ದುಲೀಪ್ ಟ್ರೋಫಿ: ನಿಷೇಧಿತ ಕ್ರಿಕೆಟಿಗ ಅಭಿಷೇಕ್ ಗುಪ್ತಾ ಹೊರಕ್ಕೆ
Team Udayavani, Jul 25, 2018, 6:00 AM IST
ಹೊಸದಿಲ್ಲಿ: ಸೋಮವಾರ ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ ಪ್ರಕಟಿಸಲಾದ ತಂಡವೊಂದರಲ್ಲಿ ಪಂಜಾಬ್ನ ನಿಷೇಧಿತ ವಿಕೆಟ್ ಕೀಪರ್ ಅಭಿಷೇಕ್ ಗುಪ್ತಾ ಅವರನ್ನು ಸೇರಿಸಿಕೊಂಡಿದ್ದ ಬಿಸಿಸಿಐ, ಈಗ ಈ ಪ್ರಮಾದವನ್ನು ಸರಿಪಡಿಸಿಕೊಂಡಿದೆ. ಅಭಿಷೇಕ್ ಗುಪ್ತಾ ಅವರನ್ನು ತಂಡದಿಂದ ಹೊರಗಿರಿಸಿದೆ. ಅಭಿಷೇಕ್ ಗುಪ್ತಾ ಬದಲು ವಿದರ್ಭ ತಂಡದ ಅಕ್ಷಯ್ ವಾಡ್ಕರ್ ಅವರನ್ನು “ಇಂಡಿಯಾ ರೆಡ್’ ತಂಡಕ್ಕೆ ಸೇರಿಸಿಕೊಂಡಿದೆ.
ಕಳೆದ ಋತುವಿನ “ಸಯ್ಯದ್ ಮುಷ್ತಾಕ್ ಅಲಿ ಕ್ರಿಕೆಟ್ ಪಂದ್ಯಾವಳಿ’ಯ ವೇಳೆ ಉದ್ದೀಪನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಅಭಿಷೇಕ್ ಗುಪ್ತಾ ಅವರಿಗೆ ಬಿಸಿಸಿಐ 8 ತಿಂಗಳ ನಿಷೇಧ ವಿಧಿಸಿತ್ತು. 2018ರ ಜನವರಿ 15ರಿಂದ ಈ ನಿಷೇಧ ಜಾರಿಗೆ ಬಂದಿದ್ದು, ಸೆಪ್ಟಂಬರ್ 14ರ ನಡುರಾತ್ರಿ ಮುಗಿಯುತ್ತಿತ್ತು. ಆದರೆ ಆ. 17ರಿಂದ ಸೆ. 8ರ ವರೆಗೆ ನಡೆಯುವ ದುಲೀಪ್ ಟ್ರೋಫಿ ಪಂದ್ಯಾವಳಿಗಾಗಿ ಅಭಿಷೇಕ್ ಗುಪ್ತಾ ಅವರನ್ನು ಸೇರಿಸಿಕೊಂಡದ್ದು ದೊಡ್ಡ ಎಡವಟ್ಟಿಗೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ