ) ಯೋಜನೆಯಡಿ ದೇಶದ 734 ಮಂದಿ ಯುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ (ಸಾಯ್) ಸ್ಕಾಲರ್ಶಿಪ್ ನೀಡಲು ಯೋಜಿಸಿದೆ. ಭಾರತೀಯ ಕ್ರೀಡಾರಂಗದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸರಕಾರ ತೀರ್ಮಾನಿಸಿದ್ದು, ಕ್ರೀಡಾಪಟು
ಗಳು ಇದರ ಭರಪೂರ ಪ್ರಯೋ ಜನ ಪಡೆದುಕೊಳ್ಳಬೇಕು ಎಂದು ಈ ಸಂದರ್ಭ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದರು.
ಸ್ಕಾಲರ್ಶಿಪ್ ಪಡೆಯುವ ಕ್ರೀಡಾ ಪಟುಗಳು ಖೇಲೋ ಇಂಡಿಯಾದಿಂದ ಮಾನ್ಯತೆ ಪಡೆದ ಅಕಾಡೆಮಿ ಗಳಲ್ಲಿ ಉಚಿತ ತರಬೇತಿ ಪಡೆಯ ಲಿದ್ದಾರೆ. 385 ಬಾಲಕರು ಹಾಗೂ 349 ಬಾಲಕಿಯರ ಯಾದಿ ಈಗಾಗಲೇ ಅಂತಿಮಗೊಂಡಿದ್ದು, ಇವರೆಲ್ಲ ವಾರ್ಷಿಕ 1.2 ಲಕ್ಷ ರೂ. ಸ್ಕಾಲರ್ಶಿಪ್ ಪಡೆಯಲಿದ್ದಾರೆ. ಇದರಂತೆ ಪ್ರತೀ 3 ತಿಂಗಳಿಗೊಮ್ಮೆ 30 ಸಾವಿರ ರೂ. ಲಭಿಸಲಿದೆ. ಆಟಗಾರರ ಖರ್ಚು, ಚಿಕಿತ್ಸೆ, ಖಾಸಗಿ ಪ್ರಯಾಣ ಮೊದಲಾದ ವೆಚ್ಚಗಳಿಗೆ ಈ ಮೊತ್ತವನ್ನು ಬಳಸಿಕೊಳ್ಳಬಹುದಾಗಿದೆ. ಸ್ಕಾಲರ್ಶಿಪ್ ಪಡೆಯಲಿರುವ ಕ್ರೀಡಾ ಪ್ರತಿಭೆಗಳ ಯಾದಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್